ಆ್ಯಪ್ನಗರ

ರಾಜಕಾರಣದ ಜತೆ ಜತೆಗೆ ಸಿನಿಮಾದಲ್ಲೂ ಮುಂದುವರೆಯುತ್ತೇನೆ: ನಿಖಿಲ್ ಕುಮಾರಸ್ವಾಮಿ

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಭರದ ತಯಾರಿ ನಡೆಸಿದ್ದಾರೆ. ಕನ್ನಡದಲ್ಲೇ ಪ್ರತಿಭಾವಂತ ನಿರ್ದೇಶಕರಿದ್ದಾರೆ. ಪರಭಾಷೆಯ ನಿರ್ದೇಶಕರನ್ನು ಸ್ಯಾಂಡಲ್‍ವುಡ್‌ಗೆ ಕರೆತರಲ್ಲ ಎಂದಿದ್ದಾರೆ.

Vijaya Karnataka 30 Jul 2019, 6:14 pm
ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ನನ್ನ ನಾಲ್ಕನೇ ಸಿನಿಮಾ ಸೆಟ್ಟೇರಬೇಕಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ನನ್ನ ಮುಂದಿನ ಸಿನಿಮಾ ಕುರಿತು ಇನ್ನೆರಡು ತಿಂಗಳಲ್ಲಿ ಮಾಹಿತಿ ಕೊಡುವುದಾಗಿ ನಿಖಿಲ್‌ ಕುಮಾರಸ್ವಾಮಿ ಹೇಳಿದರು.
Vijaya Karnataka Web nikhil


ಲೈಕಾ ಪ್ರೊಡಕ್ಷನ್‌ ಲಾಂಛನದಲ್ಲಿ ನಿಖಿಲ್‌ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕರು ಬರಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಾಗಿಯೂ ನಿಖಿಲ್‌ ಮಾತನಾಡಿದರು. [ಬೆಚ್ಚಿಬಿದ್ದ 'ಕುರುಕ್ಷೇತ್ರ' ಚಿತ್ರತಂಡ; ಕಾಮೆಂಟ್‌ಗಳು ಡಿಸೇಬಲ್!]

'ಕನ್ನಡದಲ್ಲೇ ಪ್ರತಿಭಾವಂತ ನಿರ್ದೇಶಕರು ಇದ್ದಾರೆ. ಪರಭಾಷೆಯಿಂದ ನಿರ್ದೇಶಕರನ್ನು ಕರೆತರುವುದಿಲ್ಲ. ಇಲ್ಲಿನ ನಿರ್ದೇಶಕರ ಜತೆಯೇ ಕೆಲಸ ಮಾಡಲು ಬಯಸುತ್ತೇನೆ. ಸದ್ಯ ಹೊಸ ಚಿತ್ರದ ತಯಾರಿಯಲ್ಲಿ ತೊಡಗಿದ್ದು, ರಾಜಕಾರಣದ ಜತೆ ಜತೆಗೆ ಸಿನಿಮಾ ರಂಗದಲ್ಲೂ ಮುಂದುವರೆಯುತ್ತೇನೆ' ಎಂದರು.

ಈಗಾಗಲೇ ತಮ್ಮದೇ ಬ್ಯಾನರ್‌ನ ಎರಡು ಚಿತ್ರಗಳಲ್ಲಿ ನಟಿಸಿರುವ ನಿಖಿಲ್‌, ಮುಂದಿನ ಚಿತ್ರಕ್ಕೆ ಬೇರೆ ನಿರ್ಮಾಪಕರು ಇರಲಿದ್ದಾರಂತೆ. ಈ ಎಲ್ಲದರ ಕುರಿತು ಅವರು ಮುಂದಿನ ದಿನಗಳಲ್ಲಿ ಖಚಿತ ಮಾಹಿತಿ ನೀಡಲಿದ್ದಾರಂತೆ. [ನಿಖಿಲ್‌ಗೆ ಸವಾಲು ಹಾಕ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್?]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌