ಆ್ಯಪ್ನಗರ

ಒಂದೇ ಕತೆಯಲ್ಲಿ ಐದು ಹಾರರ್‌ ಕತೆಗಳು

ಒಂದ್‌ ಕತೆ ಹೇಳ್ಲಾ ಎನ್ನುತ್ತಲೇ ಐದು ಭಯಾನಕ ಕತೆಗಳನ್ನು ಹೇಳಲು ಹೊರಟಿದ್ದಾರೆ ಗಿರೀಶ್‌ ಜಿ. ವಿಭಿನ್ನವಾದ ಐದು ಕಾನ್ಸೆಪ್ಟ್‌ಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ. ಚಿತ್ರ ಮಾ. 8ರಂದು ರಿಲೀಸ್‌ ಆಗಲಿದೆ.

Vijaya Karnataka 2 Mar 2019, 5:00 am
ಒಂದ್‌ ಕತೆ ಹೇಳ್ಲಾ ಎನ್ನುತ್ತಲೇ ಐದು ಭಯಾನಕ ಕತೆಗಳನ್ನು ಹೇಳಲು ಹೊರಟಿದ್ದಾರೆ ಗಿರೀಶ್‌ ಜಿ. ವಿಭಿನ್ನವಾದ ಐದು ಕಾನ್ಸೆಪ್ಟ್‌ಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ. ಚಿತ್ರ ಮಾ. 8ರಂದು ರಿಲೀಸ್‌ ಆಗಲಿದೆ.
Vijaya Karnataka Web ond kathe new path


-ಪದ್ಮಾ ಶಿವಮೊಗ್ಗ


ಒಂದು ಸಿನಿಮಾದಲ್ಲಿ ಒಂದು ಕತೆ ಇರೋದು ಸಹಜ. ಆದರೆ, ಒಂದ್‌ ಕತೆ ಹೇಳ್ಲಾ ಚಿತ್ರದಲ್ಲಿ ಐದು ಕತೆಗಳಿವೆ. ಎಲ್ಲವೂ ಬೇರೆ ಬೇರೆ ಕತೆಗಳನ್ನು ಹೇಳುತ್ತವೆ. ಪ್ರತಿಯೊಂದು ಕತೆಗೂ ಒಂದು ಕಾನ್ಸೆಪ್ಟ್‌ ಇದೆ. ಎಲ್ಲವೂ ಹಾರರ್‌ ಸ್ಟೋರಿಗಳು. ಚೊಚ್ಚಲ ಚಿತ್ರದಲ್ಲೇ ಪ್ರಯೋಗ ಮಾಡಿದ್ದಾರೆ ನಿರ್ದೇಶಕ ಗಿರೀಶ್‌. ಜಿ.

'ವಿಭಿನ್ನವಾದ ಹಾರರ್‌ ಕತೆಗಳನ್ನು ಒಟ್ಟಿಗೆ ಹೇಳುತ್ತಿದ್ದೇವೆ. ಎಲ್ಲವೂ ಕೊನೆಗೆ ಕನೆಕ್ಟ್ ಅಗುತ್ತವೆ. ಚಾಪ್ಟರ್‌ ಒಂದರಲ್ಲಿ ನೀರನ್ನು ಕುರಿತ ಹಾರರ್‌ ಸ್ಟೋರಿಯಲ್ಲಿ ರಮಾಕಾಂತ್‌ ಮತ್ತು ಸೌಮ್ಯಾ ರಮಾಕಾಂತ್‌ ನಟಿಸಿದ್ದಾರೆ. ಎರಡನೆಯದರಲ್ಲಿ ಮಗುವಿನ ಸುತ್ತ ಕತೆ ಹೆಣೆಯಲಾಗಿದೆ. ಮನೆಯಲ್ಲಿರುವ ಅಗೋಚರ ಶಕ್ತಿಯ ಬಗ್ಗೆ ಇರುತ್ತೆ. ಮೂರನೆಯದರಲ್ಲಿ ಲವ್‌ ಸ್ಟೋರಿ ಇದೆ. ನಾಲ್ಕನೆಯದರಲ್ಲಿ ಭಕ್ತ ಪ್ರಹ್ಲಾದ ಮತ್ತು ಹಿರಣ್ಯ ಕಶ್ಯಪು ಕುರಿತ ಸ್ಟೋರಿ ಇದೆ. ಇವೆಲ್ಲವೂ ಹಾರರ್‌ ಸ್ಟೋರಿಯಾಗಿದೆ. ಈ ಎಲ್ಲಾ ಕತೆಗಳನ್ನು ಹೇಳುವ ಕತೆಯಲ್ಲಿ ತಾಂಡವ್‌ ರಾಮ್‌ ಮತ್ತು ಕಾರ್ತಿಕ್‌ ರಾವ್‌ ನಟಿಸಿದ್ದಾರೆ. ಸಿನಿಮಾದಲ್ಲಿ ಇವರೇ ಎಲ್ಲಾ ಕತೆಗಳನ್ನು ಹೇಳುತ್ತಾರೆ' ಎಂದಿದ್ದಾರೆ ಗಿರೀಶ್‌.

ಮಗುವಿನ ಸ್ಟೋರಿಯಲ್ಲಿ ಮಂಜುಳಾ ರೆಡ್ಡಿ ಮತ್ತು ಚಂದ್ರಶೇಖರ್‌ ಈ ಸ್ಟೋರಿಯಲ್ಲಿ ನಟಿಸಿದ್ದಾರೆ. ಮೂರನೆಯದರಲ್ಲಿ ಲವ್‌ ಸ್ಟೋರಿಯಲ್ಲಿ ಯಶಸ್ವಿ ಗಣೇಶ್‌ ಮತ್ತು ಸನ್ನತಿ ನಟಿಸಿದ್ದರೆ, ನಾಲ್ಕನೆಯದರಲ್ಲಿ ನಿರ್ದೇಶಕ ಗಿರೀಶ್‌ ಮತ್ತು ವಿನೋದ್‌ ಅಭಿನಯಿಸಿದ್ದಾರೆ. ಈ ಎಲ್ಲಾ ಕತೆಗಳನ್ನು ಸ್ವತಃ ನಿರ್ದೇಶಕರೇ ಬರೆದಿದ್ದಾರೆ.

'ಚಿತ್ರದ ನಿರೂಪಣೆಯೇ ವಿಶೇಷವಾಗಿದೆ. ಒಂದೊಂದು ಕತೆಯೂ ಒಂದೊಂದು ರೀತಿಯ ಅನುಭವ ನೀಡಲಿದೆ. ಏನನ್ನೂ ಊಹಿಸಲಾಗದ ರೀತಿ ಹಾರರ್‌ ಸ್ಟೋರಿ ಸಾಗುತ್ತದೆ. ಹಾಡುಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ' ಎಂದಿದ್ದಾರೆ ನಿರ್ದೇಶಕ ಗಿರೀಶ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌