ಆ್ಯಪ್ನಗರ

ಆ್ಯಂಗ್ರಿ ಯಂಗ್‌ಮ್ಯಾನ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ 'ಗೀತಾ' ಸಿನಿಮಾ ಬಗ್ಗೆ ಬಿಚ್ಚಿಟ್ಟ ಗುಟ್ಟೇನು?

'ಗೀತಾ' ಸಿನಿಮಾ ನಟ ಗಣೇಶ್ ಅವರಿಗೆ ತುಂಬ ವಿಶೇಷವಾದುದು. ತುಂಬ ವಿಭಿನ್ನವಾದ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಅವುಗಳನ್ನು ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

Vijaya Karnataka Web 24 Sep 2019, 12:31 pm
ಗೋಲ್ಡನ್ ಸ್ಟಾರ್ ಮೊದಲ ಬಾರಿಗೆ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿ 'ಗೀತಾ' ಸಿನಿಮಾ ಮೂಲಕ ಪ್ರೇಕ್ಷಕರೆದುರು ಸೆಪ್ಟೆಂಬರ್ 27ರಂದು ಬರುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಒಂದಿಷ್ಟು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿತ್ತು. ಆಗ ಗಣೇಶ್ ವಿಶೇಷವಾಗಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
Vijaya Karnataka Web ganesh geetha movie


ಲವ್ಲೀ ಬಾಯ್ ಗಣೇಶ್ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿದ್ದು ಹೇಗೆ?
'ಗೀತಾ' ಸಿನಿಮಾದಲ್ಲಿ ನನ್ನ ಪಾತ್ರ ತುಂಬ ವಿಭಿನ್ನವಾಗಿದೆ, ಮಾಮೂಲಿಯಾಗಿಲ್ಲ. ನನ್ನ ಹಿಂದಿನ ಸಿನಿಮಾಗಳಲ್ಲಿ ಯಾರು ಏನೇ ಅಂದರೂ ಏನೂ ಹೇಳೋದಿಲ್ಲ. ಎಲ್ಲರಿಗೂ ಸಹಾಯ ಮಾಡುತ್ತಿದ್ದೆ. ಮೃದುವಾದ ಪಾತ್ರವಿರುತ್ತಿದ್ದೆ. ಯಾವಾಗಲೂ ನಗುತ್ತ ಇರುತ್ತಿದ್ದೆ. ಆದರೆ ಈ ಸಿನಿಮಾದಲ್ಲಿ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದೇನೆ. ಸಾಫ್ಟ್ ಪಾತ್ರ ಮಾಡೋದು ಕಷ್ಟ. ಕಾಲೇಜು ಜೀವನದಲ್ಲಿ ನಾನು ಯೂನಿಯನ್ ಲೀಡರ್ ಆಗಿ ಸುಮಾರು ಹೋರಾಟ, ಗಲಾಡೆ ಮಾಡೋದು, ಕಿರುಚಾಡೋದು ಮಾಡ್ತಿದ್ದೆ, ಮಾಡಿದ್ದೇನೆ. 90ರ ದಶಕದಲ್ಲಿ ಕಾಲೇಜುನಲ್ಲಿ ಓದುತ್ತಿದ್ದೆ. ಅಂದರೆ ಹದಿನೈದು ವರ್ಷಗಳ ಹಿಂದೆ. ಹೀಗಾಗಿ ಈ ಹೋರಾಟಗಾರನ ಪಾತ್ರ ತುಂಬ ಸುಲಭವಾಯಿತು ಎಂದು ಹೇಳಿದ್ದಾರೆ ಮುಂಗಾರುಮಳೆ ಹುಡುಗ.

ನನ್ನ ಸಿನಿಮಾ ತಂಟೆಗೆ ಬರಬೇಡಿ, ಚೆನ್ನಾಗಿರಲ್ಲ; ಪರಭಾಷಾ ಸಿನಿಮಾಗಳಿಗೆ ಗೋಲ್ಡನ್ ಹುಡುಗ ಗಣೇಶ್ ವಾರ್ನಿಂಗ್ ಕೊಟ್ಟಿದ್ದೇಕೆ?

'ಗೀತಾ' ಸಿನಿಮಾದ ಕಥಾಹಂದರವೇನು? ಗೋಕಾಕ್ ಚಳವಳಿ ಪ್ರಭಾವ ಈ ಚಿತ್ರದಲ್ಲಿ ಎಷ್ಟಿದೆ?

80ರ ದಶಕದ ಈ ಶಂಕರನ ಪಾತ್ರ ತುಂಬ ಖುಷಿಕೊಟ್ಟಿದೆ. ಕಾಲ್ಪನಿಕ ಪಾತ್ರವನ್ನು ಇಲ್ಲಿ ಮಾಡಿದ್ದೇನೆ. ಆದರೆ ಸಿನಿಮಾದಲ್ಲಿ ಚಳವಳಿ ಟೈಮ್‌ ಅಲ್ಲಿ ನಡೆಯುವ ಗೋಲಿಬಾರ್, ಹೋರಾಟ ಇವೆಲ್ಲವೂ ಸತ್ಯ ಆಗಿರತ್ತೆ, ಆದರೆ ಅದರ ಮುಂದಿನ ಕಥೆ ಕಾಲ್ಪನಿಕವಾಗಿರುತ್ತೆ. 3 ಹೀರೋಯಿನ್‌ಗಳು ಒಂದೊಂದು ಕಾಲದಲ್ಲಿ ಬಂದುಹೋಗುತ್ತದೆ. ಮನೋಹರ್‌ ಅವರ ಡಾಕ್ಯುಮೆಂಟರಿಯನ್ನು ಎಷ್ಟು ಚೆನ್ನಾಗಿ ಸಿನಿಮಾದಲ್ಲಿ ತೋರಿಸಬೇಕೋ ಅಷ್ಟು ಚೆನ್ನಾಗಿ ತೋರಿಸಿದ್ದೇವೆ. ಗೋಕಾಕ್ ಚಳವಳಿಯ ಮೂಲ ಫೂಟೇಜ್‌ನ್ನು ಸಿನಿಮಾದ 'ಕನ್ನಡಿಗ, ಕನ್ನಡಿಗ' ಹಾಡಿನಲ್ಲಿ ತೋರಿಸಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗಣಿ.

'ಗೀತಾ' ಚಿತ್ರ ಪ್ರೇಕ್ಷಕರಿಗೆ ನೀಡುವ ಸಂದೇಶವೇನು?

ಪ್ರೀತಿ, ಸಂಬಂಧ, ಭಾಷೆ ವಿಚಾರದಲ್ಲಿ ಅಂದಿನ ಕಾಲಘಟ್ಟ, ಇಂದಿನ ಕಾಲಘಟ್ಟವನ್ನು ಇಟ್ಟುಕೊಂಡು ಕಥೆ ಸಾಗುತ್ತದೆ. ನಮ್ಮ ಥಿಯೇಟರ್‌ಗೆ ಪರಭಾಷಾ ಸಿನಿಮಾಗಳು ಕೈ ಹಾಕಿದಾಗ ನಾವು ಸುಮ್ಮನೇ ಇರೋದಿಲ್ಲ. ಡಬಲ್ ಶೇಡ್‌ ಅಲ್ಲಿ ನಾನು ಮಾಡಿದ್ದೇನೆ. ಅದನ್ನು ಹೇಳೋದಕ್ಕಿಂತ, ನೀವು ನೋಡಿದರೆ ಇನ್ನೂ ಚೆನ್ನಾಗಿ ಅರ್ಥ ಆಗತ್ತೆ. ಅಂದಿನ ಹೋರಾಟದ ಬಗ್ಗೆ ಎಲ್ಲರಿಗೂ ಹೆಚ್ಚಾಗಿ ಗೊತ್ತಿಲ್ಲ. ಕನ್ನಡ ಪ್ರಥಮ ಭಾಷೆಯಾಗಬೇಕು ಎಂದು ಹೋರಾಟ ಮಾಡಿದ್ದಾರೆ, ಕನ್ನಡಿಗರಿಗೆ ಸೂಕ್ತವಾದ ಸ್ಥಾನಮಾನ ನೀಡಬೇಕು ಎಂಬೆಲ್ಲ ಹೋರಾಟಗಳಿವೆ. ಆದರೆ ನಾವು ಇವತ್ತು ಯಾವ ಸ್ಥಾನದಲ್ಲಿದ್ದೇವೆ ಎನ್ನೋದು ಈ ಚಿತ್ರದ ಸಂದೇಶ ಎಂದು ಹೇಳಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.

ಪೈರಸಿ ಮಟ್ಟ ಹಾಕಲು ಮಾಸ್ಟರ್‌ಪ್ಲ್ಯಾನ್ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು 'ಗೀತಾ' ತಂಡ

ಈ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದಾರೆ. ಸಂತೋಷ್ ಆನಂದ್‌ರಾಮ್ ಕೂಡ ಕೆಲವೊಂದು ದೃಶ್ಯಗಳಿಗೆ ಚಿತ್ರಕಥೆ ಬರೆದಿದ್ದಾರೆ. ಶ್ರೀಶ ಕ್ಯಾಮೆರಾ ಕೈಚಳಕ ಈ ಚಿತ್ರದಲ್ಲಿದೆ. ಅನುಪ್ ರೂಬಿನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆನಂದ್ ಆಡಿಯೋ ಈ ಸಿನಿಮಾದ ಹಾಡುಗಳ ಹಕ್ಕು ಪಡೆದಿದ್ದಾರೆ. ಜಾಕ್ ಮಂಜು ಚಿತ್ರದ ವಿತರಣೆ ಮಾಡುತ್ತಿದ್ದಾರೆ. ನಿರ್ದೇಶಕ ವಿಜಯ್ ನಾಗೇಂದ್ರ ಹೇಳುವಂತೆ ಈ ಚಿತ್ರದಲ್ಲಿ ಕಾಮಿಡಿ, ರೋಮ್ಯಾನ್ಸ್, ಆ್ಯಂಗ್ರಿ ಯಂಗ್‌ಮ್ಯಾನ್ ಅಂಶಗಳೂ ಇರುತ್ತವೆಯಂತೆ. ಜಾಕ್ ಮಂಜು ಅವರು ಹೇಳುವಂತೆ 150 ಥಿಯೇಟರ್, 60 ಮಲ್ಟಿಫ್ಲೆಕ್ಸ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಸೈಯದ್ ಸಲಾಂ ಅವರು ಚಿತ್ರಕ್ಕೆ ಪೈರಸಿ ತಟ್ಟದಂತೆ ಈಗಾಗಲೇ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. 'ಗೀತಾ' ರಾಜ್ಯಾದ್ಯಂತ ಸೆಪ್ಟೆಂಬರ್ 27ರಂದು ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಶಾನ್ವಿ ಶ್ರೀವಾತ್ಸವ, ಸುಧಾರಾಣಿ ಈ ಚಿತ್ರದಲ್ಲಿದ್ದಾರೆ.

ಗೋಕಾಕ್‌ ಚಳವಳಿಯಲ್ಲಿ ಅಣ್ಣಾವ್ರು ಮಾಡಿದ ಭಾಣದಿಂದ ಪ್ರೇರೇಪಿತರಾದ ಗಣೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌