ಆ್ಯಪ್ನಗರ

ರಾಜಮೌಳಿಯ 'ಆರ್‌ಆರ್‌ಆರ್‌' ಚಿತ್ರಕ್ಕಾಗಿ ಸೃಷ್ಟಿಯಾಗಲಿದೆ ಒಂದು ಹಳ್ಳಿ! ಇದಕ್ಕೆ ಖರ್ಚಾಗುವ ಹಣವೆಷ್ಟು?

ರಾಜಮೌಳಿ ಸಿನಿಮಾಗಳೆಂದರೆ, ಅಲ್ಲಿ ದೃಶ್ಯವೈಭವವೇ ಇರುತ್ತದೆ. ಅದು ಈ ಹಿಂದಿನ ಅನೇಕ ಸಿನಿಮಾಗಳಲ್ಲಿ ರುಜುವಾತಾಗಿದೆ. ಇದೀಗ 'ಆರ್‌ಆರ್‌ಆರ್‌' ಸಿನಿಮಾದಲ್ಲೂ ರಾಜಮೌಳಿ ಅದ್ದೂರಿ ಸೆಟ್‌ಗೆ ಬಹಳ ಮಹತ್ವ ನೀಡುತ್ತಿದ್ದಾರೆ.

Vijaya Karnataka Web 3 Jun 2020, 11:18 pm
'ಬಾಹುಬಲಿ' ನಂತರ ನಿರ್ದೇಶಕ ರಾಜಮೌಳಿ ಬಹಳ 'ಆಸ್ಥೆ ವಹಿಸಿ 'ಆರ್‌ಆರ್‌ಆರ್‌' ಕೈಗೆತ್ತಿಕೊಂಡಿದ್ದಾರೆ. ಜೂ. ಎನ್‌ಟಿಆರ್-ರಾಮ್‌ ಚರಣ್‌ರಂತಹ ಇಬ್ಬರು ದೊಡ್ಡ ಕಮರ್ಷಿಯಲ್‌ ಹೀರೋಗಳನ್ನು ಒಟ್ಟುಗೂಡಿಸಿ ಈ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ, ದೊಡ್ಡಮಟ್ಟದಲ್ಲಿ ನಿರೀಕ್ಷೆ ಗರಿಗೆದರಿದೆ. ಸದ್ಯ ಲಾಕ್‌ಡೌನ್‌ನಿಂದ ಸಿನಿಮಾ ಶೂಟಿಂಗ್‌ ನಿಂತಿದ್ದು, ಸರ್ಕಾರದ ಅನುಮತಿ ಮೇರೆಗೆ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎಂಬ ಮಾಹಿತಿ ಇದೆ. ಈ ನಡುವೆ ಚಿತ್ರದ ಕುರಿತಾಗಿ ಇಂಟರೆಸ್ಟಿಂಗ್ ಮಾಹಿತಿ ಕೇಳಿಬಂದಿದೆ. ಅದೇನೆಂದರೆ, 'ಆರ್‌ಆರ್‌ಆರ್‌' ಚಿತ್ರಕ್ಕಾಗಿ ಒಂದು ಹಳ್ಳಿ ಸೆಟ್‌ ಅನ್ನೇ ನಿರ್ಮಾಣ ಮಾಡೋಕೆ ನಿರ್ದೇಶಕರು ಮುಂದಾಗಿದ್ದಾರಂತೆ!
Vijaya Karnataka Web ರಾಜಮೌಳಿಯ ಆರ್‌ಆರ್‌ಆರ್‌ ಚಿತ್ರಕ್ಕಾಗಿ ಸೃಷ್ಟಿಯಾಗಲಿದೆ ಒಂದು ಹಳ್ಳಿ! ಇದಕ್ಕೆ ಖರ್ಚಾಗುವ ಹಣವೆಷ್ಟು?


'ಆರ್‌ಆರ್‌ಆರ್' ಚಿತ್ರಕ್ಕಾಗಿ ಹೈದರಾಬಾದ್‌ನ ಗಂದಿಪೇಟ್‌ನಲ್ಲಿ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಹಳ್ಳಿ ಸೆಟ್‌ವೊಂದನ್ನು ಹಾಕಲು ಯೋಜನೆ ರೂಪಿಸಲಾಗಿದೆಯಂತೆ. ಈ ಹಳ್ಳಿ ಸೆಟ್‌ನಲ್ಲಿ ಸಿನಿಮಾ ಮೇಜರ್ ದೃಶ್ಯಗಳನ್ನು ಚಿತ್ರೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆಯಂತೆ. ಅದಕ್ಕಾಗಿ ಇಲ್ಲಿ ಚಿತ್ರೀಕರಣ ಮಾಡಲು ಸುಮಾರು ಒಂದು ತಿಂಗಳ ಸುದೀರ್ಘ ಶೆಡ್ಯೂಲ್ ಹಾಕಿಕೊಳ್ಳಲಾಗಿದೆಯಂತೆ. ಲಾಕ್‌ಡೌನ್‌ ಮುಗಿಯುತ್ತಿದ್ದಂತೆಯೇ ಸರ್ಕಾರದ ಅನುಮತಿಯೊಂದಿಗೆ ಚಿತ್ರೀಕರಣ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ.

ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, 2020ರ ಜುಲೈನಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಶೂಟಿಂಗ್ ಇನ್ನೂ ಬಾಕಿ ಇರುವುದರಿಂದ 2021ರ ಜನವರಿಯಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಆದರೆ, ಇನ್ನೂ, ಶೇ. 30 ಭಾಗ ಚಿತ್ರೀಕರಣ ಬಾಕಿ ಇದೆಯಂತೆ. ಜೊತೆಗೆ ಇದುವರೆಗೂ ಆಗಿರುವುದು ಶೇ. 20ರಷ್ಟು ಮಾತ್ರ ವಿಎಫ್‌ಎಕ್ಸ್‌ ಕೆಲಸಗಳು ಮಾತ್ರ ಎನ್ನಲಾಗಿದೆ. ಲಾಕ್‌ಡೌನ್‌ ಇಲ್ಲದೇ ಇದ್ದಿದ್ದರೆ, ಇಷ್ಟೊತ್ತಿಗೆ ಒಂದಷ್ಟು ಕೆಲಸಗಳನ್ನು ಚಿತ್ರತಂಡ ಮುಗಿಸಿಕೊಂಡಿರುತ್ತಿತ್ತು. ಸದ್ಯ ಕೆಲಸಗಳಿಗೆ ಬ್ರೇಕ್‌ ಬಿದ್ದಿರುವುದರಿಂದ ಜನವರಿಯಲ್ಲೂ ಸಿನಿಮಾ ತೆರೆಗೆ ಬರುವುದು ಡೌಟ್ ಎಂಬ ಮಾತು ಕೇಳಿಬರುತ್ತಿವೆ.

ಎಸ್ ಎಸ್ ರಾಜಮೌಳಿ 'ಆರ್ ಆರ್ ಆರ್' ಶೀರ್ಷಿಕೆಯ ಲೇಟೆಸ್ಟ್ ಅರ್ಥ ಇದೇನಾ?

ಇನ್ನು, ಈ ಚಿತ್ರದ ನಿರ್ದೇಶನಕ್ಕಾಗಿ ರಾಜಮೌಳಿ, ಸಿನಿಮಾದಲ್ಲಿ ಬರುವ ಗಳಿಕೆಯಲ್ಲಿ ಶೇ.30ರಷ್ಟು ಲಾಭವನ್ನು ಸಂಭಾವನೆ ರೂಪದಲ್ಲಿ ಪಡೆಯಲಿದ್ದಾರಂತೆ. ನಟರಿಗೂ ದೊಡ್ಡ ಮೊತ್ತ ಸಂಭಾವನೆಯೇ ಸಿಕ್ಕಿದೆ. ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದು, ಜೂ.ಎನ್‌ಟಿಆರ್‌, ರಾಮ್‌ ಚರಣ್‌ ಅವರೊಂದಿಗೆ ಸಮುದ್ರ ಖಣಿ, ಆಲಿಯಾ ಭಟ್‌, ಅಜಯ್ ದೇವ್‌ಗನ್ ಹಾಗೂ ಒಂದಷ್ಟು ವಿದೇಶಿ ಕಲಾವಿದರು ಬಣ್ಣ ಹಚ್ಚಿದ್ದಾರೆ.

ರಾಜಮೌಳಿ ಚಿತ್ರಕ್ಕೆ ನಾಯಕಿಯಾಗಿ ಬಂದ ಬ್ರಿಟೀಷ್‌ ರಂಗ ಕಲಾವಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌