ಆ್ಯಪ್ನಗರ

ಗಂಡ ಮೃತಪಟ್ಟ ಬಳಿಕ ಮದ್ಯ ವ್ಯಸನಿಯಾದೆ: ಡಿಸ್ಕೋ ಶಾಂತಿ

ಭಾವನಿಗೆ (ಶ್ರೀಹರಿ) ಪ್ರಾಣವಾಗಿ ಬದುಕಿದೆ. ಇದ್ದಕ್ಕಿದ್ದಂತೆ ಅವರು ನಮ್ಮನ್ನು ಅನಾಥರನ್ನಾಗಿ ಮಾಡಿ ಹೊರಟು ಹೋದರು. ಅದನ್ನು ಭರಿಸಲಾಗದೆ ಆ ನೋವನ್ನು ಮರೆಯಲು ಮದ್ಯಕ್ಕೆ ವ್ಯಸನಿಯಾದೆ. ತಿಂಡಿಗೆ, ನೀರಿಗೆ ದೂರವಾದೆ..ಸದಾ ನಶೆಯಲ್ಲೇ ಇರುತ್ತಿದ್ದೆ.

ತೆಲುಗು ಸಮಯಂ 10 Aug 2017, 12:37 am
'ಭಾವನಿಗೆ (ಶ್ರೀಹರಿ) ಪ್ರಾಣವಾಗಿ ಬದುಕಿದೆ. ಇದ್ದಕ್ಕಿದ್ದಂತೆ ಅವರು ನಮ್ಮನ್ನು ಅನಾಥರನ್ನಾಗಿ ಮಾಡಿ ಹೊರಟು ಹೋದರು. ಅದನ್ನು ಭರಿಸಲಾಗದೆ ಆ ನೋವನ್ನು ಮರೆಯಲು ಮದ್ಯಕ್ಕೆ ವ್ಯಸನಿಯಾದೆ. ತಿಂಡಿಗೆ, ನೀರಿಗೆ ದೂರವಾದೆ..ಸದಾ ನಶೆಯಲ್ಲೇ ಇರುತ್ತಿದ್ದೆ. ತಿಂಗಳು, ವರ್ಷಗಳು ಉರುಳಿ ಹೋಗುತ್ತಿದ್ದವು. ಆರೋಗ್ಯ ಹದಗೆಟ್ಟಿತು. ಆ ಸಮಯದಲ್ಲಿ ಹಿರಿಮಗ ಕೈಯ್ಯಾರೆ ನನ್ನನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಯಲ್ಲಿ ಹಾಕಿದ. ಆಗ ಅನ್ನಿಸಿತು, ನನಗೇನಾದರೂ ಆದರೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅಂತ. ಹಾಗಾಗಿ ಆ ನಶೆಯಿಂದ ಸಂಪೂರ್ಣವಾಗಿ ಹೊರಗೆ ಬಂದೆ' ಎಂದಿದ್ದಾರೆ ಒಂದು ಕಾಲದ ಐಟಂ ತಾರೆ ಡಿಸ್ಕೋ ಶಾಂತಿ.
Vijaya Karnataka Web i was addicted to alchohal after sriharis death
ಗಂಡ ಮೃತಪಟ್ಟ ಬಳಿಕ ಮದ್ಯ ವ್ಯಸನಿಯಾದೆ: ಡಿಸ್ಕೋ ಶಾಂತಿ


ದಿವಂಗತ ನಟ ಶ್ರೀಹರಿಗೆ ಪತ್ನಿಯಾಗಷ್ಟೇ ಅಲ್ಲದೆ ಸ್ವತಃ ನಟಿಯಾಗಿ, ಡ್ಯಾನ್ಸರ್ ಆಗಿ ಹೆಸರು ಮಾಡಿದವರು ಡಿಸ್ಕೋ ಶಾಂತಿ. ಶ್ರೀಹರಿ ಮೃತಪಟ್ಟು ನಾಲ್ಕು ವರ್ಷಗಳಾಗುತ್ತಿದೆ. ಈ ಹಿನ್ನೆಲಯಲ್ಲಿ ತಮ್ಮ ಕುಟುಂಬದ ಸ್ಥಿತಿಗತಿಗಳ ಬಗ್ಗೆ ಅವರು ಮಾತನಾಡಿದ್ದಾರೆ. ಪತ್ರಿಕೆಯೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ಈ ಅಂಶಗಳನ್ನು ಅವರು ಪ್ರಸ್ತಾಪಿಸಿದ್ದಾರೆ.

ಶ್ರೀಹರಿ ಮರಣದಿಂದ ನನ್ನ ಬದುಕಿನಲ್ಲಿ ಕತ್ತಲು ಕವಿದಿತ್ತು ಎಂದು ಡಿಸ್ಕೋ ಶಾಂತಿ ಹೇಳಿಕೊಂಡಿದ್ದಾರೆ. ಆ ನೋವನ್ನು ಮರೆಯಲು ಮದ್ಯಕ್ಕೆ ವ್ಯಸನಿಯಾಗಿದ್ದೆ. ಆದರೆ ಮಕ್ಕಳನ್ನು ನೋಡಿಕೊಳ್ಳಬೇಕೆಂಬ ಒತ್ತಾಸೆ ಮೇರೆಗೆ ತಾನು ಆ ವ್ಯಸನದಿಂದ ಹೊರಗೆ ಬರಬೇಕಾಯಿತು ಎಂದಿದ್ದಾರೆ.

ಆದರೆ ನಾಳೆ ಏನಾಗುತ್ತದೋ ಏನೋ ಎಂಬ ಭಯವಂತೂ ಕಾಡುತ್ತಿದೆ ಎಂದರು. ಚಿಕ್ಕಮಗನ ಮುಂದಿನ ಮೂರು ವರ್ಷಗಳ ಕಾಲೇಜು ಶುಲ್ಕವನ್ನು ಒಂದೇ ಕಂತಿನಲ್ಲಿ ಪಾವತಿಸಿದ್ದೇನೆ. ಇದೇನಿದು ಎಂದು ಮಕ್ಕಳು ಕೇಳಿದ್ದಕ್ಕೆ ಯಾವಾಗ ಏನು ನಡೆಯುತ್ತದೋ ಏನೋ ಎಂಬ ಭಯ ಕಾಡುತ್ತಿರುವುದನ್ನು ಅವರಿಗೆ ತಿಳಿಸಿದೆ ಎಂದಿದ್ದಾರೆ.

ಪತಿಯಂತೆ ತಾನು ಕೂಡ ಮಕ್ಕಳಿಗೆ ಎಲ್ಲಿ ದೂರವಾಗುತ್ತೇನೋ ಎಂಬ ಭಯ ಕಾಡುತ್ತಿದೆ ಎಂದು ಶಾಂತಿ ಕಣ್ಣೀರಾಗಿದ್ದಾರೆ. ಪತಿಯ ಆಶಯ ಸಾಧನೆಗೆ ತನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆಂದು ಹೇಳಿದರು. ನಾಲ್ಕು ತಿಂಗಳ ವಯಸ್ಸಿನಲ್ಲಿ ಸಾವಪ್ಪಿದ ತಮ್ಮ ಮಗಳು ಅಕ್ಷಯಾ ಹೆಸರಿನಲ್ಲಿ ಶ್ರೀಹರಿ ಸ್ಥಾಪಿಸಿದ ಟ್ರಸ್ಟ್ ಮೂಲಕ ಅವರು ಆರಂಭಿಸಿದ ಸೇವಾ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌