ಆ್ಯಪ್ನಗರ

ದರ್ಶನ್‌ 'ಕುರುಕ್ಷೇತ್ರ'ದಲ್ಲಿ ಮಾಜಿ ಸಿಎಂ ಮಗ!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ'ಕ್ಕೆ ಭರದ ಸಿದ್ಧತೆ ನಡೆದಿದೆ.

ವಿಕ ಸುದ್ದಿಲೋಕ 21 Jul 2017, 11:13 am
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ'ಕ್ಕೆ ಭರದ ಸಿದ್ಧತೆ ನಡೆದಿದೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನುನಿರ್ದೇಶನ ಮಾಡಿದ್ದ ನಾಗಣ್ಣ,ಈ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ.
Vijaya Karnataka Web is nikhil kumar in kurukshetra movie
ದರ್ಶನ್‌ 'ಕುರುಕ್ಷೇತ್ರ'ದಲ್ಲಿ ಮಾಜಿ ಸಿಎಂ ಮಗ!


ಇನ್ನು ಈ ಚಿತ್ರಕ್ಕಾಗಿ ಕಲಾವಿದರ ಆಯ್ಕೆಯೂ ಜೋರಾಗಿಯೇ ಸಾಗುತ್ತಿದೆ. ದರ್ಶನ್‌ ದುರ್ಯೋಧನನಾಗಿ ಮಿಂಚಿದರೆ, ಬಾಲಿವುಡ್‌ ನಟ ವಿವೇಕ್‌ ಓಬೆರಾಯ್‌ ಕೃಷ್ಣನ ಪಾತ್ರ ನಿಭಾಯಿಸುವ ಸಾಧ್ಯತೆಗಳು ಇವೆ.

ಇನ್ನುಳಿದಂತೆ ಕ್ರೇಜಿಸ್ಟಾರ್‌ ರವಿಚಂದ್ರನ್ ಹಾಗೂ ಸಾಯಿಕುಮಾರ್‌ ಕೂಡ 'ಕುರುಕ್ಷೇತ್ರ'ದಲ್ಲಿ ಅಬ್ಬರಿಸಲಿದ್ದಾರೆ. ಕೆಲ ಮೂಲಗಳಿಂದ ದ್ರೌಪದಿ ಪಾತ್ರಕ್ಕಾಗಿ ನಯನತಾರಾ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾಹಿತಿಯೂ ದೊರೆತಿದೆ.

ಈ ನಡುವೆ ತಾಜಾ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಚಾಲೆಂಜಿಂಗ್‌ ಸ್ಟಾರ್‌ ಸಿನಿ ಕರಿಯರ್‌ನ ಮಹತ್ವದ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರ್‌ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರದಲ್ಲೂ ನಿಖಿಲ್‌, ಅಭಿಮನ್ಯುವಾಗಿ ಮಿಂಚಲಿದ್ದಾರೆ ಎನ್ನುವುದು ವಿಶೇಷ. ಆದರೆ ಈ ಕುರಿತು ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌