ಆ್ಯಪ್ನಗರ

ಇನ್ನೊಂದು ಚಪ್ಪಲಿಗಾಗಿ ಎದುರು ನೋಡುತ್ತಿದ್ದೇನೆ: ಕಮಲ್ ಹಾಸನ್

ನಾಯಕನನ್ನು ವಿಲನ್ ಆಗಿ, ವಿಲನ್‌ನನ್ನು ನಾಯಕನಾಗಿ ನೋಡಲು ಸಾಧ್ಯವಿಲ್ಲ. ಅದೇ ರೀತಿ ವಿಲನ್‌ನನ್ನು ಹೀರೋ ಆಗಿ ಒಪ್ಪಿಕೊಳ್ಳಲು ಆಗಲ್ಲ. ಒಮ್ಮೆ ಗಾಂಧಿಜಿ ರೈಲಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ಒಂದು ಚಪ್ಪಲಿ ಕಾಣಿಸಲಿಲ್ಲ. ಅದನ್ನು ತೆಗೆದುಕೊಂಡವರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ಎರಡನೇ ಚಪ್ಪಲಿಯನ್ನೂ ಎಸೆದರು ಎಂಬ ಸಂಗತಿಯನ್ನು ಅವರ ಆತ್ಮಕಥೆಯಲ್ಲಿ ಓದಿದ್ದೇನೆ.

Vijaya Karnataka Web 20 May 2019, 1:06 pm
ಇನ್ನೊಂದು ಚಪ್ಪಲಿಗಾಗಿ ಎದುರು ನೋಡುತ್ತಿದ್ದೇನೆ ಎಂದು ನಟ, ಮಕ್ಕಳ್ ನೀಧಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ. ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ. ಅವರ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಈ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ. ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಕೆಲವರು ಅವರ ಮೇಲೆ ಕೋಳಿಮೊಟ್ಟೆ, ಟೊಮೆಟೊಗಳನ್ನು ಎಸೆದಿದ್ದರು. ಓರ್ವ ಚಪ್ಪಲಿಯನ್ನೂ ಎಸೆದಿದ್ದ.
Vijaya Karnataka Web kamal-haasan1


ಈ ಘಟನೆ ಬಳಿಕ ಭಾನುವಾರ ಬೆಳಗ್ಗೆ ಕಮಲ್ ಹಾಸನ್ 'ಒಥ ಚೆರುಪ್ಪು ಸೈಜ್ 7' (ಒಂದು ಚಪ್ಪಲಿ ಸೈಜ್ 7) ಎಂಬ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಿತ್ರದ ಹೆಸರಲ್ಲಿ ಚಪ್ಪಲಿ ಇದ್ದ ಕಾರಣ ಕಮಲ್ ಹಾಸನ್ ತನ್ನ ಮೇಲಿನ ಚಪ್ಪಲಿ ದಾಳಿಯನ್ನು ಪ್ರಸ್ತಾಪಿಸುವಂತೆ ಈ ಚಿತ್ರದ ನಿರ್ದೇಶಕ, ಹೀರೋ ಪಾರ್ತಿಬನ್ ತನಗೆ ಗಾಂಧಿಜಿ ಆತ್ಮಕಥೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ನಿಜ ಹೇಳಬೇಕೆಂದರೆ ಗಾಂಧಿ ಆತ್ಮಕಥೆಯನ್ನು ನಾನು ಬಹಳಷ್ಟು ಸಲ ಓದಿದ್ದೇನೆ. ಗಾಂಧಿಜಿ ಸೂಪರ್ ಸ್ಟಾರ್. ಅವರೇ ನನ್ನ ಹೀರೋ ಎಂದಿದ್ದಾರೆ.

ನಾಯಕನನ್ನು ವಿಲನ್ ಆಗಿ, ವಿಲನ್‌ನನ್ನು ನಾಯಕನಾಗಿ ನೋಡಲು ಸಾಧ್ಯವಿಲ್ಲ. ಅದೇ ರೀತಿ ವಿಲನ್‌ನನ್ನು ಹೀರೋ ಆಗಿ ಒಪ್ಪಿಕೊಳ್ಳಲು ಆಗಲ್ಲ. ಒಮ್ಮೆ ಗಾಂಧಿಜಿ ರೈಲಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ಒಂದು ಚಪ್ಪಲಿ ಕಾಣಿಸಲಿಲ್ಲ. ಅದನ್ನು ತೆಗೆದುಕೊಂಡವರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ಎರಡನೇ ಚಪ್ಪಲಿಯನ್ನೂ ಎಸೆದರು ಎಂಬ ಸಂಗತಿಯನ್ನು ಅವರ ಆತ್ಮಕಥೆಯಲ್ಲಿ ಓದಿದ್ದೇನೆ. ಆ ರೀತಿ ಗಾಂಧಿ ಎಸೆದ ಒಂದು ಚಪ್ಪಲಿ ನನಗೆ ಸಿಕ್ಕಿದೆ, ಎರಡನೇ ಚಪ್ಪಲಿಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಕಮಲ್ ಹಾಸನ್.

'ಹೇ ರಾಮ್' ಚಿತ್ರದಲ್ಲಿ ಅವರು ಚಪ್ಪಲಿ ತೆಗೆದುಕೊಂಡು ಬರುತ್ತೇನೆ ಎಂದರು. ಅದಕ್ಕಾಗಿ ತಾನು ಸಂಶೋಧನೆ ನಡೆಸಿದಾಗ ಗಾಂಧಿಜಿ ಬಳಸಿದ ಕನ್ನಡಕ, ಚಪ್ಪಲಿ ಕಾಣೆಯಾಗಿರುವುದು ಗೊತ್ತಾಯಿತು. ಆ ಸಂಗತಿಯನ್ನು 'ಒಥ ಚೆರುಪ್ಪು ಸೈಜ್ 7' ಚಿತ್ರದಲ್ಲಿ ಪ್ರಸ್ತಾಪಿಸದೆ ಇರಲ್ಲ ಎಂದು ಭಾವಿಸಿದ್ದೇನೆ. ಹಾಗಾಗಿ ಚಿತ್ರತಂಡ ಭಯಬೀಳುತ್ತಿವೆ. ಆದರೆ ಭಯಬೀಳಬೇಕಾದ ಅಗತ್ಯ ಇಲ್ಲ, ಅದು ಹೆಮ್ಮೆ ಪಡಬೇಕಾದ ಸಂಗತಿ ಎಂದು ಹೇಳಿದ್ದಾರೆ ಕಮಲ್ ಹಾಸನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌