ಆ್ಯಪ್ನಗರ

ಆಕಾಂಕ್ಷಾಗೆ ಕಣ್ಣಾ ಮಣಿಯೇ ಕಣ್ಣು ಹೊಡಿಯೇ ಎಂದ ಕಿಚ್ಚ ಸುದೀಪ್‌

ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿಈ ಹಾಡು ಬಂದಿದ್ದು, ಕಣ್ಮಣಿ ಗೀತೆಯನ್ನು ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ. ಈಗಾಗಲೇ ಲಿರಿಕಲ್‌ ಸಾಂಗ್‌ ಕೂಡ ರಿಲೀಸ್‌ ಆಗಿದೆ.

Vijaya Karnataka 30 Aug 2019, 11:58 am

* ಶರಣು ಹುಲ್ಲೂರು
Vijaya Karnataka Web sudeep-pailwaan


ಸಾಮಾನ್ಯವಾಗಿ ಸಿನಿಮಾದ ಟೀಸರ್‌ ರಿಲೀಸ್‌ ಆಗುವುದು ವಾಡಿಕೆ. ಆದರೆ ಸುದೀಪ್‌ ಮತ್ತು ನಿರ್ದೇಶಕ ಎಸ್‌.ಕೃಷ್ಣ ಕಾಂಬಿನೇಷನ್‌ನ 'ಪೈಲ್ವಾನ್‌' ಸಿನಿಮಾದ ಹಾಡಿನ ಟೀಸರ್‌ ಬಿಡುಗಡೆ ಆಗಿದ್ದು, ಅದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಕಣ್ಣಾ ಮಣಿಯೇ.. ಕಣ್ಣು ಹೊಡಿಯೇ' ಹಾಡಿಗೆ ಕಿಚ್ಚನ ಅಭಿಮಾನಿಗಳು ಫಿದಾ ಆಗುವಂತೆ ಮಾಡಿದೆ. ಸಖತ್‌ ರೊಮ್ಯಾಂಟಿಕ್‌ ಆಗಿರುವ ಈ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

'ವಿಡಿಯೋ ಟೀಸರ್‌ ರಿಲೀಸ್‌ ಮಾಡುವ ವಾಡಿಕೆ ಬಾಲಿವುಡ್‌ನಲ್ಲಿದೆ. ಈ ಪ್ರಯೋಗವನ್ನು ನಾವು ಈ ಹಿಂದೆ ಹೆಬ್ಬುಲಿಯಲ್ಲಿಮಾಡಿದ್ದೆವು. ಅದಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿತ್ತು. ಹಾಗಾಗಿ ಪೈಲ್ವಾನ್‌ ಸಿನಿಮಾದ ಎರಡು ಹಾಡಿಗಳಿಗೆ ಟೀಸರ್‌ ರೆಡಿ ಮಾಡಿದ್ದೇವೆ. ಈಗ ಕಣ್ಮಣಿ ಸಾಂಗ್‌ನ ಟೀಸರ್‌ ರಿಲೀಸ್‌ ಆಗಿದೆ. ಕಿಚ್ಚ ಮತ್ತು ಆಕಾಂಕ್ಷಾ ಈ ಹಾಡಿನಲ್ಲಿಕಾಣಿಸಿಕೊಂಡಿದ್ದಾರೆ. ಇಡೀ ಹಾಡನ್ನು ಕಲರ್‌ಫುಲ್‌ ಆಗಿ ಸೆರೆ ಹಿಡಿಯಲಾಗಿದೆ. ಈ ಹಾಡಿನ ನಂತರ ಮತ್ತೊಂದು ಹಾಡಿನ ಟೀಸರ್‌ ಅನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ' ಎಂದು ನಿರ್ದೇಶಕ ಕೃಷ್ಣ ಲವಲವಿಕೆಗೆ ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಜೊತೆ ಮೈ ಚಳಿ ಬಿಟ್ಟು ಕುಣಿದ ಆಕಾಂಕ್ಷಾ ಸಿಂಗ್


ಸದ್ಯ ಸ್ಯಾಂಡಲ್‌ವುಡ್‌ನಲ್ಲಿಸಿನಿಮಾದ ಪ್ರಚಾರಕ್ಕಾಗಿ ವಿಡಿಯೋ ಹಾಡುಗಳನ್ನು ರಿಲೀಸ್‌ ಮಾಡುತ್ತಿದ್ದಾರೆ. ಆದರೆ, ಪೈಲ್ವಾನ್‌ ಸಿನಿಮಾದ ಹಾಡುಗಳನ್ನು ಆ ರೀತಿಯಲ್ಲಿರಿಲೀಸ್‌ ಮಾಡಲು ಸಾಧ್ಯವಾಗಲ್ಲಎನ್ನುತ್ತಾರೆ ನಿರ್ದೇಶಕರು.

'ಪೈಲ್ವಾನ್‌ ಸಿನಿಮಾದ ಪ್ರತಿ ಹಾಡು ಕೂಡ ಅದ್ಧೂರಿಯಾಗಿ ಮೂಡಿ ಬಂದಿವೆ. ಬೃಹತ್‌ ಸೆಟ್‌ಗಳಲ್ಲಿಚಿತ್ರೀಕರಣ ಮಾಡಲಾಗಿದೆ. ಅಲ್ಲದೇ, ಹಾಡಿನಲ್ಲಿಯೇ ಕಥೆ ಹೇಳುವ ಪ್ರಯತ್ನವಿದೆ. ಹಾಗಾಗಿ ಪೂರ್ತಿಯಾಗಿ ವಿಡಿಯೋ ರಿಲೀಸ್‌ ಮಾಡುವುದು ಕಷ್ಟ. ದೊಡ್ಡ ಪರದೆಯಲ್ಲೇ ಹಾಡುಗಳನ್ನು ಪ್ರೇಕ್ಷಕರು ನೋಡಲಿ. ಹಾಗಾಗಿ ಹಾಡಿನ ಒಂದು ಸಣ್ಣ ಝಲಕ್‌ ಮಾತ್ರ ಇಲ್ಲಿದೆ. ಈ ಸಿನಿಮಾ ಹಲವು ಭಾಷೆಗಳಲ್ಲಿಬಿಡುಗಡೆ ಆಗುತ್ತಿರುವುದರಿಂದ, ಅಲ್ಲಿನ ಪ್ರೇಕ್ಷಕರಿಗೆ ನಮ್ಮ ಸಿನಿಮಾದ ಬಗ್ಗೆ ಗೊತ್ತಾಗಲಿ ಎಂಬ ಉದ್ದೇಶವೂ ಇದರ ಹಿಂದಿದೆ' ಎಂದಿದ್ದಾರೆ ಅವರು.
ಕಿಚ್ಚ ಸುದೀಪ್ 'ಪೈಲ್ವಾನ್' ಆಕಾಂಕ್ಷಾ ಸಿಂಗ್ ಹಾಟ್ ಲುಕ್ ರಿವೀಲ್

'ನಮ್ಮ ನಿರೀಕ್ಷೆಗೂ ಮೀರಿ ಚಿತ್ರದ ಬಗ್ಗೆ ರೆಸ್ಪಾನ್ಸ್‌ ಬರುತ್ತಿದೆ. ಸಾವಿರಾರು ಥಿಯೇಟರ್‌ಗಳಲ್ಲಿಈ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಅದಕ್ಕಾಗಿ ಎಲ್ಲರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಚಿತ್ರಕ್ಕೆ ಪರಭಾಷೆಯಲ್ಲೂಡಿಮಾಂಡ್‌ ಕ್ರಿಯೇಟ್‌ ಆಗಿದ್ದು ಸಹಜವಾಗಿಯೇ ಸಂಭ್ರಮ ತಂದಿದೆ' ಎನ್ನುವುದು ನಿರ್ದೇಶಕರ ಮಾತು. ಸುದೀಪ್‌, ಸುನೀಲ್‌ ಶೆಟ್ಟಿ, ಆಕಾಂಕ್ಷಾ ಸೇರಿ ಹಲವು ತಾರೆಯರು ಈ ಸಿನಿಮಾದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌