ನಟರು ರಾಜಕೀಯಕ್ಕೆ ಬರುತ್ತಿರುವುದು ದುರಂತ: ಪ್ರಕಾಶ್ ರೈ
ನಟನೆಯ ಮೂಲಕ ಜನಪ್ರಿಯತೆ ಗಳಿಸಿಕೊಂಡು ಬಳಿಕ ಅದನ್ನೇ ಲಾಭ ಮಾಡಿಕೊಂಡು ರಾಜಕೀಯಕ್ಕೆ ಇಳಿಯುತ್ತಿರುವ ನಟರ ಬಗ್ಗೆ ನಟ ಪ್ರಕಾಶ್ ರೈ ಗರಂ ಆಗಿದ್ದಾರೆ. ಅಭಿಮಾನಕ್ಕಾಗಿ ಜನ ಮತಚಲಾಯಿಸುವಂತಾಗಬಾರದು ಎಂದಿದ್ದಾರೆ.
TNN 13 Nov 2017, 2:24 pm
ನಟನೆಯ ಮೂಲಕ ಜನಪ್ರಿಯತೆ ಗಳಿಸಿಕೊಂಡು ಬಳಿಕ ಅದನ್ನೇ ಲಾಭ ಮಾಡಿಕೊಂಡು ರಾಜಕೀಯಕ್ಕೆ ಇಳಿಯುತ್ತಿರುವ ನಟರ ಬಗ್ಗೆ ನಟ ಪ್ರಕಾಶ್ ರೈ ಗರಂ ಆಗಿದ್ದಾರೆ. ಅಭಿಮಾನಕ್ಕಾಗಿ ಜನ ಮತಚಲಾಯಿಸುವಂತಾಗಬಾರದು ಎಂದಿದ್ದಾರೆ.
'ಸ್ಟಾರ್ಗಳು ತಮ್ಮ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ರಾಜಕೀಯಕ್ಕೆ ಅಡಿಯಿಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ಇದು ನಮ್ಮ ದೇಶದ ದುರಂತ. ಮತ ಚಲಾಯಿಸುವಂತಿದ್ದರೆ ಅಂತಹವರ ಅಭಿಮಾನಿಗಳಾಗಬೇಡಿ. ಮತಯಾಚಿಸಲು ಬಂದವರನ್ನು ಪರೀಕ್ಷಿಸಿ. ಅವರು ಹೇಳುವುದು ನಿಮಗೆ ಒಪ್ಪಿಗೆಯಾದರೆ ಮಾತ್ರ ಮತಚಲಾಯಿಸಿ. ಅದು ಬಿಟ್ಟು ಅಭಿಮಾನಕ್ಕಾಗಿ ಮತಚಲಾಯಿಸಬೇಡಿ' ಎಂದಿದ್ದಾರೆ ಪ್ರಕಾಶ್ ರೈ.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ರೈ ಮಾತನಾಡುತ್ತಿದ್ದರು. ಇತ್ತೀಚೆಗೆ ನಟರಾದ ಕಮಲ್ ಹಾಸನ್, ರಜನಿಕಾಂತ್ ಹಾಗೂ ಕನ್ನಡದ ಉಪೇಂದ್ರ ಅವರು ರಾಜಕೀಯಕ್ಕೆ ಅಡಿಯಿಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರೈ ಈ ರೀತಿ ಪ್ರತಿಕ್ರಿಯಿಸಿದರು.
ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಜನ ತುಂಬಾ ತೊಂದರೆ ಅನುಭವಿಸಿದ್ದರು. ಈಗ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ ಅಷ್ಟೆ. ಬೇರೆ ತರ ಜನ ಅನುಭವಿಸುತ್ತಿದ್ದು ಅದಕ್ಕಿಂತಲೂ ಭೀಕರವಾಗಿದೆ. ಅವರದೇ ಅಜೆಂಡಾ ಪ್ರಕಾರ ಎಲ್ಲವೂ ನಡೆಯುತ್ತಿದೆ. ನಮ್ಮ ಇರುವಿಕೆಗೆ ಬೆದರಿಕೆ ಉಂಟಾಗಿದೆ ಎಂದಿದ್ದಾರೆ.
'ಸ್ಟಾರ್ಗಳು ತಮ್ಮ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ರಾಜಕೀಯಕ್ಕೆ ಅಡಿಯಿಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ಇದು ನಮ್ಮ ದೇಶದ ದುರಂತ. ಮತ ಚಲಾಯಿಸುವಂತಿದ್ದರೆ ಅಂತಹವರ ಅಭಿಮಾನಿಗಳಾಗಬೇಡಿ. ಮತಯಾಚಿಸಲು ಬಂದವರನ್ನು ಪರೀಕ್ಷಿಸಿ. ಅವರು ಹೇಳುವುದು ನಿಮಗೆ ಒಪ್ಪಿಗೆಯಾದರೆ ಮಾತ್ರ ಮತಚಲಾಯಿಸಿ. ಅದು ಬಿಟ್ಟು ಅಭಿಮಾನಕ್ಕಾಗಿ ಮತಚಲಾಯಿಸಬೇಡಿ' ಎಂದಿದ್ದಾರೆ ಪ್ರಕಾಶ್ ರೈ.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ರೈ ಮಾತನಾಡುತ್ತಿದ್ದರು. ಇತ್ತೀಚೆಗೆ ನಟರಾದ ಕಮಲ್ ಹಾಸನ್, ರಜನಿಕಾಂತ್ ಹಾಗೂ ಕನ್ನಡದ ಉಪೇಂದ್ರ ಅವರು ರಾಜಕೀಯಕ್ಕೆ ಅಡಿಯಿಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರೈ ಈ ರೀತಿ ಪ್ರತಿಕ್ರಿಯಿಸಿದರು.
ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಜನ ತುಂಬಾ ತೊಂದರೆ ಅನುಭವಿಸಿದ್ದರು. ಈಗ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ ಅಷ್ಟೆ. ಬೇರೆ ತರ ಜನ ಅನುಭವಿಸುತ್ತಿದ್ದು ಅದಕ್ಕಿಂತಲೂ ಭೀಕರವಾಗಿದೆ. ಅವರದೇ ಅಜೆಂಡಾ ಪ್ರಕಾರ ಎಲ್ಲವೂ ನಡೆಯುತ್ತಿದೆ. ನಮ್ಮ ಇರುವಿಕೆಗೆ ಬೆದರಿಕೆ ಉಂಟಾಗಿದೆ ಎಂದಿದ್ದಾರೆ.