ಆ್ಯಪ್ನಗರ

ಬಿಚ್ಚುಗತ್ತಿ ಭರಮಣ್ಣನ ಜತೆ ಹರಿಪ್ರಿಯಾ

ವಿಕ್ಟರಿ 2 ಚಿತ್ರದ ನಂತರ ನಿರ್ದೇಶಕ ಹರಿ ಸಂತೋಷ್‌ ಐತಿಹಾಸಿಕ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ...

Vijaya Karnataka 7 Dec 2018, 5:00 am
ಅಲೆಮಾರಿ, ಕಾಲೇಜ್‌ಕುಮಾರ್‌, ವಿಕ್ಟರಿ-2 ಸಿನಿಮಾದ ನಿರ್ದೇಶಕ ಹರಿಸಂತೋಷ್‌ ಬಿಚ್ಚುಗತ್ತಿ ಎಂಬ ಐತಿಹಾಸಿಕ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
Vijaya Karnataka Web haripriya-latest-photoshoot-stills_150096128730


ಬಿ ಎಲ್‌ ವೇಣು ಅವರು ಬರೆದಿರುವ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ತಯಾರುತ್ತಿದ್ದು, ನಾಯಕನಾಗಿ ರಾಜವರ್ಧನ್‌ ನಟಿಸುತ್ತಿದ್ದಾರೆ. ರಾಜವರ್ಧನ್‌ಗೆ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರಂತೆ.

'ವಿಕ್ಟರಿ ನಂತರ ನಾನು ಕೈಗೆತ್ತಿಕೊಂಡ ಪ್ರಾಜೆಕ್ಟ್ ಇದಾಗಿದೆ. ಬಿ ಎಲ್‌ ವೇಣು ಅವರ ಕಾದಂಬರಿಯೇ ಸಿನಿಮಾವಾಗುತ್ತಿದೆ. ಐತಿಹಾಸಿಕ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸು ಅದನ್ನು ಈಗ ಈಡೇರಿಸಿಕೊಳ್ಳುತ್ತಿದ್ದೇನೆ. ಇದು ಬಹುತೇಕ ಸೆಟ್‌ನಲ್ಲಿಯೇ ನಡೆಯುವ ಸಿನಿಮಾ. ಇದರ ಜತೆಗೆ ಚಿತ್ರದುರ್ಗದಲ್ಲಿ ಮೂವತ್ತು ದಿನಗಳ ಕಾಲ ಶೂಟಿಂಗ್‌ ಮಾಡುತ್ತೇವೆ. ಕಾದಂಬರಿ ಆಧಾರಿತ ಚಿತ್ರವನ್ನು ಮೊದಲ ಬಾರಿಗೆ ಕೈಗೆತ್ತಿಕೊಂಡಿದ್ದೇನೆ. ನನಗೆ ಇದು ಸಿಕ್ಕಾಪಟ್ಟೆ ಚಾಲೆಂಜಿಂಗ್‌ ಕೆಲಸವಾಗಿದೆ.,'ಎನ್ನುತ್ತಾರೆ ನಿರ್ದೇಶಕ ಹರಿಸಂತೋಷ್‌.

ಸಿನಿಮಾಗಾಗಿ ನಿರ್ದೇಶಕರು ನಾಯಕಿಯನ್ನು ಹುಡುಕುತ್ತಿದ್ದಾಗ, ಹರಿಪ್ರಿಯಾ ಸೂಟ್‌ ಆಗುತ್ತಾರೆ ಎಂದನಿಸಿ ಅವರನ್ನು ಆಯ್ಕೆ ಮಾಡಿದ್ದಾರೆ. ಈಗಾಗಲೇ ಅವರ ಜತೆ ಮಾತುಕತೆ ಮುಗಿದಿದ್ದು, ತಮ್ಮ ಪಾತ್ರದ ಬಗ್ಗೆ ಅವರು ಖುಷಿಯಾಗಿದ್ದಾರಂತೆ. ಈ ಸಿನಿಮಾಗೆ ಚಿತ್ರದುರ್ಗದವರೇ ನಿರ್ಮಾಪಕರು ಆಗಿದ್ದಾರಂತೆ. ಡಿ. 10ರಿಂದ ಸಿನಿಮಾ ಟೇಕಾಫ್‌ ಆಗಲಿದೆ.

---

ಕೋಟ್‌..

ಬಿಚ್ಚುಗತ್ತಿ ಒಂದೊಳ್ಳೆ ವಿಷುಯಲ್‌ ಟ್ರಿಟ್‌ಮೆಂಟ್‌ ಇರುವ ಚಿತ್ರವಾಗುತ್ತದೆ. ಈಗಾಗಲೇ ಸೆಟ್‌ ಕೆಲಸಗಳು ನಡೆತಯುತ್ತಿದ್ದು, ನಾಯಕ ರಾಜವರ್ಧನ್‌ ಭರಮಣ್ಣ ನಾಯಕನಾಗಲು ತಯಾರಿ ನಡೆಸಿದ್ದಾರೆ.

-ಹರಿ ಸಂತೋಷ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌