ಆ್ಯಪ್ನಗರ

ಇರಾಳನ್ನು ನೋಡಿದಾಕ್ಷಣ ನನ್ನನ್ನು ನಾನೇ ಮರೆತೆ ಎಂದ ವರ್ಮ

ರಾಮ್‌ಗೋಪಾಲ್ ವರ್ಮ ಕ್ಯಾಂಪ್‌ಗೆ ಹೊಸದಾಗಿ ಸೇರಿಕೊಂಡಿರುವ ನಟಿ ಇರಾ ಬಗ್ಗೆ ಲವಲವಿಕೆ ಜತೆ ಸ್ವತಃ ವರ್ಮ ಅವರೇ ಮಾತನಾಡಿದ್ದಾರೆ.

Vijaya Karnataka 25 Aug 2018, 5:00 am
-ಹರೀಶ್ ಬಸವರಾಜ್
Vijaya Karnataka Web IRRA 1

ಕನ್ನಡದ ಧನಂಜಯ ನಾಯಕನಾಗಿ ನಟಿಸುತ್ತಿರುವ ದ್ವಿಭಾಷಾ ಚಿತ್ರ ಭೈರವಗೀತ ಚಿತ್ರಕ್ಕೆ ನಾಯಕಿಯಾಗಿರುವ ಇರಾ ಬಗ್ಗೆ ಹಿರಿಯ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಹೇಳಿರುವ ಮಾತುಗಳ ಬಗ್ಗೆ ಟಾಲಿವುಡ್ ಹಾಗೂ ಕನ್ನಡ ಚಿತ್ರರಂಗದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅವರು ಲವಲವಿಕೆ ಜತೆ ಮಾತನಾಡಿದ್ದಾರೆ.
ಮೊದಲ ಬಾರಿ ಆಕೆಯನ್ನು ನಾನು ನೋಡಿದಾಗ ನನ್ನನ್ನು ನಾನೇ ಮರೆತು ಹೋಗಿದ್ದೆ. ಭೈರವಗೀತ ಚಿತ್ರಕ್ಕೆ ಈಕೆಗಿಂತ ಪಕ್ಕಾ ಸರಿಹೊಂದುವ ಇನ್ನೊಬ್ಬ ನಟಿ ಸಿಗಲಾರಳು ಎಂದು ಆಗಲೇ ಅನಿಸಿಬಿಟ್ಟಿತು ಎಂದು ವರ್ಮ ತಿಳಿಸಿದ್ದಾರೆ.
ನಾವು ಈ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಲು ಆಡಿಷನ್ ಮಾಡಿದ್ದೆವು. ಮೊದಲ ನೋಟದಲ್ಲೇ ಇರಾ ಆಯ್ಕೆಯಾದರು. ಆಕೆಯ ಕಂಗಳಲ್ಲಿದ್ದ ಮುಗ್ಧತೆ ನನ್ನನ್ನು ಬಹುವಾಗಿ ಕಾಡಿತು. ರಗಡ್ ಕಥೆಗೆ ಮುಗ್ಧ ಕಂಗಳ ನಾಯಕಿ ಬೇಕಿತ್ತು. ಕಥೆ ಮುಳ್ಳಿನಂತೆ ಇದ್ದರೆ ನಾಯಕಿ ಗುಲಾಬಿ ರೀತಿ ಇರಬೇಕಾಗಿತ್ತು. ಈ ಪರಿಕಲ್ಪನೆಗೆ ಇರಾ ಸರಿಯಾಗಿ ಹೊಂದುತ್ತಾರೆ. ನನಗೆ ಇರಾ ಥೇಟ್ ಗುಲಾಬಿಯಂತೆ ಕಂಡಳು ಎನ್ನುತ್ತಾರೆ ಎಂದು ವರ್ಮ ಹೇಳಿದ್ದಾರೆ.
‘ಧನಂಜಯ ಇಲ್ಲಿ ಸಿಕ್ಕಾಪಟ್ಟೆ ರ್ ಆ್ಯಂಡ್ ಟ್ ಆಗಿ ಕಾಣಿಸಿಕೊಂಡರೆ, ಇರಾ ಅದಕ್ಕೆ ತದ್ವಿರುದ್ಧ ಪಾತ್ರದಲ್ಲಿ ನಟಿಸಿದ್ದಾರೆ. ಒಮ್ಮೆ ಸೆಟ್‌ನಲ್ಲಿ ಇವರಿಬ್ಬರೂ ನಟಿಸುತ್ತಿರುವಾಗ ನನ್ನನ್ನು ನಾನೇ ಮರೆತು ಹೋಗಿದ್ದೆ. ಅಷ್ಟು ಸುಂದರವಾಗಿತ್ತು ಈ ಜೋಡಿ’ ಎಂದಿದ್ದಾರೆ ವಮ.
ಈ ಚಿತ್ರವನ್ನು ಆರ್‌ಜಿವಿ ಅವರ ಸಹಾಯಕ ಸಿದ್ಧಾರ್ಥ ನಿರ್ದೇಶನ ಮಾಡುತ್ತಿದ್ದಾರೆ. ವರ್ಮ ಮಾರ್ಗದರ್ಶನ ಮಾಡುತ್ತಿದ್ದಾರೆ.
---
ನಾನು ಈವರೆಗೂ ಆಯ್ಕೆ ಮಾಡಿದ ಬೆಸ್ಟ್ ಜೋಡಿಗಳಲ್ಲಿ ಇರಾ- ಧನಂಜಯ ಕೂಡ ಒಂದು. ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿದೆ.
-ರಾಮ್‌ಗೋಪಾಲ್ ವರ್ಮ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌