ಆ್ಯಪ್ನಗರ

ನೀರಿನ ಮಹತ್ವ ಸಾರುವ 'ಅಘ್ರ್ಯಂ'ಗೆ ಎಚ್‌ಎಸ್‌ವಿ ಹಾಡು

ಅಘ್ರ್ಯಂಗೆ ಎಚ್‌ಎಸ್‌ವಿ ಹಾಡು ಜಲ ಸಮಸ್ಯೆ ಕುರಿತಾಗಿ ತಯಾರಾಗುತ್ತಿರುವ ಅಘ್ರ್ಯಂ ಚಿತ್ರಕ್ಕಾಗಿ ಸಾಹಿತಿ ಎಚ್‌ಎಸ್‌‌ವಿ ಅವರ ಎರಡು ಹಾಡುಗಳನ್ನು ಬಳಸಿಕೊಂಡಿದ್ದಾರೆ. ನೀರನ್ನು ಮಿತವಾಗಿ ಬಳಸಿ, ಕೆರೆಗಳನ್ನು ಉಳಿಸಿ ಎಂಬ ಸಂದೇಶದೊಂದಿಗೆ ಈ ಸಿನಿಮಾ ತಯಾರಾಗಿದ್ದು, ಜಲಜಾಗೃತಿಯೇ ಸಿನಿಮಾದ ಪ್ರಧಾನ ಆಶಯವಂತೆ.

Vijaya Karnataka 11 May 2019, 9:58 am
ಜಲ ಸಮಸ್ಯೆ ಕುರಿತಾಗಿ ತಯಾರಾಗುತ್ತಿರುವ ಅಘ್ರ್ಯಂ ಚಿತ್ರಕ್ಕಾಗಿ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಎರಡು ಹಾಡುಗಳನ್ನು ಬಳಸಿಕೊಂಡಿದ್ದಾರಂತೆ ನಿರ್ದೇಶಕ ಶ್ರೀನಿವಾಸ್‌. ನೀರನ್ನು ಮಿತವಾಗಿ ಬಳಸಿ, ಕೆರೆಗಳನ್ನು ಉಳಿಸಿ ಎಂಬ ಸಂದೇಶದೊಂದಿಗೆ ಈ ಸಿನಿಮಾ ತಯಾರಾಗಿದ್ದು, ಜಲಜಾಗೃತಿಯೇ ಸಿನಿಮಾದ ಪ್ರಧಾನ ಆಶಯವಂತೆ.
Vijaya Karnataka Web hsv


'ಈ ಹಿಂದೆ ನೀರಿನ ಕುರಿತಾಗಿ ಬೇಂದ್ರೆ ಅವರು ಹಾಡು ಬರೆದಿದ್ದರು. ನಮಗೆಲ್ಲ ಆ ಹಾಡು ಸ್ಫೂರ್ತಿ ಆಗಿತ್ತು. ಈಗ ನನಗೂ ಅಂತಹ ಹಾಡು ಬರೆಯುವ ಅವಕಾಶ ಬಂದಿದೆ. ಸ್ವಾರ್ಥಕ್ಕಾಗಿ ನೀರಿನ ಬಳಕೆ ಹೇಗೆಲ್ಲ ಆಗುತ್ತಿದೆ ಎಂಬುದನ್ನು ಹಾಡಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ' ಎಂದಿದ್ದಾರೆ ಎಚ್‌.ಎಸ್‌.ವಿ

ರಾಜೇಶ್‌ ರಾವ್‌, ಸ್ಪರ್ಶ ಶಣೈ, ಆನಂದ್‌ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದು, ಪಳನಿ ಸೇನಾಪತಿ ಅವರ ಸಂಗೀತ ಈ ಚಿತ್ರಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌