ಹೊಸಬರ ಸಿನಿಮಾ ಅನುಕ್ತ. ವಿಭಿನ್ನ ಟೈಟಲ್ ಇಡೋದಕ್ಕೆ ಕಾರಣ ಚಿತ್ರದ ಕತೆ. ಅಶ್ವಥ್ ಸ್ಯಾಮುಯಲ್ ನಿರ್ದೇಶನದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್ ಮತ್ತು ಅನುಪ್ರಭಾಕರ್ ನಟಿಸಿದ್ದಾರೆ. ಕರಾವಳಿಯ ಕಡಲ ತೀರದಲ್ಲಿ ನಡೆಯುವ ಕತೆಯೊಂದನ್ನು ತೆರೆಗೆ ತರಲಾಗಿದೆ. ಸಂತೋಷ್ ಕುಮಾರ್ ಕೊಂಚಾಡಿ ಮತ್ತು ಕಾರ್ತಿಕ್ ಅತ್ತಾವರ್ ಚಿತ್ರದ ಕತೆ ಬರೆದಿದ್ದಾರೆ.
ಚಿತ್ರದಲ್ಲಿ ಕರಾವಳಿ ಜನರ ಬದುಕು, ಸಂಸ್ಕೃತಿಯ ಚಿತ್ರಣವೂ ಇದೆ. ಚಿತ್ರಕ್ಕೆ ಸ್ಥಳೀಯ ವಾದ್ಯಗಳನ್ನು ಬಳಸಿ ಸಂಗೀತ ಸಂಯೋಜನೆ ಮಾಡಲಾಗಿದೆ. ಕನಸಿನ ಹಿಂದೆ ಬಿದ್ದವರ ಕತೆ ಇದರಲ್ಲಿದೆ. "ಕಣ್ಣಾರೆ ಕಂಡ ಎಷ್ಟೋ ಸಂಗತಿಗಳನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ಅಂಥ ಸಂಗತಿಗಳನ್ನು ಸಿನಿಮಾ ಮಾಡಿದ್ದೇವೆ. ಮಾತಿನಲ್ಲಿ ಹೇಳಲಾಗದ್ದಕ್ಕೆ ಅನುಕ್ತ ಎನ್ನುತ್ತಾರೆ' ಎಂದು ಟೈಟಲ್ ಬಗ್ಗೆ ವಿವರಣೆ ನೀಡಿದ್ದಾರೆ ನಿರ್ದೇಶಕ ಅಶ್ವಥ್ ಸ್ಯಾಮುಯಲ್.
ಚಿತ್ರದಲ್ಲಿ ಒಳ್ಳೆಯ ಮನರಂಜನೆ ಇದೆ ಎನ್ನುವುದು ಚಿತ್ರತಂಡದ ಮಾತು. ತುಳುವಿನಲ್ಲಿ ಮಾಡಬೇಕೆಂದಿದ್ದ ಸಿನಿಮಾ ಈಗ ಕನ್ನಡದಲ್ಲಿ ತೆರೆ ಕಾಣುತ್ತಿದೆ. ಚಿತ್ರವನ್ನು ಉಡುಪಿ, ಬ್ರಹ್ಮಾವರ, ಕರಾವಳಿಯ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರದಲ್ಲಿ ಕರಾವಳಿ ಜನರ ಬದುಕು, ಸಂಸ್ಕೃತಿಯ ಚಿತ್ರಣವೂ ಇದೆ. ಚಿತ್ರಕ್ಕೆ ಸ್ಥಳೀಯ ವಾದ್ಯಗಳನ್ನು ಬಳಸಿ ಸಂಗೀತ ಸಂಯೋಜನೆ ಮಾಡಲಾಗಿದೆ. ಕನಸಿನ ಹಿಂದೆ ಬಿದ್ದವರ ಕತೆ ಇದರಲ್ಲಿದೆ. "ಕಣ್ಣಾರೆ ಕಂಡ ಎಷ್ಟೋ ಸಂಗತಿಗಳನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ಅಂಥ ಸಂಗತಿಗಳನ್ನು ಸಿನಿಮಾ ಮಾಡಿದ್ದೇವೆ. ಮಾತಿನಲ್ಲಿ ಹೇಳಲಾಗದ್ದಕ್ಕೆ ಅನುಕ್ತ ಎನ್ನುತ್ತಾರೆ' ಎಂದು ಟೈಟಲ್ ಬಗ್ಗೆ ವಿವರಣೆ ನೀಡಿದ್ದಾರೆ ನಿರ್ದೇಶಕ ಅಶ್ವಥ್ ಸ್ಯಾಮುಯಲ್.
ಚಿತ್ರದಲ್ಲಿ ಒಳ್ಳೆಯ ಮನರಂಜನೆ ಇದೆ ಎನ್ನುವುದು ಚಿತ್ರತಂಡದ ಮಾತು. ತುಳುವಿನಲ್ಲಿ ಮಾಡಬೇಕೆಂದಿದ್ದ ಸಿನಿಮಾ ಈಗ ಕನ್ನಡದಲ್ಲಿ ತೆರೆ ಕಾಣುತ್ತಿದೆ. ಚಿತ್ರವನ್ನು ಉಡುಪಿ, ಬ್ರಹ್ಮಾವರ, ಕರಾವಳಿಯ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.