ಆ್ಯಪ್ನಗರ

ಆಪರೇಷನ್ ನಡೆದಿರುವುದು ನಿಜ: 'ವರದನಾಯಕ' ಹೀರೋಯಿನ್

ತೆಲುಗು ಮತ್ತು ತಮಿಳಿನಲ್ಲೂ ನಿಕೇಶಾ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ತಲೈವನ್, ಕರೈಯೋರಂ, ನಾರದನ್, 7 ನಾಟ್ಕಲ್, ಭಾಸ್ಕರ್ ಒರು ರಾಸ್ಕಲ್ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ತಮಿಳು ಅಭಿಮಾನಿಗಳ ಮನಸ್ಸನ್ನೂ ಸೂರೆಗೊಂಡ ನಾಯಕಿ ನಿಕೇಶಾ.

Vijaya Karnataka Web 30 Apr 2019, 4:11 pm
ಹೌದು ನಿಜ, ನನಗೆ ಆಪರೇಷನ್ ಆಗಿದೆ. ಸದ್ಯಕ್ಕೆ ಚೆನ್ನಾಗಿಯೇ ಇದ್ದೇನೆ ಎಂದಿದ್ದಾರೆ ವರದನಾಯಕ ಚಿತ್ರದ ನಟಿ ನಿಕೇಶಾ ಪಟೇಲ್. ಕನ್ನಡದಲ್ಲಿ ನರಸಿಂಹ, ಡಕೋಟ ಪಿಕ್ಚರ್, ವರದನಾಯಕ, ನಮಸ್ತೇ ಮೇಡಂ, ಅಲೋನ್ ಎಂಬ ಚಿತ್ರಗಳಲ್ಲಿ ನಿಕೇಶ್ ಪಟೇಲ್ ನಟಿಸಿದ್ದಾರೆ.

ತೆಲುಗು ಮತ್ತು ತಮಿಳಿನಲ್ಲೂ ನಿಕೇಶಾ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ತಲೈವನ್, ಕರೈಯೋರಂ, ನಾರದನ್, 7 ನಾಟ್ಕಲ್, ಭಾಸ್ಕರ್ ಒರು ರಾಸ್ಕಲ್ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ತಮಿಳು ಅಭಿಮಾನಿಗಳ ಮನಸ್ಸನ್ನೂ ಸೂರೆಗೊಂಡ ನಾಯಕಿ ನಿಕೇಶಾ.

ಸದ್ಯಕ್ಕೆ ಜಿಬಿ ಪ್ರಕಾಶ್ ಜತೆಗೆ ಎಝಿಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಆಸ್ಪತ್ರೆಯಲ್ಲಿ ನಿಕೇಶಾ ಪಟೇಲ್‌ಗೆ ಗುಟ್ಟಾಗಿ ಆಪರೇಷನ್ ನಡೆದಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹೊರಬಂದಿರಲಿಲ್ಲ.

ಇದಕ್ಕೆ ಸಂಬಂಧಿಸಿದಂತೆ ನಿಕೇಶಾ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ನನಗೆ ಸಣ್ಣ ಆಪರೇಷನ್ ಆಗಿದೆ. ಸದ್ಯಕ್ಕೆ ಚೆನ್ನಾಗಿಯೇ ಇದ್ದೇನೆ. ಎಝಿಲ್ ಚಿತ್ರದಲ್ಲಿನ ತನ್ನ ಶೂಟಿಂಗ್ ಕಂಪ್ಲೀಟ್ ಆಗಿದೆ. ಹೊಸ ಪ್ರಾಜೆಕ್ಟ್‌ಗಾಗಿ ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ ನಿಕೇಶಾ ಪಟೇಲ್. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಬೇಗ ಚೇತರಿಸಿಕೊಳ್ಳಿ ಮೇಡಂ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌