ಆ್ಯಪ್ನಗರ

ಯಶ್ ಬಾಡಿಗೆ ಮನೆ ವಿವಾದ: ಇನ್ನೆರಡು ತಿಂಗಳು ವಾಸಕ್ಕೆ ಅವಕಾಶ

ಈ ಸಂಬಂಧ ಯಶ್ ಅವರ ತಾಯಿ ಪುಷ್ಪಾ ಅವರು ಅರ್ಜಿ ಸಲ್ಲಿಸಿದ್ದರು. ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಗೆ ನಮ್ಮ ಕುಟುಂಬ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ. ಹಾಗಾಗಿ 6 ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

Vijaya Karnataka Web 29 Mar 2019, 5:32 pm
ಬೆಂಗಳೂರು ಬನಶಂಕರಿಯಲ್ಲಿನ ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದ ಕೋರ್ಟ್ ಮೆಟ್ಟಿಲೇರಿರುವುದು ಗೊತ್ತೇ ಇದೆ. ಮಾರ್ಚ್ 31ಕ್ಕೆ ಮನೆ ಖಾಲಿ ಮಾಡಲು ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದೀಗ ಇನ್ನೆರಡು ತಿಂಗಳ ಕಾಲಾವಕಾಶ ನೀಡಿದೆ ಹೈಕೋರ್ಟ್‌ನ ವಿಭಾಗೀಯ ಪೀಠ.
Vijaya Karnataka Web yash2 (1)


ಈ ಸಂಬಂಧ ಯಶ್ ಅವರ ತಾಯಿ ಪುಷ್ಪಾ ಅವರು ಅರ್ಜಿ ಸಲ್ಲಿಸಿದ್ದರು. ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಗೆ ನಮ್ಮ ಕುಟುಂಬ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ. ಹಾಗಾಗಿ 6 ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಪರ ವಕೀಲರು ಎರಡು ತಿಂಗಳು ಕಾಲಾವಕಾಶ ನೀಡಲು ಒಪ್ಪಿದ್ದರು. ಹಾಗಾಗಿ ಮೇ 31ರ ತನಕ ಹೈಕೋರ್ಟ್ ಕಾಲಾವಕಾಶ ನೀಡಿದೆ. ಕೋರ್ಟ್ ಆದೇಶದ ಪ್ರಕಾರ ಇನ್ನೆರಡು ತಿಂಗಳು ಆ ಮನೆಯಲ್ಲೇ ಇರಬಹುದು.

ಏನಿದು ವಿವಾದ?
ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಎಂಬ ದಂಪತಿಗಳು ಬನಶಂಕರಿಯ ತಮ್ಮ ಮನೆಯನ್ನು ಯಶ್ ಕುಟುಂಬಕ್ಕೆ 2010ರಲ್ಲಿ ಬಾಡಿಗೆಗೆ ನೀಡಿದ್ದರು. ಡಿಸೆಂಬರ್ 31, 2018ಕ್ಕೆ ಬಾಕಿ ಉಳಿದಿರುವ ಬಾಡಿಗೆಯನ್ನು ಪಾವತಿಸಬೇಕು ಎಂದು ಹೈಕೋರ್ಟ್ ಡೆಡ್‌ಲೈನ್ ನೀಡಿತ್ತು. ಬಾಕಿ ಮೊತ್ತ ₹ 23 ಲಕ್ಷಗಳ ಡಿಡಿ ನೀಡಲಾಗಿತ್ತು.

2015ರಲ್ಲಿ XLII ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟ ಆರಂಭವಾಯಿತು. ಎ ಪುಷ್ಪಾ (ಯಶ್ ತಾಯಿ) ಹೆಸರಿನಲ್ಲಿದ್ದ ಬನಶಂಕರಿಯ ಬಾಡಿಗೆ ಮನೆಯನ್ನು ಖಾಲಿ ಮಾಡಿಸಬೇಕು ಎಂದು ಮಾಲೀಕರು ಕೋರ್ಟ್‌ ಮೆಟ್ಟಿಲೇರಿದ್ದರು. ಅಕ್ಟೋಬರ್ 2010ರಲ್ಲಿ ಈ ಮನೆಯನ್ನು ತಿಂಗಳಿಗೆ ₹ 40,000 ಬಾಡಿಗೆಗೆ ನೀಡಲಾಗಿತ್ತು. ಲೀಸ್ ಅವಧಿ 11 ತಿಂಗಳು. ಲೀಸ್ ಅವಧಿ ಮುಗಿದ ಬಳಿಕ ಶೇ.5ರಷ್ಟು ಬಾಡಿಗೆ ಏರಿಕೆ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2015ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಶ್ ಮತ್ತವರ ಅಭಿಮಾನಿಗಳು ನಮಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದರು.

ಯಶ್ ಪಾಲಿನ ಲಕ್ಕಿ ಮನೆ
2010ರಲ್ಲಿ ಯಶ್ ಆಗಿನ್ನೂ ಉದಯೋನ್ಮುಖ ನಟ. ಅದೇ ವರ್ಷ ಅವರ ಅಭಿನಯದ ಸಿನಿಮಾ ಬಿಡುಗಡೆಯಾಗಿತ್ತು. ಬಳಿಕ ನಿಧಾನಕ್ಕೆ ಅವರ ವರ್ಚಸ್ಸು ಬೆಳೆಯುತ್ತಾ ಹೋಯಿತು. ಈ ಮನೆ ಲಕ್ಕಿ ಎಂಬ ಕಾರಣಕ್ಕೆ ಖಾಲಿ ಮಾಡಿರಲಿಲ್ಲ ಎನ್ನಲಾಗಿದೆ. ಕೆಲ ವರ್ಷಗಳಲ್ಲೇ ಈ ಬಾಡಿಗೆ ಮನೆಯಿಂದ ಇನ್ನೂ ದೊಡ್ಡ ಮನೆಗೆ ಸ್ಥಳಾಂತವಾಗಿತ್ತು ಯಶ್ ಕುಟುಂಬ. ಆದರೆ ಬನಶಂಕರಿಯ ಈ ಮನೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಇದನ್ನು ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌