ಆ್ಯಪ್ನಗರ

ಇದೇ ಮೊದಲ ಬಾರಿಗೆ ಶಿವರಾಜ್‌ಗೆ ಭಟ್ಟರು ಆಕ್ಷನ್‌ ಕಟ್‌ ಹೇಳುವ 'ಯೋಗ'

ಲಂಡನ್‌,ಯೂರೋಪ್‌ ಸೇರಿದಂತೆ ಬಹುತೇಕ ಕಡಲ ತೀರಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದರ ಜತೆಯಲ್ಲೇ ಭಟ್ರು ಇದೇ ಮೊದಲ ಬಾರಿಗೆ ಶಿವಣ್ಣನಿಗೂ ಆ್ಯಕ್ಷ ನ್‌ ಕಟ್‌ ಹೇಳಲಿದ್ದಾರೆ. ಈ ಚಿತ್ರಕ್ಕೆ ಕುಲದಲ್ಲಿ ಕೀಳಾವುದೋ ಅನ್ನೋ ಟೈಟಲ್‌ ಫಿಕ್ಸ್‌ ಆಗಿದೆ ಎಂಬ ಸುದ್ದಿ ಹಬ್ಬಿತ್ತು.

Vijaya Karnataka 4 Apr 2019, 5:50 pm
ಪಂಚತಂತ್ರ ಸಿನಿಮಾದ ಯಶಸ್ಸಿನಲ್ಲಿರುವ ಯೋಗರಾಜ್‌ ಭಟ್‌ ಗಾಳಿಪಟ-2ಚಿತ್ರದ ಜತೆಜತೆಗೆ ಶಿವರಾಜ್‌ಕುಮಾರ್‌ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಶರಣ್‌ ಹಾಗೂ ಆಪರೇಷನ್‌ ಅಲಮೇಲಮ್ಮ ಖ್ಯಾತಿಯ ರಿಷಿ, ಲೂಸಿಯಾ ಪವನ್‌ ನಾಯಕರಾಗಿರುವ ಗಾಳಿಪಟ-2 ಸದ್ಯದಲ್ಲೇ ಶೂಟಿಂಗ್‌ ಶುರುವಾಗಲಿದೆ.
Vijaya Karnataka Web shivanna


ಲಂಡನ್‌,ಯೂರೋಪ್‌ ಸೇರಿದಂತೆ ಬಹುತೇಕ ಕಡಲ ತೀರಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದರ ಜತೆಯಲ್ಲೇ ಭಟ್ರು ಇದೇ ಮೊದಲ ಬಾರಿಗೆ ಶಿವಣ್ಣನಿಗೂ ಆ್ಯಕ್ಷ ನ್‌ ಕಟ್‌ ಹೇಳಲಿದ್ದಾರೆ. ಈ ಚಿತ್ರಕ್ಕೆ ಕುಲದಲ್ಲಿ ಕೀಳಾವುದೋ ಅನ್ನೋ ಟೈಟಲ್‌ ಫಿಕ್ಸ್‌ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಯಾವುದನ್ನು ಭಟ್ಟರು ಕನ್ಫರ್ಮ್‌ ಮಾಡಿಲ್ಲ. ಭಟ್ಟರು ಬರೆಯುವ ಪಂಚಿಂಗ್‌ ಡೈಲಾಗ್‌ಗಳನ್ನು ಶಿವರಾಜ್‌ಕುಮಾರ್‌ ಹೊಡೆಯುವ ಕಾಲ ದೂರವಿಲ್ಲ.

ಪಂಚತಂತ್ರ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ಟೈಟಲ್ ಬಗೆಗಿನ ಗುಟ್ಟನ್ನೂ ಬಿಟ್ಟುಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಮತ್ತು ಯೋಗರಾಜ್ ಭಟ್ ಜತೆಗಿನ ಸಿನಿಮಾ ಬಗ್ಗೆಯೂ ಮಾಹಿತಿ ನೀಡಿದರು. "ಕುಲದಲ್ಲಿ ಕೀಳ್ಯಾವುದೋ" ಎಂಬ ಹೆಸರು ಶಿವಣ್ಣ ಬಾಯಿಂದ ಹೊರಬಂತು. ಆದರೆ ಇದೇ ಸಿನಿಮಾ ಶೀರ್ಷಿಕೆ ಎಂಬ ಬಗ್ಗೆ ಯೋಗರಾಜ್ ಭಟ್ ಆಗಲಿ ಶಿವಣ್ಣ ಆಗಲಿ ಖಚಿತಪಡಿಸಲಿಲ್ಲ. ಒಟ್ಟಾರೆ ಇವರಿಬ್ಬರ ಕಾಂಬೋ ಸಿನಿಮಾ ಬಗ್ಗೆ ಮಾತನಾಡಿದರು.

ಯೋಗರಾಜ್ ಭಟ್ ಜತೆಗೆ ಸಿನಿಮಾ ಮಾಡಬೇಕೆಂಬ ಆಸೆ ತುಂಬಾ ದಿನದಿಂದ ಕಾಡುತ್ತಿತ್ತು. ಕಥೆ ಕೇಳಿ ಒಂದು ತೀರ್ಮಾನಕ್ಕೆ ಬಂದೆವು. ಅವರ ಜತೆ ಸಿನಿಮಾ ಮಾಡಲಿದ್ದೇನೆ. ಸಬ್ಜೆಕ್ಟ್ ತುಂಬಾ ಚೆನ್ನಾಗಿದೆ. ಯಾರೂ ಎಕ್ಸ್‌ಪೆಕ್ಟ್ ಮಾಡಕ್ಕೆ ಆಗಲ್ಲ. ಇದೊಂದು ರೀತಿ ಅಸಾಧಾರಣ ಕಥೆ. ನಾನು ತುಂಬಾ ಸಲ ಕೇಳ್ತಾ ಇದ್ದೆ. ಆದರೆ ಅವರು ಸಮಯ ಬರಲಿ ಎನ್ನುತ್ತಿದ್ದರು. ಇದೊಂದು ಲವ್ಲಿ ಸಬ್ಜೆಕ್ಟ್. ಎಲ್ಲರ ಜತೆಗೆ ಸಿನಿಮಾ ಮಾಡಿದ್ದೇನೆ. ಆದರೆ ಯೋಗರಾಜ್ ಭಟ್ ಜತೆಗೆ ಮಾಡುವ ಕನಸು ಈಗ ನೆರವೇರುತ್ತಿದೆ ಎಂದಿದ್ದಾರೆ ಶಿವಣ್ಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌