ಆ್ಯಪ್ನಗರ

ಸ್ಯಾಂಡಲ್‌ವುಡ್‌ಗೆ ಗಾಲಿ ಜನಾರ್ದನ ರೆಡ್ಡಿ ಪುತ್ರರತ್ನ...!

ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರರತ್ನ ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಜನಾರ್ದನ ರೆಡ್ಡಿ ಮಗಳ ಮದುವೆ ಸಮಯದಿಂದ ಮಗ ಕಿರೀಟಿ ರೆಡ್ಡಿ ಸಿನಿಮಾಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು.

ತೆಲುಗು ಸಮಯಂ 5 Jun 2017, 4:25 pm
ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರರತ್ನ ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಜನಾರ್ದನ ರೆಡ್ಡಿ ಮಗಳ ಮದುವೆ ಸಮಯದಿಂದ ಮಗ ಕಿರೀಟಿ ರೆಡ್ಡಿ ಸಿನಿಮಾಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು.
Vijaya Karnataka Web gaali janardhana reddy to introduce his son as movie hero
ಸ್ಯಾಂಡಲ್‌ವುಡ್‌ಗೆ ಗಾಲಿ ಜನಾರ್ದನ ರೆಡ್ಡಿ ಪುತ್ರರತ್ನ...!


ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಕಥೆಯನ್ನು ಆಯ್ಕೆ ಮಾಡುವ ಕೆಲಸದಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಸ್ಯಾಂಡಲ್‍ವುಡ್ ಮೂಲಕಷ್ಟೇ ಅಲ್ಲದೆ ಟಾಲಿವುಡ್‌ನಲ್ಲೂ ಅವರನ್ನು ಏಕಕಾಲಕ್ಕೆ ಪರಿಚಯಿಸಲು ಹೊರಟಿದ್ದಾರೆ ಜನಾರ್ದನ ರೆಡ್ಡಿ. ಕನ್ನಡ, ತೆಲುಗಿನ ಈ ದ್ವಿಭಾಷಾ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ.

ರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆ ಸಮಯದಲ್ಲೇ ಸಿನಿಮಾ ಬಗೆಗಿನ ಅವರ ಆಸಕ್ತಿ ಬಹಿರಂಗವಾಗಿತ್ತು. ವಿವಾಹ ಆಹ್ವಾನ ಪತ್ರಿಕೆ ಮೂಲಕ ತಮ್ಮ ಅಭಿನಯ ಕನಸನ್ನು ಪ್ರದರ್ಶಿಸಿತ್ತು ಅವರ ಕುಟುಂಬ. ವಿಡಿಯೋ ರೂಪದಲ್ಲಿ ಜನಾರ್ದನ ರೆಡ್ಡಿ ಕುಟುಂಬಿಕರೆಲ್ಲಾ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ತಂಗಿ ಮದುವೆಯಲ್ಲಿ ಸ್ಟೆಪ್ ಸಹ ಹಾಕಿದ್ದ ಕಿರೀಟಿ ರೆಡ್ಡಿ.

ಇದುವರೆಗೆ ಜನಾರ್ದನ ರೆಡ್ಡಿ ಸಿನಿಮಾ ಒಂದಕ್ಕೆ ನಿರ್ಮಾಪಕರಾಗಿ ವ್ಯವಹರಿಸಿದ್ದಾರೆ. ಅದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬುದ್ಧಿವಂತ' (2008) ಸಿನಿಮಾವನ್ನು ತೆಲುಗಿನಲ್ಲಿ 'ಬುದ್ಧಿಮಂತುಡು' ಹೆಸರಿನಲ್ಲಿ ಬಿಡುಗಡೆ ಮಾಡಿದ್ದರು. ಅದು ಬಿಟ್ಟರೆ ಅವರು ಇನ್ಯಾವುದೇ ಸಿನಿಮಾಗೆ ಕೈಹಾಕಿಲ್ಲ.

ಇನ್ನು ರಾಜಕಾರಣಿಗಳ ಮಕ್ಕಳು ಬಣ್ಣಹಚ್ಚುತ್ತಿರುವುದು ಇದೇ ಮೊದಲಲ್ಲ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ (ಜಾಗ್ವಾರ್), ಹೆಚ್ ಎಂ ರೇವಣ್ಣ ಪುತ್ರ ಅನೂಪ್ (ಲಕ್ಷ್ಮಣ), ಚೆಲುವರಾಯಸ್ವಾಮಿ ಪುತ್ರ ಸಚಿನ್ (ಹ್ಯಾಪಿ ಬರ್ತ್ ಡೇ) ಬಣ್ಣದ ಲೋಕಕ್ಕೆ ಅಡಿಯಿಟ್ಟಿದ್ದಾರೆ. ಇದೀಗ ಜನಾರ್ದನ ರೆಡ್ಡಿ ಪುತ್ರನ ಆಮನವಾಗುತ್ತಿದೆ. [ರಾಜಕಾರಣಿಗಳ ಮಕ್ಕಳ ಚಿತ್ರಗಳು ಒಟ್ಟಿಗೆ ರಿಲೀಸ್ ಆಗ್ತವಾ?]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌