ಆ್ಯಪ್ನಗರ

ಸೀತಾರಾಮ ಕಲ್ಯಾಣಕ್ಕೆ ಬಣ್ಣ ತುಂಬಿದ ಪದ್ಮಾವತ್‌ ಕಲರಿಸ್ಟ್‌

ನಿಖಿಲ್‌ ಕುಮಾರ್‌ ನಾಯಕರಾಗಿ ನಟಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರ ಜನವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಮುಂಬಯಿಯ ಖ್ಯಾತ ಕಲರಿಸ್ಟ್‌ ಒಬ್ಬರು ಕೆಲಸ ಮಾಡಿದ್ದಾರೆ.

Vijaya Karnataka 29 Dec 2018, 7:40 am
ಹರೀಶ್‌ ಬಸವರಾಜ್‌
Vijaya Karnataka Web seetha rama kalyana 1


ಪೋಸ್ಟರ್‌ಗಳು, ಟೀಸರ್‌ ಮೂಲಕ ಗಮನ ಸೆಳೆಯುತ್ತಿರುವ ಸೀತಾರಾಮ ಕಲ್ಯಾಣ ಸಿನಿಮಾಗೆ ಪದ್ಮಾವತ್‌ ಚಿತ್ರದ ಖ್ಯಾತಿಯ ಖ್ಯಾತ ಕಲರಿಸ್ಟ್‌ ಆಶೀರ್ವಾದ್‌ ಕೆಲಸ ಮಾಡಿದ್ದಾರೆ.

ಹಿಂದಿಯ ಪದ್ಮಾವತ್‌, ಠಾಕರೆ, ಸಿಮ್ರನ್‌, ರಯೀಸ್‌, ದಂಗಲ್‌ ಸಿನಿಮಾಗಳಿಗೆ ಡಿ ಐ ಮತ್ತು ಕಲರಿಂಗ್‌ ಮಾಡಿದ್ದ ಆಶೀರ್ವಾದ್‌ ಅವರನ್ನು ನಿರ್ದೇಶಕ ಹರ್ಷ ಸೀತಾರಾಮ ಕಲ್ಯಾಣಕ್ಕಾಗಿ ಕನ್ನಡಕ್ಕೆ ಕರೆ ತಂದಿದ್ದಾರೆ. ಈಗಾಗಲೇ ಅವರ ಭಾಗದ ಕೆಲಸಗಳು ಕಂಪ್ಲಿಟ್‌ ಆಗಿದ್ದು ಹರ್ಷ ರೀ ರೆಕಾರ್ಡಿಂಗ್‌ನಲ್ಲಿ ಬಿಝಿ ಇದ್ದಾರೆ.

' ನಾನು ಪದ್ಮಾವತ್‌ ಸೇರಿದಂತೆ ಇನ್ನಿತರ ಸಿನಿಮಾಗಳನ್ನು ನೋಡಿದಾಗಲೇ ಅವರ ಕೈಯಲ್ಲಿ ಕೆಲಸ ಮಾಡಿಸಬೇಕು ಎಂದು ನಿರ್ಧರಿಸಿದ್ದೆ. ಬಹಳ ದಿನದಿಂದಲೂ ಅವರ ಡೇಟ್ಸ್‌ಗಾಗಿ ಕಾಯುತ್ತಿದ್ದೆ. ಅವರು ಬಹಳ ಬೀಝಿ ಕೆಲಸಗಾರರಾದ ಕಾರಣ ನಿಖಿಲ್‌ ಅವರ ಸಿನಿಮಾವನ್ನು ಕೈಗೆತ್ತಿಕೊಂಡ ದಿನವೇ ಅವರ ಡೇಟ್ಸ್‌ನ್ನು ಬ್ಲಾಕ್‌ ಮಾಡಿಸಿದೆ. ಈಗ ಸಿನಿಮಾದ ಔಟ್‌ಪುಟ್‌ ನೋಡಿದರೆ ಅವರ ಕೆಲಸ ಎದ್ದು ಕಾಣುತ್ತದೆ'ಎನ್ನುತ್ತಾರೆ ಹರ್ಷ.

ಇನ್ನು ನಿಖಿಲ್‌ ಬಗ್ಗೆ ಮಾತನಾಡುವ ಹರ್ಷ 'ಜಾಗ್ವಾರ್‌ ಸಿನಿಮಾದಲ್ಲಿ ಕಂಡುಕೊಂಡಿದ್ದ ನ್ಯೂನ್ಯತೆಗಳನ್ನು ಸೀತಾರಾಮ ಕಲ್ಯಾಣದಲ್ಲಿ ಫುಲ್‌ ಫಿಲ್‌ ಮಾಡಿಕೊಂಡಿದ್ದಾರೆ ನಿಖಿಲ್‌. ಈ ಚಿತ್ರದಲ್ಲಿ ಅವರು ಕಾಮಿಡಿ ಮಾಡಿದ್ದಾರೆ. ಅದ್ಭುತವಾಗಿ ಡಾನ್ಸ್‌ ಮಾಡಿದ್ದಾರೆ. ಸ್ಟೈಲಿಷ್‌ ಆಗಿ ಫೈಟ್‌ ಮಾಡಿದ್ದಾರೆ. ನೋಡುಗರಿಗೆ ಈ ಸಿನಿಮಾ ಒಂದು ರೀತಿಯಲ್ಲಿ ಫುಲ್‌ ಮೀಲ್ಸ್‌,'ಎಂದು ಹೇಳುತ್ತಾರೆ.

ನಿಖಿಲ್‌ಗೆ ಜೋಡಿಯಾಗಿ ರಚಿತಾ ರಾಮ್‌ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ವಿಶೇಷ ಎಂದರೆ ನೂರಕ್ಕೂ ಹೆಚ್ಚು ಮಂದಿ ಮುಖ್ಯ ಕಲಾವಿದರು ನಟಿಸಿದ್ದಾರೆ. ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಡಿ ಅನಿತಾ ಕುಮಾರಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಆಶೀರ್ವಾದ್‌ ಅವರ ಡೇಟ್ಸ್‌ ಸಿಗುವುದೇ ಕಷ್ಟ, ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗೆ ಅವರು ಕೆಲಸ ಮಾಡಿದ್ದಾರೆ. ನಮ್ಮ ಸಿನಿಮಾದ ಸೌಂದರ್ಯ ಹೆಚ್ಚಿಸಲು ಅವರ ಕೆಲಸ ನೆರವಾಗಿದೆ
-ಎ .ಹರ್ಷ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌