ಶರಣು ಹುಲ್ಲೂರು
* ಪ್ರಿಮಿಯರ್ ಪದ್ಮಿನಿಯಲ್ಲಿ ನೀವು ಯಾವ ರೀತಿಯ ಪಾತ್ರ ನಿರ್ವಹಿಸಿದ್ದೀರಿ?
ಎರಡು ಪೀಳಿಗೆ ಕಥೆ ಹೊಂದಿರುವ ಸಿನಿಮಾವಿದು. ಜಗ್ಗೇಶ್, ಮಧುಬಾಲಾ, ಸುಧಾರಾಣಿ ಒಂದು ಪೀಳಿಗೆಯಾದರೆ, ವಿವೇಕ್ ಸಿಂಹ, ನಾನು ಮತ್ತು ಪ್ರಮೋದ್ ಮತ್ತೊಂದು ಪೀಳಿಗೆಯನ್ನು ಪ್ರತಿನಿಧಿಸುತ್ತೇವೆ. ಈ ಸಿನಿಮಾದಲ್ಲಿ ನಿರ್ದೇಶಕ ರಮೇಶ್ ಇಂದಿರಾ ಕೂಡ ಒಂದು ಪಾತ್ರ ಮಾಡಿದ್ದಾರೆ. ಅವರ ಮಗಳಾಗಿ ನಾನು ನಟಿಸಿದ್ದೇನೆ.
* ನಿಮ್ಮ ಪಾತ್ರಕ್ಕಿರು ಹಿನ್ನೆಲೆ ಏನು? ಯಾವ ಕಾರಣಕ್ಕಾಗಿ ಆ ಪಾತ್ರ ನಿಮಗೆ ಮಹತ್ವ ಅನಿಸಿತು?
ಈ ಹೊತ್ತಿನ ಹುಡುಗಿಯರನ್ನು ಪ್ರತಿನಿಧಿಸುವ ಪಾತ್ರವದು. ಎಂಥ ಕಷ್ಟಗಳೇ ಬರಲಿ, ತನ್ನೊಳಗೆ ಬಚ್ಚಿಟ್ಟುಕೊಂಡು ಬದುಕುವಂಥ ಹುಡುಗಿ. ಅಲ್ಲದೇ, ಆಧುನಿಕ ಹುಡುಗಿಯರ ಜೀವನ ಹೇಗಿದೆಯೋ ಅದನ್ನೇ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
* ಹಿರಿಯ ಕಲಾವಿದರ ಜತೆ ನಟಿಸಿದ ಅನುಭವ ಹೇಗಿತ್ತು?
ಜಗ್ಗೇಶ್ ಅವರ ಜತೆ ನನಗೆ ತೀರಾ ಕಡಿಮೆ ದೃಶ್ಯಗಳಿದ್ದರೂ, ಅವರ ನಟನೆ ಸ್ಫೂರ್ತಿ ಅನಿಸಿತು. ಮಧುಬಾಲಾ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ನಾವು. ಅವರೊಂದಿಗೆ ನಟಿಸಿದ್ದು ಹೆಮ್ಮೆ ಅನಿಸಿತು. ಹಿರಿ ಮತ್ತು ಕಿರಿ ಕಲಾವಿದರ ಅಪರೂಪದ ಸಂಗಮ ಸಿನಿಮಾದಲ್ಲಿದೆ. ಹಾಗಾಗಿ ಕಲಿಯಲಿಕ್ಕೆ ಸಾಕಷ್ಟು ಅವಕಾಶ ಸಿಕ್ಕಿತು.
*ಪ್ರಿಮಿಯರ್ ಪದ್ಮಿನಿ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ?
ನಿರ್ದೇಶಕ ರಮೇಶ್ ಇಂದಿರಾ ಅವರ ಜತೆ ಕೆಲಸ ಮಾಡಿರುವ ಅನೇಕ ಕಲಾವಿದರು ಇವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದರು. ತುಂಬಾ ಕಲಿಯಬಹುದು ಎಂದು ಟಿಫ್ಸ್ ಕೊಟ್ಟಿದ್ದರು. ಅಲ್ಲದೇ, ನನ್ನ ಪಾತ್ರ ಕೂಡ ಚೆನ್ನಾಗಿತ್ತು. ನಿರ್ಮಾಪಕಿ, ನಟಿ ಶ್ರುತಿ ನಾಯ್ಡು ಅವರು ನಟಿಸುವುದಕ್ಕೆ ಅವಕಾಶ ಮಾಡಿಕೊಟ್ಟರು. ಈ ಎಲ್ಲ ಕಾರಣಕ್ಕಾಗಿ ಚಿತ್ರ ಒಪ್ಪಿಕೊಂಡೆ.
*ಯಾವಾಗ ಮದುವೆ? ಮದುವೆ ನಂತರ ನಟಿಸುತ್ತೀರಾ?
ಡಿಸೆಂಬರ್ನಲ್ಲಿ ಮದುವೆ ಆಗಲಿದ್ದೇನೆ. ಹಾಗಾಗಿ ತಯಾರಿ ಏನೂ ಇಲ್ಲ. ಮದುವೆಯ ನಂತರವೂ ಸಿನಿಮಾ ರಂಗದಲ್ಲೇ ಮುಂದುವರೆಯಲಿದ್ದೇನೆ.
* ನಿಮ್ಮ ತಂದೆಯ ನಿರ್ದೇಶನದಲ್ಲಿ ನಟಿಸುವ ಆಸೆ ಇದೆಯಾ?
ನಟನೆಗೆ ಸಂಬಂಧಿಸಿದಂತೆ ಅವರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಕೊಡುತ್ತಲೇ ಇರುತ್ತಾರೆ. ಆದರೆ, ಯಾವತ್ತೂ ನಿರ್ದೇಶನದ ಬಗ್ಗೆ ಅವರೂ ಮಾತನಾಡಿಲ್ಲ. ನಾನೂ ಕೇಳಿಲ್ಲ.
* ಪ್ರಿಮಿಯರ್ ಪದ್ಮಿನಿಯಲ್ಲಿ ನೀವು ಯಾವ ರೀತಿಯ ಪಾತ್ರ ನಿರ್ವಹಿಸಿದ್ದೀರಿ?
ಎರಡು ಪೀಳಿಗೆ ಕಥೆ ಹೊಂದಿರುವ ಸಿನಿಮಾವಿದು. ಜಗ್ಗೇಶ್, ಮಧುಬಾಲಾ, ಸುಧಾರಾಣಿ ಒಂದು ಪೀಳಿಗೆಯಾದರೆ, ವಿವೇಕ್ ಸಿಂಹ, ನಾನು ಮತ್ತು ಪ್ರಮೋದ್ ಮತ್ತೊಂದು ಪೀಳಿಗೆಯನ್ನು ಪ್ರತಿನಿಧಿಸುತ್ತೇವೆ. ಈ ಸಿನಿಮಾದಲ್ಲಿ ನಿರ್ದೇಶಕ ರಮೇಶ್ ಇಂದಿರಾ ಕೂಡ ಒಂದು ಪಾತ್ರ ಮಾಡಿದ್ದಾರೆ. ಅವರ ಮಗಳಾಗಿ ನಾನು ನಟಿಸಿದ್ದೇನೆ.
* ನಿಮ್ಮ ಪಾತ್ರಕ್ಕಿರು ಹಿನ್ನೆಲೆ ಏನು? ಯಾವ ಕಾರಣಕ್ಕಾಗಿ ಆ ಪಾತ್ರ ನಿಮಗೆ ಮಹತ್ವ ಅನಿಸಿತು?
ಈ ಹೊತ್ತಿನ ಹುಡುಗಿಯರನ್ನು ಪ್ರತಿನಿಧಿಸುವ ಪಾತ್ರವದು. ಎಂಥ ಕಷ್ಟಗಳೇ ಬರಲಿ, ತನ್ನೊಳಗೆ ಬಚ್ಚಿಟ್ಟುಕೊಂಡು ಬದುಕುವಂಥ ಹುಡುಗಿ. ಅಲ್ಲದೇ, ಆಧುನಿಕ ಹುಡುಗಿಯರ ಜೀವನ ಹೇಗಿದೆಯೋ ಅದನ್ನೇ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
* ಹಿರಿಯ ಕಲಾವಿದರ ಜತೆ ನಟಿಸಿದ ಅನುಭವ ಹೇಗಿತ್ತು?
ಜಗ್ಗೇಶ್ ಅವರ ಜತೆ ನನಗೆ ತೀರಾ ಕಡಿಮೆ ದೃಶ್ಯಗಳಿದ್ದರೂ, ಅವರ ನಟನೆ ಸ್ಫೂರ್ತಿ ಅನಿಸಿತು. ಮಧುಬಾಲಾ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ನಾವು. ಅವರೊಂದಿಗೆ ನಟಿಸಿದ್ದು ಹೆಮ್ಮೆ ಅನಿಸಿತು. ಹಿರಿ ಮತ್ತು ಕಿರಿ ಕಲಾವಿದರ ಅಪರೂಪದ ಸಂಗಮ ಸಿನಿಮಾದಲ್ಲಿದೆ. ಹಾಗಾಗಿ ಕಲಿಯಲಿಕ್ಕೆ ಸಾಕಷ್ಟು ಅವಕಾಶ ಸಿಕ್ಕಿತು.
*ಪ್ರಿಮಿಯರ್ ಪದ್ಮಿನಿ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ?
ನಿರ್ದೇಶಕ ರಮೇಶ್ ಇಂದಿರಾ ಅವರ ಜತೆ ಕೆಲಸ ಮಾಡಿರುವ ಅನೇಕ ಕಲಾವಿದರು ಇವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದರು. ತುಂಬಾ ಕಲಿಯಬಹುದು ಎಂದು ಟಿಫ್ಸ್ ಕೊಟ್ಟಿದ್ದರು. ಅಲ್ಲದೇ, ನನ್ನ ಪಾತ್ರ ಕೂಡ ಚೆನ್ನಾಗಿತ್ತು. ನಿರ್ಮಾಪಕಿ, ನಟಿ ಶ್ರುತಿ ನಾಯ್ಡು ಅವರು ನಟಿಸುವುದಕ್ಕೆ ಅವಕಾಶ ಮಾಡಿಕೊಟ್ಟರು. ಈ ಎಲ್ಲ ಕಾರಣಕ್ಕಾಗಿ ಚಿತ್ರ ಒಪ್ಪಿಕೊಂಡೆ.
*ಯಾವಾಗ ಮದುವೆ? ಮದುವೆ ನಂತರ ನಟಿಸುತ್ತೀರಾ?
ಡಿಸೆಂಬರ್ನಲ್ಲಿ ಮದುವೆ ಆಗಲಿದ್ದೇನೆ. ಹಾಗಾಗಿ ತಯಾರಿ ಏನೂ ಇಲ್ಲ. ಮದುವೆಯ ನಂತರವೂ ಸಿನಿಮಾ ರಂಗದಲ್ಲೇ ಮುಂದುವರೆಯಲಿದ್ದೇನೆ.
* ನಿಮ್ಮ ತಂದೆಯ ನಿರ್ದೇಶನದಲ್ಲಿ ನಟಿಸುವ ಆಸೆ ಇದೆಯಾ?
ನಟನೆಗೆ ಸಂಬಂಧಿಸಿದಂತೆ ಅವರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಕೊಡುತ್ತಲೇ ಇರುತ್ತಾರೆ. ಆದರೆ, ಯಾವತ್ತೂ ನಿರ್ದೇಶನದ ಬಗ್ಗೆ ಅವರೂ ಮಾತನಾಡಿಲ್ಲ. ನಾನೂ ಕೇಳಿಲ್ಲ.