ಆ್ಯಪ್ನಗರ

ಲಾಂಗ್ ಗ್ಯಾಪ್ ಬಳಿಕ 'ಮುಂದುವರೆದ ಅಧ್ಯಾಯ'ಕ್ಕೆ ಹೊರಟ ನಟ ಆದಿತ್ಯ!

ಈಗ ಬಾಲು ಹೇಳಿರುವ ಕಥೆ ಇಷ್ಟವಾಗಿದ್ದು ಮತ್ತೆ ಸಿನಿಮಾ ನಟನೆಯಲ್ಲಿ ತೊಡಗಿಕೊಂಡಿದ್ದೇನೆ. ಮುಂಬರುವ 'ಮುಂದುವರೆದ ಅಧ್ಯಾಯ' ಎಂಬ ಸಿನಿಮಾ ಅಲ್ಲದೇ ಇನ್ನೊಂದು ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದೇನೆ. ಅದರಲ್ಲಿ ನಾಯಕರಾಗಿ ನಟ ಉಪೇಂದ್ರ ನಟಿಸುತ್ತಿದ್ದು, ನಾನು ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.

Vijaya Karnataka Web 6 May 2019, 9:53 am
ಕನ್ನಡದ ನಟ ಆದಿತ್ಯ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಅವರು ಹೊಸ ಸಿನಿಮಾ ಮಾಡಿರಲಿಲ್ಲ. 'ಮುಂದುವರೆದ ಅಧ್ಯಾಯ' ಹೆಸರಿನ ಸಿನಿಮಾವನ್ನು ನಟ ಆದಿತ್ಯ ಒಪ್ಪಿಕೊಂಡಿದ್ದು, ಇದೀಗ ಶೂಟಿಂಗ್ ಹಂತದಲ್ಲಿದೆ. "ನಿರ್ದೇಶಕ ಬಾಲು (ಚಂದ್ರಶೇಖರ್) ಹೇಳಿದ ಸ್ಕ್ರಿಪ್ಟ್‌ ನನಗೆ ತುಂಬಾ ಇಷ್ಟವಾಯ್ತು. ಹೀಗಾಗಿ ವಿಭಿನ್ನವಾದ ಅವರ ಕಥೆ ಒಪ್ಪಿಕೊಂಡು ಸಿನಿಮಾ ನಟನೆಯಲ್ಲಿ ಮತ್ತೆ ತೊಡಗಿಕೊಂಡಿದ್ದೇನೆ" ಎಂದಿದ್ದಾರೆ ನಟ ಆದಿತ್ಯ.
Vijaya Karnataka Web adithyaa0605


"ಇತ್ತೀಚೆಗೆ ನನಗೆ ಯಾವುದೇ ಹೊಸ ರೀತಿಯ ಕಥೆ ಬಂದಿರಲಿಲ್ಲ. ಹೀಗಾಗಿ ನಾನು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈ ಮೊದಲು ನಾನು ಮಾಡಿದ್ದ 'ಭೂಗತ ಲೋಕ'ದ ಕಥೆಯಷ್ಟು ಗಟ್ಟಿಯಾದ ಕಥೆ ಕೂಡ ಬಂದಿರಲಿಲ್ಲ. ನನಗೆ ಬರುತ್ತಿದ್ದ ಎಲ್ಲ ಕಥೆಗಳೂ ಅಂಡರ್‌ವರ್ಲ್ಡ್‌ ಕಥೆಗಳೇ ಆಗಿದ್ದವು. ಅವೂ ಕೂಡ 'ಡೆಡ್ಲಿ ಸೋಮ' ಅಥವಾ 'ಎದೆಗಾರಿಕೆ' ಅಷ್ಟರಮಟ್ಟಿಗಿನ ಗಟ್ಟಿ ಕಥೆಯನ್ನು ಹೊಂದಿರಲಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ಸಿನಿಮಾ ಮಾಡದೇ ಸುಮ್ಮನೇ ಕುಳಿತುಕೊಳ್ಳಬೇಕಾಯಿತು.

ಈಗ ಬಾಲು ಹೇಳಿರುವ ಕಥೆ ಇಷ್ಟವಾಗಿದ್ದು ಮತ್ತೆ ಸಿನಿಮಾ ನಟನೆಯಲ್ಲಿ ತೊಡಗಿಕೊಂಡಿದ್ದೇನೆ. ಮುಂಬರುವ 'ಮುಂದುವರೆದ ಅಧ್ಯಾಯ' ಎಂಬ ಸಿನಿಮಾ ಅಲ್ಲದೇ ಇನ್ನೊಂದು ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದೇನೆ. ಅದರಲ್ಲಿ ನಾಯಕರಾಗಿ ನಟ ಉಪೇಂದ್ರ ನಟಿಸುತ್ತಿದ್ದು, ನಾನು ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದನ್ನು ಹೊರತುಪಡಿಸಿ ಕೂಡ ನಾನು ಇನ್ನೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದೇನೆ. ಆದರೆ ಅದು ಇನ್ನಷ್ಟೆ ಫೈನಲ್ ಆಗಬೇಕಿದೆ " ಎಂದಿದ್ದಾರೆ ನಟ ಆದಿತ್ಯ.

ಒಟ್ಟಿನಲ್ಲಿ ನಟ ಆದಿತ್ಯ ಮತ್ತೆ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ನಟ ಆದತ್ಯ ಕಳೆದೇ ಹೋಗಿದ್ದಾರೇನೋ ಎಂಬಷ್ಟರ ಮಟ್ಟಿಗೆ ಅವರು ಸಿನಿಮಾದಿಂದ ಮರೆಯಾಗಿದ್ದರು. ಆದರೆ ಸದ್ಯಕ್ಕೆ 'ಮುಂದುವರಿದ ಅಧ್ಯಾಯ' ಚಿತ್ರದಲ್ಲಿ ನಟಿಸುತ್ತಿರುವ ಆದಿತ್ಯ, ತಮ್ಮ ಇನ್ನೊಂದು ಇನ್ನಿಂಗ್ಸ್ ಶುರುಮಾಡಿದ್ದಾರೆ ಎನ್ನಬಹುದು. ಮತ್ತೆ ಹೊಸ ಹೊಸ ಕಥೆ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಮಾತ್ರ ಇನ್ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರಂತೆ ನಟ ಆದಿತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌