ಆ್ಯಪ್ನಗರ

ಸ್ನೇಹ ಎನ್ನುವುದು ಒನ್ ವೇ ಅಲ್ಲ: ದಚ್ಚು ಸ್ನೇಹದ ಬಗ್ಗೆ ಕಿಚ್ಚನ ಮಾತು

ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವಿನ ಗೆಳೆತನ ಈಗ ಹಳಸಿದೆ. ಮುಂಚೆ ಇಬ್ಬರೂ ಸಿಸಿಎಲ್‌ನಲ್ಲಿ ಒಟ್ಟಿಗೆ ಆಡುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಇದೀಗ ಸುದೀಪ್ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಸ್ನೇಹ ಎಂಬುದು ಒನ್ ವೇ ಅಲ್ಲ ಎಂದಿದ್ದಾರೆ.

Vijaya Karnataka Web 10 Jul 2019, 12:44 pm
ಅಭಿನಯ ಚಕ್ರವರ್ತಿ ಸುದೀಪ್‌ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ತಮ್ಮ ಮತ್ತು ದರ್ಶನ್ ನಡುವಿನ ಗೆಳೆತನ, ಸ್ನೇಹ ಸಂಬಂಧ ಬಗ್ಗೆ ಮಾತನಾಡಿದ್ದಾರೆ. "ನಾನು ಯಾರಿಗಾದರೂ ಜೀವನದಲ್ಲಿ ಒಂದು ಸ್ಥಾನ ಕೊಟ್ಟಾಗ ಅದನ್ನು ಅಷ್ಟು ಬೇಗ ಕಿತ್ತಾಕಲು ಸಾಧ್ಯವಿಲ್ಲ. ನಾನು ಎಲ್ಲೇ ಹೋಗಲಿ ದರ್ಶನ್ ಹೆಸರು ಹೇಳ್ತೀನಿ, ಅವರ ಬಗ್ಗೆ ಮಾತನಾಡ್ತೀನಿ. ಆದರೆ ಅಲ್ಲಿಂದ ನೀವು ಕೇಳಿರಲಿಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ನನ್ನ ಹೆಸರೇ ಬರಲ್ಲ. ಸ್ನೇಹ ಎನ್ನುವುದು ಒನ್ ವೇ ಅಲ್ಲ. ಫೋಟೋ ಹಾಕಿದ್ದೀನಿ ಎಂದ ಮಾತ್ರಕ್ಕೆ ಇದು ನಾನು" ಎಂದಿದ್ದಾರೆ.
Vijaya Karnataka Web sudeep-darshan


"ನಾನು ಯಾರಿಗಾದರೂ ಒಂದು ಸ್ಥಾನ ಕೊಟ್ಟರೆ, ಆ ಬಾಂಧವ್ಯವನ್ನು ಮತ್ತೊಬ್ಬರು ಕಿತ್ತಾಕಿದರೆ ನನ್ನ ಎಮೋಷನ್ ತಪ್ಪಾಗುತ್ತದೆ. ಸುಳ್ಳು, ತಾತ್ಕಾಲಿಕ ಅಂತ ಅನ್ನಿಸಿಬಿಡುತ್ತದೆ. ನಾನೊಬ್ಬರಿಗೆ ಜಾಗ ಕೊಟ್ಟಿದ್ದೀನಿ ಎಂದರೆ ನನ್ನ ಜತೆಗೆ ಇರಬೇಕು ಎಂದೇನು ಇಲ್ಲ. ನಾನು ಬದುಕಿರುವ ತನಕ ಆ ಜಾಗ ಕೊಟ್ಟಿರುತ್ತೀನಿ. ಸಾಯೋತನಕ ಆ ಜಾಗ ಕೊಟ್ಟಿರುತ್ತೀನಿ. ಹಾಗಂತ ಆ ಕಡೆಯಿಂದಲೂ ಅದೇ ರೀತಿ ಬರಬೇಕು ಎಂದು ನಿರೀಕ್ಷಿಸುವ ಜಾತಿಗೆ ನಾನು ಸೇರಿದವನಲ್ಲ" ಎದು ಹೇಳಿದ್ದಾರೆ. [ಸುದೀಪ್‌ x ದರ್ಶನ್‌: ಗೆಳೆತನದ ಸಮರಕ್ಕೆ ಕಾರಣವಾದ ಮೆಜೆಸ್ಟಿಕ್]

"ಎಷ್ಟೋ ಮಂದಿ ಜೀವನದಲ್ಲಿ ಬರುತ್ತಾರೆ, ಪ್ರೀತಿ ಮಾಡ್ತೀವಿ. ನಮ್ ತಪ್ಪಿನಿಂದ ಕೆಲವರು ಹೋಗಿರಬಹುದು, ಅಥವಾ ಅವರ ತಪ್ಪಿನಿಂದ ಹೋಗಿರಬಹುದು. ಇಲ್ಲಿ ಯಾರ ತಪ್ಪು, ಏನು ತಪ್ಪು ಎಂಬುದು ಬೇಡ. ಯಾವುದೇ ಹಂಗು ನನಗಿಲ್ಲ. ಅದನ್ನು ತೆಗೆದು ಪಕ್ಕಕ್ಕಿಟ್ಟಿದ್ದರೂ ಯಾರು ಕೇಳ್ತಿರಲಿಲ್ಲ. ಅಥವಾ ಅದರಿಂದ ಎರಡು ಸಿನಿಮಾ ಹೆಚ್ಚಿಗೆ ನನಗೆ ಸಿಗುತ್ತಿರಲಿಲ್ಲ"

"ನಾನು ನಾನಾಗಿದ್ದು ನನ್ನಿಂದ. ಆದರೆ ನನಗೆ ಒಂದು ಗ್ರೇಟ್ ರೆಸ್ಪೆಕ್ಟ್ ಇದೆ. ಆ ಗೌರವ ಹಾಗೆಯೇ ಇರುತ್ತದೆ. ಯಾರೋ ಮಾಡಿದರು ಅಂತ ಕೆಲವು ನಾನು ಮಾಡಲು ಹೋಗಲ್ಲ. ನಾನು ನಾನಾಗಿಯೇ ಇರುತ್ತೇನೆ" ಎಂದಿದ್ದಾರೆ. [ಸುದೀಪ್‌ ದರ್ಶನ್‌ ಸಮರಕ್ಕೆ ಬೇರೆ ಆ್ಯಂಗಲ್‌]

ಕನ್ನಡ ಸಿನಿಮಾ ರಂಗದಲ್ಲಿ ಕುಚುಕು ಗೆಳೆಯರೆಂದೇ ಇಬ್ಬರೂ ಫೇಮಸ್‌. ಇವರ ಬಹುದಿನದ ಗೆಳೆತನಕ್ಕೆ ಬ್ರೇಕ್‌ ಬಿದ್ದಿದ್ದು ಅವರ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು.'ತಮ್ಮ ಮತ್ತು ಸುದೀಪ್‌ ಮಧ್ಯೆ ಯಾವುದೇ ಗೆಳೆತನವಿಲ್ಲ. ನಾವಿಬ್ಬರೂ ಸ್ಯಾಂಡಲ್‌ವುಡ್‌ ನಟರಷ್ಟೇ' ಎಂದು ದರ್ಶನ್‌ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌