ಆ್ಯಪ್ನಗರ

ಸ್ಯಾಂಡಲ್‌ವುಡ್‌ ತಾರೆಯರ ಐಪಿಎಲ್‌ ಸಂಭ್ರಮ

ಹೈದರಾಬಾದ್‌ನಲ್ಲಿ ಐಪಿಎಲ್‌-10ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ...

Vijaya Karnataka Web 6 Apr 2017, 3:39 pm

- ಹರೀಶ್‌ ಬಸವರಾಜ್‌

Vijaya Karnataka Web ipl 10th sandalwood stars celebration
ಸ್ಯಾಂಡಲ್‌ವುಡ್‌ ತಾರೆಯರ ಐಪಿಎಲ್‌ ಸಂಭ್ರಮ

ಹೈದರಾಬಾದ್‌ನಲ್ಲಿ ಐಪಿಎಲ್‌-10ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಐಪಿಎಲ್‌ಗೂ ಮತ್ತು ಸ್ಯಾಂಡಲ್‌ವುಡ್‌ಗೂ ಅವಿನಾಭಾವ ಸಂಬಂಧ ಇರುವ ಕಾರಣ, ಐಪಿಎಲ್‌ ಕ್ರಿಕೆಟ್‌ ಬಗ್ಗೆ ಸಿಲಿಬ್ರಿಟಿಗಳು ಮೆಚ್ಚಿ ಮಾತಾಡಿದ್ದಾರೆ. ತಮ್ಮ ನೆಚ್ಚಿನ ತಂಡಕ್ಕೆ ಶುಭ ಹಾರೈಸಿದ್ದಾರೆ.

ಸಿನಿಮಾ ರಂಗದ ಸಿಲಿಬ್ರೆಟಿಗಳಿಗೂ ಮತ್ತು ಕ್ರಿಕೆಟ್‌ ಕ್ಷೇತ್ರಕ್ಕೂ ಹತ್ತಿರದ ನಂಟಿದೆ. ಐಪಿಎಲ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಕನ್ನಡದ ಕೆಲವು ತಾರೆಯರು ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ತಂಡಗಳಿಗೆ ಹುರುಪು ನೀಡಿದ್ದಾರೆ. ಹಾಗಾಗಿ ಪ್ರತಿ ಐಪಿಎಲ್‌ ಬಂದಾಗಲೂ ತಮ್ಮ ನೆಚ್ಚಿನ ತಂಡಗಳ ಬಗ್ಗೆ ಅವರು ಮಾತಾಡುತ್ತಾರೆ. ಶುಭ ಹಾರೈಸುತ್ತಾರೆ. ಬುಧವಾರವಷ್ಟೇ ಐಪಿಎಲ್‌ 10 ಶುರುವಾಗಿದ್ದು, ಈ ಕುರಿತು ಸಿನಿ ತಾರೆಯರು ಮಾತಾಡಿದ್ದಾರೆ.

ರಾಜಕುಮಾರದ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಪುನೀತ್‌ ರಾಜ್‌ಕುಮಾರ್‌ಗೆ ಕ್ರಿಕೆಟ್‌ ಎಂದರೆ ಅಚ್ಚುಮೆಚ್ಚು. ಕೆಲ ವರ್ಷಗಳ ಹಿಂದೆ ಬೆಂಗಳೂರು ತಂಡವನ್ನು ಕನ್ನಡಿಗರಾಗಿ ಅವರು ಹುರಿದುಂಬಿಸಿದ್ದರು. ಆರ್‌ಸಿಬಿ ತಂಡಕ್ಕೂ ಪುನೀತ್‌ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದರು. ಈ ಬಾರಿ ಸಿನಿಮಾಗಳ ಶೂಟಿಂಗ್‌ ಇರುವ ಕಾರಣ ಅವರು ಟಿ ವಿಯಲ್ಲಿ ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡುತ್ತಾರಂತೆ. 'ಐಪಿಎಲ್‌ ಅಂದರೆ ಒಂದು ಮಿಂಚಿದ್ದ ಹಾಗೆ. ಉತ್ತಮ ಆಟದೊಂದಿಗೆ ಅದು ಒಳ್ಳೆಯ ಮನರಂಜನೆ ನೀಡುತ್ತದೆ. ಎಲ್ಲ ತಂಡಗಳು ಉತ್ತಮವಾಗಿ ಆಡಲಿ ಮತ್ತು ಆರ್‌ಸಿಬಿ ಈ ಬಾರಿ ಐಪಿಎಲ್‌ ಗೆಲ್ಲಲಿ' ಎಂದು ಹಾರೈಸಿದ್ದಾರೆ ಪುನೀತ್‌.

ಬಾಲಿವುಡ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಐಂದ್ರಿತಾ ರೇ ಕೂಡ ಬಿಡುವು ಮಾಡಿಕೊಂಡು ಮ್ಯಾಚ್‌ ನೋಡುತ್ತಾರಂತೆ. 'ಈ ಬಾರಿ ಸಿನಿಮಾ ಶೂಟಿಂಗ್‌ನಲ್ಲಿ ಬಿಝಿ ಆಗಿದ್ದೇನೆ. ಸ್ಟೇಡಿಯಂಗೆ ಹೋಗಿ ಕ್ರಿಕೆಟ್‌ ನೋಡುವುದು ಕಷ್ಟ. ನನ್ನ ಗೆಳೆಯರಾದ ರಾಬಿನ್‌ ಉತ್ತಪ್ಪ ಸೇರಿದಂತೆ ಮತ್ತಿತರರು ಆಡುತ್ತಿದ್ದಾರೆ. ಎಲ್ಲರಿಗೂ ಆಲ್‌ ದಿ ಬೆಸ್ಟ್‌. ಹೇಳುತ್ತೇನೆ. ಬಿಡುವು ಮಾಡಿಕೊಂಡು ಸಾಧ್ಯವಾದಷ್ಟು ಸ್ಟೇಡಿಯಂನಲ್ಲಿಯೇ ಕ್ರಿಕೆಟ್‌ ನೋಡುತ್ತೇನೆ' ಅಂತಾರೆ ಐಂದ್ರಿತಾ.

ತಮ್ಮ ನೆಚ್ಚಿನ ತಂಡ ಆರ್‌ಸಿಬಿ ಅನ್ನುವುದು ರಾಗಿಣಿ ಮಾತು. ಮೈದಾನಕ್ಕೆ ಹೋಗಿ ಕ್ರಿಕೆಟ್‌ ನೋಡಲು ಆಗದೇ ಇದ್ದರೆ, ಮಿಸ್‌ ಮಾಡದೇ ಟಿವಿಯಲ್ಲಾದರೂ ಮ್ಯಾಚ್‌ ನೋಡುತ್ತಾರಂತೆ. ' ಐಪಿಎಲ್‌ ಲಾಂಗರ್‌ ವರ್ಷನ್‌ನಲ್ಲಿ ವರ್ಕ್‌ ಆಗುತ್ತದೆ. ಜನ ಈಗ ಚುಟುಕು ಕ್ರಿಕೆಟ್‌ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ, ಐಪಿಎಲ್‌ನ ಯಶಸ್ಸೇ ಅದಕ್ಕೆ ಸಾಕ್ಷಿ. ಸೋಷಿಯಲ್‌ ಮೀಡಿಯಾದಲ್ಲಂತೂ ಎಲ್ಲೆಲ್ಲೂ ಐಪಿಎಲ್‌ ಹಂಗಾಮ. ನನ್ನ ಫೆವರೀಟ್‌ ಟೀಮ್‌ ಆರ್‌ಸಿಬಿ. ಕೊಹ್ಲಿ ಮತ್ತು ಎಬಿಡಿ ಗಾಯಗೊಂಡಿರುವುದು ಕೊಂಚ ಬೇಸರ ತರಿಸಿದೆ. ಈ ಬಾರಿ ಆರ್‌ಸಿಬಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನನ್ನದು' ಅನ್ನುವುದು ರಾಗಿಣಿ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌