ಆ್ಯಪ್ನಗರ

ವಿಲ್‌ ಪವರ್‌ ಇದ್ದರೆ ಕ್ಯಾನ್ಸರ್‌ ಗೆಲ್ಲುವುದು ಕಷ್ಟವಲ್ಲ ಎಂದ ತಾರೆಯರು

ಇಂದು ವಿಶ್ವ ಕ್ಯಾನ್ಸರ್‌ ದಿನ. ಎಲ್ಲೆಲ್ಲೂ ಈ ಕಾಯಿಲೆ ಬಗ್ಗೆಯೇ ಚರ್ಚೆಯಾಗುತ್ತಿದೆ. ಜತೆಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ವೇಳೆ ಸ್ಯಾಂಡಲ್‌ವುಡ್‌ ತಾರೆಯರು ಕೂಡ ಕ್ಯಾನ್ಸರ್‌ ವಿರುದ್ಧ ಹೋರಾಡಲು ಧೈರ್ಯದ ಮಾತುಗಳನ್ನಾಡಿದ್ದಾರೆ.

Vijaya Karnataka 4 Feb 2019, 8:00 am
ವಿಲ್‌ ಪವರ್‌ ಇದ್ದರೆ ಏನನ್ನಾದರೂ ಜಯಿಸಬಹುದು. ಕ್ಯಾನ್ಸರ್‌ ಅನ್ನು ಕೂಡ. ಹೀಗೆಂದು ಅಭಿಪ್ರಾಯಪಟ್ಟಿದ್ದಾರೆ ಸ್ಯಾಂಡಲ್‌ವುಡ್‌ನ ವಿವಿಧ ತಾರೆಯರು.
Vijaya Karnataka Web Bharjari_(154)


ಕಾಯಿಲೆ ಬಂದ ಕೂಡಲೇ ಹೆದರಿ ಓಡಬಾರದು. ಬದುಕಿನ ಬಗ್ಗೆ ಭರವಸೆಯನ್ನೂ ಕಳೆದುಕೊಳ್ಳಬಾರದು. ಕ್ಯಾನ್ಸರ್‌ ಮಹಾಮಾರಿ ಎನ್ನುವುದೇನೋ ನಿಜ. ಅದರೆ ಗಟ್ಟಿ ಮನಸ್ಸಿನಿಂದ ಹೋರಾಡಿದರೆ ಆ ಮಾರಿಯನ್ನು ಗೆಲ್ಲಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಲ್‌ ಪವರ್‌ ಮುಖ್ಯ

ಪ್ರತಿಯೊಂದು ಕಾಯಿಲೆಗೂ ಚಿಕಿತ್ಸೆ ಇದೆ ಎಂದು ನಂಬಿರುವವಳು ನಾನು. ಕ್ಯಾನ್ಸರ್‌ನಿಂದ ಪೂರ್ಣ ಗುಣಮುಕ್ತರಾಗಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಇದಕ್ಕೆ ಈಗ ಮೆಡಿಸಿನ್‌ ಕಂಡು ಹಿಡಿದಿದ್ದಾರೆ ಎಂದು ಓದಿದ್ದೇನೆ. ಮುಖ್ಯವಾಗಿ ರೋಗಿಯು ಧೈರ್ಯವಾಗಿ ಎದುರಿಸಬೇಕು. ಮಾನಸಿಕವಾಗಿ ಸ್ಟ್ರಾಂಗ್‌ ಆಗಿರಬೇಕು. ಪಾಸಿಟಿವ್‌ ಆಗಿ ಯೋಚಿಸಬೇಕು. ವಿಲ್‌ ಪವರ್‌ ಬಹಳ ಮುಖ್ಯ. ಖುಷಿಯಾಗಿರಲು ಪ್ರಯತ್ನಿಸಬೇಕು. ಹೆದರಿ ಮನೆಯಲ್ಲಿ ಕೂತರೆ ಕಾಯಿಲೆ ಇನ್ನೂ ಹೆಚ್ಚು ಕಾಡುತ್ತದೆ. ಅಲ್ಲದೆ, ನಮ್ಮ ಲೈಫ್‌ಸ್ಟೈಲ್‌ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು ಎಂದು ನಟಿ ರಚಿರಾ ರಾಮ್‌ ಹೇಳಿದ್ದಾರೆ.

ಗೆದ್ದವರ ಕಥೆ ಕೇಳೋಣ

ಮೊದಲು ಕ್ಯಾನ್ಸರ್‌ ಬಂದರೆ ಉಳಿಯೋದೇ ಇಲ್ಲ ಎನ್ನುವ ಮಾತಿತ್ತು. ಜನ ಡಿಪ್ರೆಸ್‌ ಆಗಿಬಿಡುತ್ತಿದ್ದರು. ಈಗ ಕ್ಯಾನ್ಸರ್‌ ಬಗ್ಗೆ ಬಹಳ ಮಾಹಿತಿ ಸಿಗುತ್ತಿದೆ. ಚಿಕಿತ್ಸೆಯೂ ಇದೆ. ವಿಜ್ಞಾನ ತುಂಬಾ ಮುಂದುವರಿದಿದೆ. ಕಾಯಿಲೆ ಬಂದ ಕೂಡಲೇ ಸೋತೆವು ಎಂದಲ್ಲ. ಸ್ಟ್ರಾಂಗ್‌ ಆಗಿ ಎದುರಿಸಬೇಕು. ಬಹಳ ಜನ ಕ್ಯಾನ್ಸರ್‌ ಜತೆ ಹೋರಾಡಿ ಗೆದ್ದು ಆರೋಗ್ಯಕರವಾಗಿ ಜೀವನ ನಡೆಸಿದ್ದಾರೆ. ಅವರೆಲ್ಲರೂ ಸ್ಫೂರ್ತಿಯಾಗಲಿ. ಹಾಗೆ ಗೆದ್ದು ಬದುಕಿದವರ ಕಥೆಗಳನ್ನು ನಾವೆಲ್ಲರೂ ಕೇಳೋಣ. ಎಲ್ಲರಿಗೂ ಹೇಳೋಣ ಎಂದಿದ್ದಾರೆ ನಟಿ ಆಶಿಕಾ ರಂಗನಾಥ್‌.

ಕ್ಯಾನ್ಸರ್‌ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇದಕ್ಕೆ ನಮ್ಮ ಆಹಾರ ಕ್ರಮ, ಜೀವನ ಶೈಲಿ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಸಾತ್ವಿಕ ಆಹಾರ, ಸಸ್ಯಾಹಾರ ಸೇವಿಸುವುದು ಉತ್ತಮ. ಮನೆಯಲ್ಲಿ ತಯಾರಿಸಿದ ಅಡುಗೆ ಎಂದಿಗೂ ಆರೋಗ್ಯಕರ. ಹಿಂದಿನಂತೆ ಇಂದು ಕ್ಯಾನ್ಸರ್‌ ಮಾರಕ ರೋಗವಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಕ್ಯಾನ್ಸರ್‌ಗೆ ಚಿಕಿತ್ಸೆಯೂ ಲಭ್ಯವಿದೆ. ಮುಖ್ಯವಾಗಿ ಕ್ಯಾನ್ಸರ್‌ ಇರುವವರು ಧೈರ್ಯವಾಗಿ ಇದನ್ನು ಎದುರಿಸಬೇಕು ಎಂದು ನಟ ಚೇತನ್‌ ಸಲಹೆ ಮಾಡಿದ್ದಾರೆ.


ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಅದನ್ನು ಸಮರ್ಥವಾಗಿ ನಿರ್ವಹಿಸಿ. ಅತ್ಯುತ್ತಮ ಜೀವನ ಶೈಲಿ ಜತೆ ನಿಮ್ಮ ಮನಸ್ಸು ಹಾಗೂ ದೇಹದ ನಡುವೆ ಸಮತೋಲನ ಕಾಪಾಡಿಕೊಳ್ಳಿ. ಕ್ಯಾನ್ಸರ್‌ ಬಗ್ಗೆ ಅನಗತ್ಯ ಭಯ ಬೇಡ. ಆದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಬಗ್ಗೆ ಜಾಗೃತಿ ಇರಲಿ-ಡಾ. ಗೋಪಿನಾಥ್‌, ಕ್ಯಾನ್ಸರ್‌ ತಜ್ಞ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌