ಆ್ಯಪ್ನಗರ

ಗೌರಿ ಹತ್ಯೆ ಸಿನಿಮಾ ಗೊಂದಲ

ಕವಿತಾ ಪತ್ರ ಮತ್ತು ನಿರ್ದೇಶಕರ ಮಾತು ಗೊಂದಲ ಮೂಡಿಸಿವೆ. ಟಗರು ಸಿನಿಮಾದಲ್ಲಿ ಕಾನ್ಸ್‌ಟೇಬಲ್‌ ಸರೋಜ ಪಾತ್ರ ಮಾಡಿದ್ದ ತ್ರಿವೇಣಿ ಮಿ.ನಟ್ವರ್ಲಾಲ್‌ ಚಿತ್ರದಲ್ಲಿ ಗೌರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಕೂಡಯಿತ್ತು. ಅದನ್ನೂ ನಿರ್ದೇಶಕರು ಅಲ್ಲಗಳೆದಿದ್ದಾರೆ.

Vijaya Karnataka 12 Jan 2019, 9:47 am
ಮಿ.ನಟ್ವರ್ಲಾಲ್‌ ಸಿನಿಮಾದಲ್ಲಿ ಗೌರಿ ಹತ್ಯೆಯ ಕುರಿತಾದ ಸನ್ನಿವೇಶವಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆ ಕಾರಣಕ್ಕಾಗಿ ಗೌರಿ ಸಹೋದರಿ ಕವಿತಾ ಲಂಕೇಶ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಈ ಕೇಸ್‌ ಕೋರ್ಟ್‌ನಲ್ಲಿ ಇರುವ ಕಾರಣಕ್ಕಾಗಿ ಸಿನಿಮಾದಲ್ಲಿ ಗೌರಿ ಹತ್ಯೆಯ ದೃಶ್ಯಗಳನ್ನು ಬಳಸುವಂತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು ಕವಿತಾ.
Vijaya Karnataka Web Triveni


ವಾಣಿಜ್ಯ ಮಂಡಳಿಗೆ ಪತ್ರ ಬರೆಯುತ್ತಿದ್ದಂತೆಯೇ ಸಿನಿಮಾ ತಂಡದ ನಿರ್ದೇಶಕ ಲವ, ಈ ಕುರಿತು ವಿವರಣೆಯನ್ನೂ ನೀಡಿದ್ದಾರೆ. 'ನಮ್ಮ ಸಿನಿಮಾದಲ್ಲಿ ಅಂತಹ ಯಾವುದೇ ದೃಶ್ಯಗಳು ಇಲ್ಲ. ನಮ್ಮ ಚಿತ್ರಕ್ಕೂ ಹತ್ಯೆಯ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ' ಎಂದಿದ್ದಾರೆ.

ಕವಿತಾ ಪತ್ರ ಮತ್ತು ನಿರ್ದೇಶಕರ ಮಾತು ಗೊಂದಲ ಮೂಡಿಸಿವೆ. ಟಗರು ಸಿನಿಮಾದಲ್ಲಿ ಕಾನ್ಸ್‌ಟೇಬಲ್‌ ಸರೋಜ ಪಾತ್ರ ಮಾಡಿದ್ದ ತ್ರಿವೇಣಿ ಮಿ.ನಟ್ವರ್ಲಾಲ್‌ ಚಿತ್ರದಲ್ಲಿ ಗೌರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಕೂಡಯಿತ್ತು. ಅದನ್ನೂ ನಿರ್ದೇಶಕರು ಅಲ್ಲಗಳೆದಿದ್ದಾರೆ.

'ಗೌರಿ ಅವರ ಬಗ್ಗೆ ನನಗೂ ಅಪಾರವಾದ ಗೌರವವಿದೆ. ಅವರ ಬಗ್ಗೆ ನಾನೂ ತಿಳಿದುಕೊಂಡಿದ್ದೇನೆ. ಅವರ ಬರಹವನ್ನೂ ಓದಿದ್ದೇನೆ. ಸಿನಿಮಾದ ಬಗ್ಗೆ ಯಾವುದೇ ಗೊಂದಲ ಮೂಡಬಾರದು. ಇದೊಂದು ಬೇರೆ ರೀತಿಯ ಚಿತ್ರ' ಎಂದಿದ್ದಾರೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌