ಆ್ಯಪ್ನಗರ

ಒಳ್ಳೆಯ ಛಾನ್ಸ್ ಸಿಕ್ಕರೆ ಸೀರಿಯಲ್‌ಗೂ 'ಜೈ' ಎಂದ ನಟಿ ಶುಭಾ ಪೂಂಜಾ

ಅಚ್ಚರಿ ಎಂಬಂತೆ, ನಟಿ ಶುಭಾ ಪೂಂಜಾ ಬಣ್ಣದ ಲೋಕಕ್ಕೆ ಮೊದಲು ಕಾಲಿಟ್ಟಿದ್ದು ತಮಿಳು ಚಿತ್ರದ ಮೂಲಕ. 'ಮಚ್ಚಿ' ತಮಿಳು ಚಿತ್ರದಲ್ಲಿ ರಕ್ಷಿತಾ ಪಾತ್ರಧಾರಿಯಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ಶುಭಾ ಪೂಂಜಾ, ಮಾಡೆಲ್ ಆಗಿಯೂ ಗುರುತಿಸಿಕೊಂಡವರು.

Vijaya Karnataka Web 13 Apr 2019, 7:30 pm
ಕೆಜಿಎಫ್ ಖ್ಯಾತಿಯ ನಟ ಯಶ್ ಅವರ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಚಂದನವನದಲ್ಲಿ ಫೇಮಸ್ ಎನಿಸಿಕೊಂಡ ನಟಿ ಶುಭಾ ಪೂಂಜಾ. ಮೂಲತಃ ಕರಾವಳಿ ಮಂಗಳೂರಿನವರಾದ ಶುಭಾ ಪೂಂಜಾ ಬೆಳೆದದ್ದು ಮಹಾನಗರಿ ಬೆಂಗಳೂರಿನಲ್ಲಿ. ಜಯನಗರದ ಕಾರ್ಮೆಲ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದ ಕರಾವಳಿ ಸುಂದರಿ, 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ರೇಣುಕಾ ಪಾತ್ರಧಾರಿಯಾಗಿ ಕನ್ನಡ ಸಿನಿ ಪ್ರಿಯರ ಮನಸ್ಸು ಕದ್ದು ಬಿಟ್ಟರು.
Vijaya Karnataka Web shubha1304


'ಜಾಕ್ ಪಾಟ್' ಚಿತ್ರದ 'ಪ್ರೀತಿ' ಪಾತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಕಾಲಿಟ್ಟ ನಟಿ ಶುಭಾ ಪೂಂಜಾ ಅವರಿಗೆ ಹೆಸರು ತಂದು ಕೊಟ್ಟಿದ್ದು ಮೊಗ್ಗಿನ ಮನಸ್ಸು ಚಿತ್ರದ ರೇಣುಕಾ ಪಾತ್ರ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಶುಭಾ ಪೂಂಜಾ ಆ ಪಾತ್ರಕ್ಕೆ ಫಿಲಂ ಫೇರ್‌ನ 'ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್' ಪ್ರಶಸ್ತಿಯನ್ನು ಪಡೆದಿದ್ದಾರೆ.

ಮೊಗ್ಗಿನ ಮನಸ್ಸು ಬಳಿಕ, ಚಂಡ, ಅಂಜದಿರು, ಸ್ಲಂ ಬಾಲ, ತಾಕತ್, ಪ್ರೀತಿ ಹಂಗಾಮ, ನಾರಿ ಅಡ್ಡ, ಸಿಗಂದೂರು ಚೌಡೇಶ್ವರಿ ಮಹಿಮೆ , ಕಂಠೀರವ, ನಾನಲ್ಲ, ಗೋಲ್ ಮಾಲ್ , ಪರಾರಿ, ಚಿರಾಯು ಕೋಟಿಗೊಂದು ಲವ್ ಸ್ಟೋರಿ, ಜೈ ಮಾರುತಿ 800, ಗೂಗಲ್, ಮೀನಾಕ್ಷಿ, ತಾತನ ತಿಥಿ ಮೊಮ್ಮಗನ ಪ್ರಸ್ಥ, ಜಯಮಹಲ್, ದೇವಿ ಹಾಸನಾಂಬೆ, ಸಮೋಸ ಮುಂತಾದ ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅಚ್ಚರಿ ಎಂಬಂತೆ, ನಟಿ ಶುಭಾ ಪೂಂಜಾ ಬಣ್ಣದ ಲೋಕಕ್ಕೆ ಮೊದಲು ಕಾಲಿಟ್ಟಿದ್ದು ತಮಿಳು ಚಿತ್ರದ ಮೂಲಕ. 'ಮಚ್ಚಿ' ತಮಿಳು ಚಿತ್ರದಲ್ಲಿ ರಕ್ಷಿತಾ ಪಾತ್ರಧಾರಿಯಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ಶುಭಾ ಪೂಂಜಾ, ಮಾಡೆಲ್ ಆಗಿಯೂ ಗುರುತಿಸಿಕೊಂಡವರು. ಟಿವಿ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಅಭಿನಯಿಸಿದ್ದ ಶುಭಾ 2003ರಲ್ಲಿ ಚೆನ್ನೈ ನಲ್ಲಿ ನಡೆದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಭಾಗವಹಿಸಿ, 'ಮಿಸ್ ಚೆನ್ನೈ - ಟಾಪ್ ಮಾಡೆಲ್ 2003' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

"ಐತಿಹಾಸಿಕ ಪಾತ್ರಗಳಲ್ಲಿ ನಟಿಸುವ ಬಯಕೆ ನನ್ನದು" ಎನ್ನುವ ಶುಭಾ ಪೂಂಜಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ 'ದೇವಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ಉತ್ತಮ ಅವಕಾಶ ದೊರೆತರೆ ಶುಭಾ ಪೂಂಜಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರಂತೆ. ಈ ಮಾತು ಕಿರುತೆರೆ ಲೋಕಕ್ಕೆ ತಲುಪಿದ ತಕ್ಷಣ ಅವರಿಗೆ ಅಲ್ಲಿ ಬಾಗಿಲು ಓಪನ್ ಆಗಲಿರುವುದು ಖಂಡಿತ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌