ಆ್ಯಪ್ನಗರ

ಎರ್ಮಾಯಿ ಫಾಲ್ಸ್‌ಗೆ ಬಿದ್ದು ಚಿತ್ರ ‍ನಿರ್ದೇಶಕ ಸಂತೋಷ್ ಶೆಟ್ಟಿ ಮೃತ್ಯುಪಾಲು

ಕನ್ನಡ ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ (35) ಅವರು ಎರ್ಮಾಯಿ ಫಾಲ್ಸ್ ಜಲಪಾತದಿಂದ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ (ಮೇ 30) ಬೆಳ್ತಂಗಡಿ ತಾಲೂಕು ಉಜಿರೆಯಲ್ಲಿ ಸಂಭವಿಸಿದೆ. ಚಿತ್ರವೊಂದರ ಫೋಟೋಶೂಟ್‌ಗಾಗಿ ಅವರು ಅಲ್ಲಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

Vijaya Karnataka Web 30 May 2018, 6:14 pm
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಎರ್ಮಾಯಿ ಫಾಲ್ಸ್ ಫಾಲ್ಸ್‌ನಲ್ಲಿ ಪೋಟೋ ಶೂಟ್‌ಗೆ ಬಂದಿದ್ದ ಕಟೀಲು ಪೆಟ್ರೋಲ್ ಪಂಪ್ ಸಮೀಪದ ನಿವಾಸಿ, ’ಈ ಕನಸು’ ಸಿನೆಮಾದ ನಿರ್ದೇಶಕ ಕಟೀಲು ಸಂತೋಷ್ ಶೆಟ್ಟಿ (35) ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ.
Vijaya Karnataka Web santhosh-shetty1


ಬುಧವಾರ ಬೆಳಗ್ಗೆ ಪೋಟೋ ಶೂಟ್ ತಂಡದೊಂದಿಗೆ ಬಂದಿದ್ದ ಸಂತೋಷ್ ಕಾಲಿಗೆ ಚಿತ್ರೀಕರಣದ ಸಲಕರಣೆ ಕಟ್ಟಿಕೊಂಡು ಶೂಟಿಂಗ್ ಮಾಡುತ್ತಿದ್ದರು. ಒಂದು ಪೋಟೋ ತೆಗೆದು ಎರಡನೇ ಪೋಟೋ ತೆಗೆಯಲು ತಿರುಗಿದಾಗ ಕಾಲು ಜಾರಿ ಫಾಲ್ಸ್ ನ ಗುಂಡಿಗೆ ಬಿದ್ದಿದ್ದಾರೆ.

ಯಾವ ಸಿನೆಮಾಕ್ಕೆ ಪೋಟೋ ತೆಗೆಯಲು ಬಂದಿದ್ದರು ಎಂದು ತಿಳಿದು ಬಂದಿಲ್ಲ. ಫಾಲ್ಸ್ ನ ಕೆಳಗೆ ಸುರಕ್ಷಿತವಾದ ಸ್ಥಳದಲ್ಲೇ ಶೂಟಿಂಗ್ ಮಾಡಲು ತಯಾರಾಗಿದ್ದರು. ಅದರೆ ಒಂದು ಪೋಟೋ ತೆಗೆದು ಎರಡನೇ ಪೋಟೋ ತೆಗೆಯಲು ನೀರಿನಲ್ಲಿ ಹಿಂದೆ ಹೆಜ್ಜೆ ಇಟ್ಟಿದ್ದಾರೆ. ಆಯ ತಪ್ಪಿ ಆಳವಾದ ಗುಂಡಿಗೆ ಬಿದ್ದಿದ್ದಾರೆ. ಕಾಲುಗಳಿಗೆ ಕಬ್ಬಿಣದಂತಹ ವಸ್ತುಗಳನ್ನು ಕಟ್ಟಿ ಕೊಂಡಿದ್ದರಿಂದ ನೀರಿನಿಂದ ಮೇಲೆ ಬರಲು ಸಾಧ್ಯವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌