ಆ್ಯಪ್ನಗರ

#MeToo: ಅರ್ಜುನ್‌ ಸರ್ಜಾ-ಶ್ರುತಿ ಕೇಸ್‌; ಸಂಧಾನದಿಂದ ಫಿಲಂ ಚೇಂಬರ್‌ ದೂರ

ಶ್ರುತಿ ಹರಿಹರನ್‌ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ಆದೇಶ ನೀಡುವಂತೆ ನಟ ಅರ್ಜುನ್‌ ಸರ್ಜಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗೆ ಏಕಮುಖವಾಗಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ನಟಿ ಶ್ರುತಿ ಹರಿಹರನ್‌ಗೆ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ಅ.29ಕ್ಕೆ ಮುಂದೂಡಿದೆ.

Vijaya Karnataka 27 Oct 2018, 11:05 am
ಬೆಂಗಳೂರು:
Vijaya Karnataka Web arjun sarja sruthi hariharan

ಮೀ ಟೂ ಸಂಧಾನ ಪ್ರಕ್ರಿಯೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಂದೆ ಸರಿದಿದೆ. ಈ ನಡುವೆ, ನಿರ್ಮಾಪಕರ ಹಿತ ಕಾಯಲು ಪ್ರೊಡ್ಯೂಸರ್‌ ಪ್ರೊಟೆಕ್ಷನ್‌ ಕಮಿಟಿ ರಚಿಸಲು ಮಂಡಳಿ ಮುಂದಾಗಿದೆ.

ಅಂಬರೀಶ್‌ ನೇತೃತ್ವದಲ್ಲಿ ಗುರುವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿನಡೆದ ಸಂಧಾನ ಸಭೆ ವಿಫಲಗೊಂಡಿತ್ತು. ಅರ್ಜುನ್‌ ಸರ್ಜಾ ಮತ್ತು ಶ್ರುತಿ ಹರಿಹರನ್‌ ರಾಜಿಗೆ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಯು, ಇನ್ನು ಮುಂದೆ ಈ ಕುರಿತ ಸಂಧಾನ ಯತ್ನದಲ್ಲಿ ಕೈ ಹಾಕದಿರಲು ನಿರ್ಧರಿಸಿದೆ. ಆದರೆ, ಕಲಾವಿದರ ನಡುವಿನ ತಿಕ್ಕಾಟ ಏನೇ ಇದ್ದರೂ ಇವರಿಂದಾಗಿ ನಿರ್ಮಾಪಕರಿಗೆ ತೊಂದರೆ ಆಗದಿರಲೆಂದು ಪ್ರೊಡ್ಯೂಸರ್‌ ಪ್ರೊಟೆಕ್ಷನ್‌ ಕಮಿಟಿ ರಚನೆ ಮಾಡಲು ತೀರ್ಮಾನಿಸಿದೆ.

ಈ ಸಮಿತಿಯ ರೂಪುರೇಷೆಗಳನ್ನು ಸಿದ್ಧ ಮಾಡಲಾಗುತ್ತಿದೆ ಎಂದು ನಿರ್ಮಾಪಕರ ಸಂಘದ ಕಾರ್ಯದರ್ಶಿ ಭಾ.ಮಾ.ಹರೀಶ್‌ ತಿಳಿಸಿದ್ದಾರೆ.

ನಟಿ ಶ್ರುತಿಗೆ ನೋಟಿಸ್‌: ವಿಚಾರಣೆ 29ಕ್ಕೆ
ಶ್ರುತಿ ಹರಿಹರನ್‌ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ಆದೇಶ ನೀಡುವಂತೆ ನಟ ಅರ್ಜುನ್‌ ಸರ್ಜಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗೆ ಏಕಮುಖವಾಗಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ನಟಿ ಶ್ರುತಿ ಹರಿಹರನ್‌ಗೆ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ಅ.29ಕ್ಕೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌