ಆ್ಯಪ್ನಗರ

ನಾನು ಯಾರ ಫ್ಯಾನೂ ಅಲ್ಲ ಎಂದ 'ಡಿ ಬಾಸ್' ದರ್ಶನ್

"ನನಗೆ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ. ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ನನಗೆ ತುಂಬ ಹಳೆಯ ಸ್ನೇಹಿತರು. ಹಲವು ಬಾರಿ ನನಗೆ ಸಹಾಯ ಮಾಡಿದ್ದಾರೆ. ಜನರಿಗೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಪರ ಪ್ರಚಾರಕ್ಕೆ ಬಂದೆ'' ಎಂದಿದ್ದಾರೆ ದರ್ಶನ್.

Vijaya Karnataka Web 8 Apr 2019, 8:09 pm
ಕನ್ನಡದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ಇಂದು, ಏಪ್ರಿಲ್ 08, 2019ರಂದು ಪ್ರಚಾರ ಮಾಡಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ದರ್ಶನ್ ಕೂಡ 'ಮೋದಿ ಫ್ಯಾನ್' ಎಂದು ಮಾತನಾಡಿಕೊಳ್ಳುತ್ತಿದ್ದರು. ಅದೇ ಪ್ರಶ್ನೆಯನ್ನು ಸ್ವತಃ ದರ್ಶನ್ ಅವರಿಗೆ ಕೇಳಲಾಯಿತು.
Vijaya Karnataka Web darshan0804-2


ಈ ಪ್ರಶ್ನೆಗೆ ಉತ್ತರ ನೀಡಿದ ದರ್ಶನ್ '' 'ನಾನು ಯಾರ ಫ್ಯಾನ್ ಅಲ್ಲ. ನನ್ನ ಸ್ನೇಹಿತರು, ಪರಿಚಯ ಇರುವವರು, ನಾನು ಇಷ್ಟ ಪಡುವವರಿಗಾಗಿ ಮಾತ್ರ ನಾನು ಪ್ರಚಾರ ಮಾಡುತ್ತೇನೆ ಅಷ್ಟೇ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ದರ್ಶನ್ "ನನಗೆ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ. ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ನನಗೆ ತುಂಬ ಹಳೆಯ ಸ್ನೇಹಿತರು. ಹಲವು ಬಾರಿ ನನಗೆ ಸಹಾಯ ಮಾಡಿದ್ದಾರೆ. ಜನರಿಗೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಪರ ಪ್ರಚಾರಕ್ಕೆ ಬಂದೆ'' ಎಂದಿದ್ದಾರೆ ದರ್ಶನ್.

ಈ ಹಿಂದೆಯೂ ದರ್ಶನ್ ಈ ವಿಷಯವನ್ನು ಹಲವು ಸಲ ಹೇಳಿದ್ದಾರೆ. "ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡಲ್ಲ. ನನಗೆ ಬೇಕಾದ ಸ್ನೇಹಿತರ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ" ಎಂದು ದರ್ಶನ್ ಬಹಿರಂಗವಾಗಿಯೇ ಸಾಕಷ್ಟು ಬಾರಿ ಹೇಳಿದ್ದರು. ಅದರಂತೆ ಕಳೆದ ಸಲ ಸಿದ್ದರಾಮಯ್ಯ, ಸಂದೇಶ್ ನಾಗರಾಜ್ ಮತ್ತು ಅಂಬರೀಷ್, ಹೀಗೆ ಕೆಲವರ ಪರ ದರ್ಶನ್ ಪ್ರಚಾರ ಮಾಡಿದ್ದರು.

ಒಟ್ಟಿನಲ್ಲಿ ನಟ ದರ್ಶನ್ ಅವರು ನಟಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಾತ್ರವಲ್ಲ, ಬಿಜೆಪಿಯ ಪಿಸಿ ಮೋಹನ್ ಪರವಾಗಿಯೂ ಪ್ರಚಾರ ಕೈಗೊಂಡು ಕೆಲವರ ವಿರೋಧ ಹಾಗೂ ಹಲವರ ಪ್ರೀತಿ ಗಳಿಸಿಕೊಂಡಿದ್ದಾರೆ. ಪಿಸಿ ಮೋಹನ್ ಪರ ಪ್ರಚಾರ ಮುಗಿಸಿ ಮತ್ತೆ ಸುಮಲತಾ ಪರ ಪ್ರಚಾರಕ್ಕೆ ಮಂಡ್ಯಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌