ಆ್ಯಪ್ನಗರ

ಜೋಡೆತ್ತುಗಳಿಗೆ 'ಮುಂದಿದೆ ಹಬ್ಬ' ಎಂದ ಸಿಎಂ ಕುಮಾರಸ್ವಾಮಿ!

ಜೋಡೆತ್ತುಗಳ ಮೇಲೆ ಸಿಎಂ ಕುಮಾರಸ್ವಾಮಿ ಈಗ ಸಖತ್ ಗರಂ ಆಗಿದ್ದಾರೆ. ಹುಬ್ಬಳ್ಳಿಯ ಸಮಾವೇಶದಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ ಕುಮಾರಸ್ವಾಮಿಯವರು "ಯಶ್ ಹಾಗೂ ದರ್ಶನ್ ಅವರಿಬ್ಬರಿಗೂ ಮುಂದಿದೆ ಹಬ್ಬ" ಎಂದು ಹೇಳುವ ಮೂಲಕ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

Vijaya Karnataka Web 19 Apr 2019, 9:53 pm
ನಿನ್ನೆ, ಏಪ್ರಿಲ್ 18, 2019ರಂದು ಲೋಕಸಭಾ ಚುನಾವಣೆಯ ಮೊದಲ ಹಂತ ಮುಗಿದಿದೆ. ಮಂಡ್ಯದ ಲೋಕಸಭೆ ಚುನಾವಣೆ ದೇಶದಲ್ಲೇ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರವಾಗಹಿದೆ. ಆದರೆ, ಆ ಕಾವು ಮಾತ್ರ ಇನ್ನೂ ಇಳಿದಿಲ್ಲ. ಮಂಡ್ಯ ಚುನಾವಣೆಯು ಇಡೀ ದೇಶಾದ್ಯಂತ ಸುದ್ದಿ ಮಾಡಿದೆ. ಈಗ ಈ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ. ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ಸಂಪೂರ್ಣ ಬೆಭಲ ನೀಡಿದ್ದ 'ಜೋಡೆತ್ತು' ಖ್ಯಾತಿಯ ಯಶ್-ದರ್ಶನ್ ಮೇಲೆ ಸಖತ್ ಕಿಡಿ ಕಾರಿದ್ದಾರೆ.
Vijaya Karnataka Web yash-darshan1904


ಮಂದ್ಯದಲ್ಲಿ ಸುಮಲತಾ ಪರ ಪ್ರಚಾರದ ವೇಳೆ ಯಶ್ ಸಿಎಂ ಮಾತುಗಳಿಗೆ ತಿರುಗೇಟು ನೀಡಿದ್ದರು. ಯಶ್ 'ಮೈತ್ರಿ ಪಕ್ಷ'ವನ್ನ ಕಳ್ಳರ ಪಕ್ಷವೆಂದು ಹೇಳಿದ್ದಾರೆಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಸ್ವತಃ ಉತ್ತರಿಸಿದ್ದ ಯಶ್ "ನಾನು ಆ ರೀತಿ ಹೇಳಿಲ್ಲ. ಒಂದು ವೇಳೆ ಸಾಬೀತಾದರೆ ಸಿನಿಮಾ ಮಾತ್ರವಲ್ಲ, ರಾಜ್ಯವನ್ನೇ ಬಿಡ್ತೀನಿ" ಎಂದಿದ್ದರೆ. ಅಲ್ಲದೇ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡುವುದಕ್ಕೂ ನಾನು ರೆಡಿ. ನಾವು ಕಲಾವಿದರು ಕನ್ನಡಿಗರ ಆಸ್ತಿ, ನಮ್ಮನ್ನೇನು ಮಾಡಲು ಸಾಧ್ಯವಿಲ್ಲ' ಎಂದಿದ್ದರು.

ಆದರೆ, ಈ ಜೋಡೆತ್ತುಗಳ ಮೇಲೆ ಸಿಎಂ ಕುಮಾರಸ್ವಾಮಿ ಈಗ ಸಖತ್ ಗರಂ ಆಗಿದ್ದಾರೆ. ಹುಬ್ಬಳ್ಳಿಯ ಸಮಾವೇಶದಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ ಕುಮಾರಸ್ವಾಮಿಯವರು "ಯಶ್ ಹಾಗೂ ದರ್ಶನ್ ಅವರಿಬ್ಬರಿಗೂ ಮುಂದಿದೆ ಹಬ್ಬ" ಎಂದು ಹೇಳುವ ಮೂಲಕ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ. ಒಟ್ಟಿನಲ್ಲಿ, ಮಂಡ್ಯದ ಚುನಾವಣೆ ಮುಗಿದರೂ ಚುನಾವಣೆ ಕಾವು ಮಾತ್ರ ಇನ್ನೂ ಮುಗಿದಿಲ್ಲ ಎನ್ನಬಹುದು.

ಅಂದಹಾಗೆ, ಸಿಎಂ ಕುಮಾರಸ್ವಾಮಿ ಅವರು, ಎರಡನೇ ಹಂತದ ಲೋಕಸಭೆ ಚುನಾವಣೆಯ ಪ್ರಚಾರಕಾರ್ಯಕ್ಕಾಗಿ ಉತ್ತರ ಕರ್ನಾಟಕ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕಡೆ ಓಡಾಟ ನಡೆಸಿದ್ದಾರೆ. ಅಲ್ಲಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿರುವ ಕುಮಾರಸ್ವಾಮಿ, ಮಂಡ್ಯದ ಚುನಾವಣೆ ಕಾವಿನಿಂದ ಮಾತ್ರ ಹೊರಬಂದಿಲ್ಲ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌