ಆ್ಯಪ್ನಗರ

'ನಾತಿಚರಾಮಿ' ವಿರುದ್ಧದ ದೂರಿಗೆ ಸೂಚನೆ ನೀಡಿದ ಹೈಕೋರ್ಟ್: ದಯಾಳ್ ಪದ್ಮನಾಭನ್, ಲಿಂಗದೇವರು ಹೇಳಿದ್ದೇನು?

ಪ್ರಸಕ್ತ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ 'ನಾತಿಚರಾಮಿ' ಚಿತ್ರಕ್ಕೆ ಐದು ಪ್ರಶಸ್ತಿ ಘೋಷಿಸಿರುವುದನ್ನು ತಡೆ ಹಿಡಿಯಬೇಕೆಂದು ಕೋರಿದ್ದ ಅರ್ಜಿಗೆ ಹೈಕೋರ್ಟ್ ನ್ಯಾಯಪೀಠ ನ್ಯಾಶನಲ್ ಫಿಲ್ಮ್ ಅವಾರ್ಡ್ಸ್ ಅಥೋರಿಟಿಗೆ ಸೂಚನೆ ನೀಡಿದೆ.

Vijaya Karnataka Web 11 Sep 2019, 1:59 pm
ಸಿನಿಮಾ ನಿರ್ದೇಶಕ ದಯಾಳ್ ಪದ್ಮನಾಭನ್ " ನನ್ನ 'ಆ ಕರಾಳ ರಾತ್ರಿ' ಚಿತ್ರಕ್ಕೆ ನಾತಿಚರಾಮಿ ಚಿತ್ರಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆ ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸದೆ, ನಾತಿಚರಾಮಿಗೆ ಐದು ಪ್ರಶಸ್ತಿ ನೀಡಿರುವ ನಿರ್ಧಾರ ಏಕಪಕ್ಷೀಯವಾಗಿದೆ. ಇದು ಸಂವಿಧಾನದ 14ನೇ ವಿಧಿ ಉಲ್ಲಂಘನೆಯಾಗಿದೆ" ಎಂದು ದಯಾಳ್ ಪದ್ಮನಾಭನ್ ದೂರಿದ್ದರು.
Vijaya Karnataka Web dayal lingadevaru


ಈಗ ಡೈರೆಕ್ಟರ್ಸ್ ಆಫ್ ಫಿಲ್ಮ್ ಫೆಸ್ಟಿವಲ್‌ನ ಎಂಟು ವಾರಗಳ ಒಳಗಿನ ತನಿಖೆಯಲ್ಲಿ ಲಿಂಗದೇವರು ತಮ್ಮ ತಪ್ಪು ಒಪ್ಪಿಕೊಂಡರೆ, ನ್ಯಾಶನಲ್ ಫಿಲ್ಮ್ ಅವಾರ್ಡ್, ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ, ಇಂಡಿಯನ್ ಪನೋರಮಾಕ್ಕೆ ಜೀವನಪರ್ಯಂತ ಜ್ಯೂರಿಯಾಗಿ ನಿಷೇಧಿಸುವಂತೆ ಡೈರೆಕ್ಟರ್ಸ್ ಆಫ್ ಫಿಲ್ಮ್ ಫೆಸ್ಟಿವಲ್‌ಗೆ, ಹೈಕೋರ್ಟ್‌ ಸೂಚನೆ ನೀಡಿದೆ.

ನಾತಿಚರಾಮಿಗೆ ಐದು ರಾಷ್ಟ್ರೀಯ ಪ್ರಶಸ್ತಿ ಪ್ರಶ್ನಿಸಿ ಅರ್ಜಿ: ಕೇಂದ್ರಕ್ಕೆ ತುರ್ತು ನೋಟಿಸ್‌


" ಕೋರ್ಟ್ ಹೋಗುವ ಮುಂಚೆ ಡೈರೆಕ್ಟರ್ ಆಫ್ ಫಿಲ್ಮ್ ಫೆಸ್ಟಿವಲ್‌ಗೆ ದೂರು ಕೊಟ್ಟೆ. ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಕೋರ್ಟ್‌ಗೆ ಹೋದೆ. ತದನಂತರದಲ್ಲಿ ತನಿಖೆ ಶುರು ಮಾಡಿದ್ದೇವೆಂದು ಕೋರ್ಟ್‌ಗೆ ಹೇಳಿದ್ದಾರೆ. ಮೊದಲೇ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿದ್ದರೆ ಕೋರ್ಟ್‌ಗೆ ಹೋಗುತ್ತಿರಲಿಲ್ಲ. ನಾನು ಬಯಸಿದ್ದು ಈಗ ಸಿಕ್ಕಿದೆ." ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ವಿಜಯಕರ್ನಾಟಕ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜಿ.ಆರ್.ಮೋಹನ್ ಅವರು ದಯಾಳ್ ಪದ್ಮನಾಭನ್ ನೀಡಿದ್ದ ದೂರಿನ ವಕಾಲತ್ತು ವಹಿಸಿದ್ದರು. ನವದೆಹಲಿಯಲ್ಲಿರುವ ಚಲನಚಿತ್ರೋತ್ಸವ ನಿರ್ದೇಶನಾಲಯದ ಕಾರ್ಯದರ್ಶಿ, 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018ರ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್.ಲಿಂಗದೇವರು ಮತ್ತು 'ನಾತಿಚರಾಮಿ' ಚಿತ್ರದ ನಿರ್ಮಾಪಕ ಎಂ.ರಮೇಶ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ತಡೆ ಹಿಡಿಯಲು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ

ಈ ಬಗ್ಗೆ ವಿಜಯಕರ್ನಾಟಕ ವೆಬ್‌ಸೈಟ್, ಲಿಂಗದೇವರು ಅವರನ್ನು ಸಂಪರ್ಕಿಸಿದಾಗ "ನನಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ಗೊತ್ತಿಲ್ಲದೆ ಕಾಮೆಂಟ್ ಮಾಡುವುದು ನನ್ನ ವ್ಯಕ್ತಿತ್ವಕ್ಕೆ ಸೂಕ್ತವಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಎಸ್.ಲಿಂಗದೇವರು 'ಅಕ್ಕ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿ'ಯ ನಿರ್ದೇಶಕರಾಗಿದ್ದರು. 'ನಾತಿಚರಾಮಿ' ಚಿತ್ರದ ಸಂಕಲನಕ್ಕೆ 'ಅಕ್ಕ' ಕಂಪನಿ ಸಹಾಯ ಮಾಡಿತ್ತು. ಹೀಗಾಗಿ ಲಿಂಗದೇವರು 'ನಾತಿಚರಾಮಿ' ಚಿತ್ರದ ನಿರ್ಮಾಣದಲ್ಲಿ ನೇರ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಆದರೆ ಆಯ್ಕೆ ಸಮಿತಿ ಮುಂದೆ ನೀಡಲಾಗಿದ್ದ ಘೋಷಣಾ ಪ್ರಮಾಣ ಪತ್ರದಲ್ಲಿ ಅಂಶವನ್ನು ಮುಚ್ಚಿಡಲಾಗಿದೆ ಎಂದು ದಯಾಳ್ ಪದ್ಮನಾಭನ್ ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌