ಆ್ಯಪ್ನಗರ

ಗಾಂಧಿಗಿರಿ ಮೂಲಕ ನಿರ್ದೇಶಕರಾದ ರಘು ಹಾಸನ್‌

ಸ್ಯಾಂಡಲ್‌ವುಡ್‌ನಲ್ಲಿಹಲವಾರು ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿಕೊಂಡಿದ್ದ ರಘು ಹಾಸನ್‌ ಇದೀಗ ಏಕಕಾಲಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಾರೆ.

Vijaya Karnataka 23 Aug 2019, 4:24 pm
ಸ್ಯಾಂಡಲ್‌ವುಡ್‌ನಲ್ಲಿಹಲವಾರು ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿಕೊಂಡಿದ್ದ ರಘು ಹಾಸನ್‌ ಇದೀಗ ಏಕಕಾಲಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಾರೆ. ಜೆ.ಡಿ ಚಕ್ರವರ್ತಿ ಅಭಿನಯದ 'ಗಾಂಧಿಗಿರಿ' ಸಿನಿಮಾ ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿತಮ್ಮ ಜರ್ನಿ ಪ್ರಾರಂಭಿಸಿದ್ದಾರೆ. ಗಾಂಧಿಗಿರಿ ಚಿತ್ರದಲ್ಲಿಪ್ರೇಮ್‌ ಮತ್ತು ರಾಗಿಣಿ ಮುಖ್ಯ ಪಾತ್ರಗಳಲ್ಲಿನಟಿಸಿದ್ದಾರೆ.
Vijaya Karnataka Web 28872680_1839332939693111_6534555091733577728_n


ಇದರ ಜತೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್‌ ಕೆ.ಆರ್‌ ಪೇಟೆ ಅಭಿನಯದ 'ನಾನು ಮತ್ತು ಗುಂಡ' ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ.

'ನಿರ್ದೇಶನ ಮಾಡಬೇಕೆನ್ನುವುದು ದೀರ್ಘ ಕಾಲದ ಕನಸು. ನಿರ್ದೇಶಕ ಪ್ರೇಮ್‌ ಅವರ ಜತೆ ಹಲವಾರು ಚಿತ್ರದಲ್ಲಿಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕಾರ್ಯನಿರ್ವಹಿಸಿದ್ದೇನೆ. ಈಗ 'ಗಾಂಧಿಗಿರಿ' ಎನ್ನುವ ಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಈ ಸಿನಿಮಾ ರಾಜಕೀಯ, ತಾಯಿ ಮತ್ತು ಮಗನ ಸೆಂಟಿಮೆಂಟ್‌ ಜತೆಗೆ ಬೇರೆ ಬೇರೆ ಅಂಶಗಳನ್ನು ಒಳಗೊಂಡಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಈ ಚಿತ್ರದಲ್ಲಿಪ್ರೇಮ್‌, ನಟಿ ಅರುಂಧತಿ, ಜೆಡಿ ಚಕ್ರವರ್ತಿಯ ಪಾತ್ರ ಬಹಳ ಪ್ರಮುಖವಾಗಿದೆ' ಎನ್ನುತ್ತಾರೆ ನಿರ್ದೇಶಕ ರಘು ಹಾಸನ್‌.

ಪ್ರಯೋಗಾತ್ಮಕ ಹಾಗೂ ಇಂದಿನ ಯುವಜನರಿಗೆ ಕನೆಕ್ಟ್ ಆಗುವ ಹೊಸ ರೀತಿ ಕತೆಗಳನ್ನು ರಚಿಸುವ ಪ್ಲಾನ್‌ ಕೂಡ ಅವರಿಗೆ ಇದೆಯಂತೆ. 'ನಾನು ಮತ್ತು ಗುಂಡ, ಗಾಂಧಿಗಿರಿ ಸಿನಿಮಾದ ಕೆಲಸ ಮುಗಿದ ನಂತರ ಮುಂದಿನ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದ ಬಗ್ಗೆ ಪ್ಲಾನ್‌ ಮಾಡುತ್ತೇನೆ. ಅದರಲ್ಲೂಹೊಸ ಪ್ರತಿಭೆಗಳಿಗೆ ನಾನು ಆದ್ಯತೆ ನೀಡುತ್ತೇನೆ' ಎನ್ನುತ್ತಾರೆ ನಿರ್ದೇಶಕ ರಘು ಹಾಸನ್‌.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌