ಆ್ಯಪ್ನಗರ

ಅನುಬಂಧ ಅವಾರ್ಡ್ಸ್‌ನಲ್ಲಿ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿತು? ಸ್ಟಾರ್ ನಟ-ನಟಿಯರು ಹೇಳಿದ್ದೇನು?

'ಅನುಬಂಧ ಅವಾರ್ಡ್ಸ್ 2019' ಹಬ್ಬ ಶುರುವಾಗಿದೆ. ಈ ಸಮಾರಂಭದಲ್ಲಿ ಯಾರು ಯಾರು ಅತಿಥಿಗಳಾಗಿ ಆಗಮಿಸಿದ್ದರು? ಯಾರು ಯಾರಿಗೆ ಯಾವ ಯಾವ ಪ್ರಶಸ್ತಿ ಸಿಕ್ಕಿದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Vijaya Karnataka Web 29 Sep 2019, 2:08 pm
ಅನುಬಂಧ ಅವಾರ್ಡ್ಸ್ ಇದು ಕಲರ್ಸ್ ವಾಹಿನಿ ಜೊತೆ ಜೊತೆಯಲ್ಲಿ ಪ್ರೇಕ್ಷಕರಿಗೂ ಕೂಡ ಇಷ್ಟವಾಗುವ ಒಂದು ಕಾಯಕ್ರಮ. ಮೋಜು, ಮಸ್ತಿ ಜೊತೆ ಜೊತೆಯಲ್ಲಿ ಹಲವಾರು ಎಮೋಷನ್ಸ್‌, ಸುಖ-ದುಃಖ ಕೂಡ ಇಲ್ಲಿ ಹೊರಹಾಕಲ್ಪಡುತ್ತವೆ. ಅಷ್ಟೇ ಅಲ್ಲದೆ ಕಲಾವಿದರಿಗೆ ವಿಧ ವಿಧವಾದ ವಿಭಾಗದಲ್ಲಿ ಪ್ರಶಸ್ತಿಗಳು ಕೂಡ ಲಭಿಸುತ್ತವೆ. ಈ ಬಾರಿಯ ವಿಶೇಷತೆ ಏನು?
Vijaya Karnataka Web abubandha awrds 2019 new


ಆ್ಯಂಕರಿಂಗ್ ಕೆಲಸ ಶುರು ಮಾಡಿದ ರಚಿತಾ
ಅನುಬಂಧದಲ್ಲಿ ರಚಿತಾ ರಾಮ್ ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದಾರೆ. 'ಮಜಾಭಾರತ' ಶೋದಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಚಿತಾ ನಿರೂಪಣೆ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು. "ಮೊದಲಿಗೆ ನನ್ನ ಆ್ಯಂಕರಿಂಗ್ ಇಷ್ಟ ಆದರೆ ವೆಲ್‌ಡನ್ ರಚಿತಾ ಅಂತ ಹೇಳಿ, ಇಷ್ಟ ಆಗ್ಲಿಲ್ಲ ಎಂದರೆ ಈ ಡಿಂಪಲ್ ನೋಡಿ ಕ್ಷಮಿಸಿಬಿಡಿ" ಎಂದು ಮೊದಲೇ ಹೇಳಿದ್ದರು.

ವಿಶೇಷ ಅತಿಥಿಗಳಾರು?
ವಿ.ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಶ್ರೀಮುರಳಿ, ಶ್ರೀಲೀಲಾ, ಜೈ ಜಗದೀಶ್, ಗುರುಕಿರಣ್, ನಾಗತೀಹಳ್ಳಿ ಚಂದ್ರಶೇಖರ್, ಜಗ್ಗೇಶ್, ಪರಿಮಳಾ ಜಗ್ಗೇಶ್, ವಿಜಯಲಕ್ಷ್ಮೀ ಸಿಂಗ್,ಭಾವನಾ ಮೆನನ್, ತಾರಾ ಮುಂತಾದವರು ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿ, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಮನ ಮೆಚ್ಚಿದ ಸಹೋದರ ಯಾರು?

ಕಾರ್ತಿಕ್ ( ರಕ್ಷಾ ಬಂಧನ ಧಾರಾವಾಹಿ)

ಉತ್ತಮ ಸಂಭಾಷಣೆ ಬರೆದವರಾರು?
ಪದ್ಮಿನಿ ಪೃಥ್ವಿರಾಜ್ ಜೈನ್ (ರಾಧಾ ರಮಣ ಧಾರಾವಾಹಿ)

ಮನೆ ಮೆಚ್ಚಿದ ಮಾವ
ದೇವರಾಜ್ ( ಸೀತಾ ವಲ್ಲಭ ಧಾರಾವಾಹಿ)

ಮನೆ ಮೆಚ್ಚಿದ ಅತ್ತೆ

ಗಿರಿಜಾ (ಮಿಥುನ ರಾಶಿ ಧಾರಾವಾಹಿ)

ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್ ಬದಲು ಬೇರೆ ನಿರೂಪಕಿ! ಯಾರು?

ಮನೆ ಮೆಚ್ಚಿದ ಮಗ

ರಾಜೀವ (ಮಂಗಳಗೌರಿ ಮದುವೆ ಧಾರಾವಾಹಿ)

ಮನೆ ಮೆಚ್ಚಿದ ಅಳಿಯ
ಸಾಕೇತ್ (ನಮ್ಮನೆ ಯುವರಾಣಿ ಧಾರಾವಾಹಿ)

ಮನೆ ಮೆಚ್ಚಿದ ಸಹೋದರಿ
ಛಾಯಾ (ರಂಗನಾಯಕಿ ಧಾರಾವಾಹಿ)

ಬೆಸ್ಟ್ ರೇಟೆಡ್ ಫಿಕ್ಷನ್

ಅಗ್ನಿಸಾಕ್ಷಿ ಧಾರಾವಾಹಿ

ಉತ್ತಮ ಸಂಕಲನ
ಮಂಜು ಮೊಗಲಹಳ್ಳಿ (ನಮ್ಮನೆ ಯುವರಾಣಿ ಧಾರಾವಾಹಿ)

ಮನೆ ಮೆಚ್ಚಿದ ಹಿರಿಯರು

ಸರಸ್ವತಮ್ಮ (ಇಷ್ಟದೇವತೆ ಧಾರಾವಾಹಿ)

ಜನ ಮೆಚ್ಚಿದ ಸ್ಟೈಲ್ ಐಕಾನ್ (ಫಿಮೇಲ್)
ಶ್ರುತಿ (ಲಕ್ಷ್ಮೀ ಬಾರಮ್ಮ ಧಾರಾವಾಹಿ)

ಅನುಬಂಧ ಲ್ಲಿನೃತ್ಯ ಮಾಡಿದ್ದು ಖುಷಿಯ ಸಂಗತಿ ಎಂದ ಶರಣ್‌

ಉತ್ತಮ ನಿರ್ದೇಶನ
ವಿನೋದ್ ಧೋಂಡಾಳೆ (ಮಿಥುನ ರಾಶಿ ಧಾರಾವಾಹಿ)

ಜನ ಮೆಚ್ಚಿದ ಶಕುನಿ

ಭದ್ರ (ರಂಗನಾಯಕಿ ಧಾರಾವಾಹಿ)

ಜನ ಮೆಚ್ಚಿದ ಮಂಥರೆ

ಚಂದ್ರಿಕಾ (ಅಗ್ನಿಸಾಕ್ಷಿ ಧಾರಾವಾಹಿ)

ಆ್ಯಂಕರಿಂಗ್ ಕೆಲಸ ಶುರು ಮಾಡಿದ ರಚಿತಾ ಸಿನಿಮಾ ಬಿಟ್ಟುಬಿಟ್ರಾ? ; ರಚಿತಾ ಹೇಳಿದ್ದೇನು?
ಜನ ಮೆಚ್ಚಿದ ಯೂಥ್ ಐಕಾನ್
ಮೈಥಿಲಿ (ಸೀತಾ ವಲ್ಲಭ ಧಾರಾವಾಹಿ)

ಉತ್ತಮ ಕಥೆ-ಚಿತ್ರಕಥೆ
ಕೆ.ಎಸ್.ರಾಮ್‌ಜಿ (ಮಂಗಳ ಗೌರಿ ಮದುವೆ ಧಾರಾವಾಹಿ)

ಇಂದು ಸಂಜೆ 7ಗಂಟೆಗೆ 'ಅನುಬಂಧ ಅವಾರ್ಡ್ಸ್' ಪ್ರಸಾರವಾಗಲಿದೆ. ಆಗ ಇನ್ನೂ ಹಲವು ಪ್ರಶಸ್ತಿಗಳನ್ನು ಬಹುಮಾನಿತರಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಕೆಲವು ನೃತ್ಯ ಪ್ರದರ್ಶನಗಳಿದ್ದು, ಅಕುಲ್ ಬಾಲಾಜಿ ಕೂಡ ರಚಿತಾ ರಾಮ್ ಜೊತೆಗೆ ನಿರೂಪಣೆ ಮಾಡಿದ್ದಾರೆ. ಅನುಬಂಧ ಅವಾರ್ಡ್ಸನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕೂಡ ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌