ಆ್ಯಪ್ನಗರ

'ದಿ ವಿಲನ್' ಯಶಸ್ಸಿಗೆ ಕೋಣ ಬಲಿ ಕೊಟ್ಟ ಹುಚ್ಚು ಅಭಿಮಾನಿಗಳು

ನನಗೂ ನೋಡಿ ಹೊಟ್ಟೆ ಉರಿಯಿತು. ದಯವಿಟ್ಟು ಯಾರೇ ಅಭಿಮಾನಿಗಳಾಗಲಿ ಈ ರೀತಿ ಪ್ರಾಣಿ ಬಲಿ ನೀಡಬೇಡಿ. ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಈ ರೀತಿ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

Vijaya Karnataka Web 20 Oct 2018, 11:11 pm
ಅಭಿಮಾನಿಗಳ ಹುಚ್ಚುತನಕ್ಕೆ, ಕುರುಡು ಅಭಿಮಾನಕ್ಕೆ ಮೂಕ ಜೀವಗಳು ಬಲಿಯಾಗಿದೆ. ದಿ ವಿಲನ್ ಚಿತ್ರ ಯಶಸ್ವಿಯಾಗಲಿ ಎಂಬ ಕಾರಣಕ್ಕೆ ದಾವಣಗೆರೆಯಲ್ಲಿ ಕೋಣ ಮತ್ತು ಕುರಿಯೊಂದನ್ನು ಬಲಿ ನೀಡಿ ರಕ್ತವನ್ನು ಪೋಸ್ಟರ್‌ಗೆ ತರ್ಪಣ ಮಾಡಿರುವ ಮನಕಲುಕುವ ಘಟನೆ ನಡೆದಿದೆ.
Vijaya Karnataka Web the-villain1


ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಪ್ರಜ್ಞಾವಂತರ ಮನಸ್ಸಿಗೆ ನೋವುಂಟು ಮಾಡಿದೆ. ಅಭಿಮಾನಿಗಳ ಇದೆಂತಹ ಹುಚ್ಚು ಅಭಿಮಾನ, ನಾಚಿಕೆಗೇಡಿನ ಸಂಗತಿ ಎಂದು ಪ್ರಜ್ಞಾವಂತ ನಾಗರಿಕರು ಮಮ್ಮಲ ಮರುಗಿದ್ದಾರೆ.


ದಿ ವಿಲನ್ ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಜನರು ಚಿತ್ರದ ಪೋಸ್ಟರ್‌ಗೆ ಕೋಣ ಮತ್ತು ಆಡು ಬಲಿ ನೀಡಿದ ರಕ್ತದಿಂದ ಅಭಿಷೇಕ ಮಾಡಿರುವ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ದಯವಿಟ್ಟು ಯಾರೂ ಪ್ರಾಣಿ ಬಲಿ ನೀಡುವುದು ಮತ್ತು ಹಿಂಸಾತ್ಮಕ ಕೃತ್ಯ ನಡೆಸಬಾರದು ಎಂದು ಕೇಳಿಕೊಂಡಿದ್ದಾರೆ.

"ನನಗೂ ನೋಡಿ ಹೊಟ್ಟೆ ಉರಿಯಿತು. ದಯವಿಟ್ಟು ಯಾರೇ ಅಭಿಮಾನಿಗಳಾಗಲಿ ಈ ರೀತಿ ಪ್ರಾಣಿ ಬಲಿ ನೀಡಬೇಡಿ. ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಈ ರೀತಿ ಮಾಡಬೇಡಿ" ಎಂದು ವಿನಂತಿಸಿಕೊಂಡಿದ್ದಾರೆ.


ಇದು ತಪ್ಪು. ಇದೇ ರೀತಿ ಜೋಗಯ್ಯ ಸಿನಿಮಾ ಬಿಡುಗಡೆಯಾದಾಗ ಕುರಿ ಬಲಿ ನೀಡಲು ಹೋಗಿದ್ದರು. ದಯವಿಟ್ಟು ಆ ರೀತಿ ಮಾಡಬೇಡಿ ಎಂದು ವಿನಂತಿಸಿಕೊಂಡ ಬಳಿಕ ಅವರು ಬಿಟ್ಟಿದ್ದರು. ಗೋಮಾತೆಯನ್ನು ನಾವು ಪೂಜಿಸುತ್ತೇವೆ. ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ ಪ್ರೇಮ್.

ನನಗೂ ನೋಡಿ ಹೊಟ್ಟೆ ಉರಿಯಿತು. ದಯವಿಟ್ಟು ಯಾರೇ ಅಭಿಮಾನಿಗಳಾಗಲಿ ಈ ರೀತಿ ಪ್ರಾಣಿ ಬಲಿ ನೀಡಬೇಡಿ. ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಈ ರೀತಿ ಮಾಡಬೇಡಿ.
ಪ್ರೇಮ್, ದಿ ವಿಲನ್ ಚಿತ್ರದ ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌