ಆ್ಯಪ್ನಗರ

ಭುವನ್‌ ಜತೆ ನಿಶ್ಚಿತಾರ್ಥದ ಬಗ್ಗೆ ಸಂಜನಾ ಹೇಳಿದ್ದೇನು?

ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಮತ್ತು ಸಂಜನಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದಟ್ಟವಾಗಿತ್ತು.

Vijaya Karnataka Web 23 Oct 2017, 9:31 am

ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಮತ್ತು ಸಂಜನಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದಟ್ಟವಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ಸಂಜನಾ. ಯಾವುದೇ ಕಾರಣಕ್ಕೂ ತಾವಿಬ್ಬರೂ ಎಂಗೇಜ್‌ಮೆಂಟ್‌ ಮಾಡಿಕೊಳ್ಳುತ್ತಿಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ.

ಸುದೀಪ್‌ ಜತೆ ನಟಿಸುವೆ

ಒಳ್ಳೆಯ ಕತೆ ಮತ್ತು ಅವಕಾಶ ಸಿಕ್ಕರೆ ಕಂಡಿತಾ ಸುದೀಪ್‌ ಮತ್ತು ದರ್ಶನ್‌ ಜತೆ ಸಿನಿಮಾ ಮಾಡುವುದಾಗಿ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಪುನೀತ್‌ ಕೂಲ್‌ ಆಗಿಯೇ ಉತ್ತರ ನೀಡಿದ್ದಾರೆ.

ಕನಕನಾಗಿ ಯಶಸ್‌ ಸೂರ್ಯ

ಕನಕದಾಸರ ಜೀವನವನ್ನಾಧರಿಸಿದ ಸಿನಿಮಾವೊಂದು ಕನ್ನಡದಲ್ಲಿ ಮೂಡಿ ಬರುತ್ತಿದೆ. ಕನಕನ ಪಾತ್ರದಲ್ಲಿ ಯಶಸ್‌ ಸೂರ್ಯ ಕಾಣಿಸಿಕೊಳ್ಳುತ್ತಿದ್ದು, ನಾಗೇಶ್‌ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾಗೆ ರಾಮಧಾನ್ಯ ಎಂದು ಹೆಸರಿಡಲಾಗಿದೆ.

ಕಾಂಬೋ ಪ್ರಕಾಶ್‌

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಮತ್ತೊಂದು ಸಿನಿಮಾ ಕೈ ಗೆತ್ತಿಕೊಂಡಿದ್ದಾರೆ. ಮದರಂಗಿ ಕೃಷ್ಣ ಮತ್ತು ವಿನೋದ್‌ ಪ್ರಭಾಕರ್‌ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದು, ಚಿತ್ರಕ್ಕೆ ವೇದ ವ್ಯಾಸ ಎಂದು ಹೆಸರಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌