ಆ್ಯಪ್ನಗರ

ವಿದೇಶಕ್ಕೆ ಹಾರಲಿರುವ ರಾಣಾಘಾಟ್‌ನ ಲತಾ ಮಂಗೇಶ್ಕರ್ ರಾಣು ಮಂಡಲ್

ಸೋಷಿಯಲ್ ಮೀಡಿಯಾ ಸ್ಟಾರ್ ರಾಣು ಮಂಡಲ್‍ಗೆ ವಿದೇಶಕ್ಕೆ ಹಾರುವ ಭಾಗ್ಯ ಸಿಕ್ಕಿದೆ. ಪಾಸ್‍ಪೋರ್ಟ್ ಮಾಡಿಸಿಕೊಳ್ಳುವ ಕೆಲಸದಲ್ಲಿ ಈಗ ರಾಣು ಬಿಝಿಯಾಗಿದ್ದಾರೆ. ತಿಂಗಳ ಹಿಂದೆ ಅವರ ಬಳಿ ವೋಟರ್ ಐಡಿ ಸಹ ಇರಲಿಲ್ಲ.

Ei Samay 18 Sep 2019, 4:21 pm
ಸಾಮಾಜಿಕ ಮಾಧ್ಯಮಗಳಿಂದ ರಾತ್ರೋ ರಾತ್ರಿ ಬೆಳಕಿಗೆ ಬಂದ ಗಾಯಕಿ ರಾಣು ಮಂಡಲ್. ಕೋಲ್ಕೊತಾ ನಗರದ ಹೊರವಲಯದ ರಾಣಾಘಾಟ್‌ ರೈಲ್ವೆ ನಿಲ್ದಾಣದಲ್ಲಿ ಹಳೆಯ ಹಿಂದಿ ಚಿತ್ರಗೀತೆಗಳನ್ನು ಹಾಡುತ್ತಾ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವ ರಾಣು ಮಂಡಲ್ ಹೆಸರು ಎಲ್ಲರ ಬಾಯಲ್ಲೂ ನುಲಿದಾಡುತ್ತಿದೆ.
Vijaya Karnataka Web ranu-mandal


ರಾಣು ಮಂಡಲ್ ಪ್ರತಿಭೆಯನ್ನು ಕಂಡು ಗಾಯಕ ಹಿಮೇಶ್ ರೇಷ್ಮಿಯಾ ಈಗಾಗಲೆ ಅವರಿಗೆ ಅವಕಾಶವನ್ನೂ ನೀಡಿದ್ದಾರೆ. ಇದೀಗ ವಿದೇಶಕ್ಕೂ ಹಾರುವ ಭಾಗ್ಯ ಈ ಬಡ ಕೋಗಿಲೆಗೆ ಒಲಿದು ಬಂದಿದೆ. ತಿಂಗಳ ಹಿಂದೆ ಅವರ ಬಳಿ ವೋಟರ್ ಐಡಿಕಾರ್ಡ್ ಸಹ ಇರಲಿಲ್ಲ. ಈಗ ಪಾಸ್‌ಪೋರ್ಟ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ರೈಲಲ್ಲಿ ಹಾಡುತ್ತಿದ್ದ ರಾಣು ಸಾಮಾಜಿಕ ಜಾಲತಾಣಗಳ ಸ್ಟಾರ್‌

ತನ್ನ ಸಹಾಯಕರಾದ ಅತೀಂದ್ರ ಚಕ್ರವರ್ತಿ ಮತ್ತು ತಪನ್ ದಾಸ್ ಜತೆಗೆ ಪಾಸ್‍ಪೋರ್ಟ್ ಕಚೇರಿಗೆ ಆಗಮಿಸಿದ್ದಾರೆ. ಈ ಬಗ್ಗೆ ಅತೀಂದ್ರ ಮಾತನಾಡುತ್ತಾ, "ರಾಣು ಅವರ ದಾಖಲೆಗಳನ್ನು ನೀಡುವ ಸಲುವಾಗಿ ಪಾಸ್‍ಪೋರ್ಟ್ ಕಚೇರಿಗೆ ಹೊಗಿದ್ದೇವೆ. ಅನಿವಾಸಿ ಭಾರತೀಯರು ಅವರ ಹಾಡು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ನಮಗೆ ಹಲವಾರು ಕರೆಗಳು ಮತ್ತು ಮೆಸೇಜ್‌ಗಳು ಬರುತ್ತಿವೆ. ಹಾಗಾಗಿ ಆದಷ್ಟು ಬೇಗ ಪಾಸ್‍ಪೋರ್ಟ್‌ ಸಿಕ್ಕಿದರೆ ವಿದೇಶಕ್ಕೆ ಹಾರುವುದಾಗಿ" ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಾಣು ಮಂಡಲ್‌ ರೈಲ್ವೆ ನಿಲ್ದಾಣದಲ್ಲಿ 'ಏಕ್‌ ಪ್ಯಾರ್‌ ಕಾ ನಗಮಾ ಹೈ..' ಹಾಡು ಹೇಳುತ್ತಿದ್ದುದನ್ನು ಯಾರೋ ವಿಡಿಯೊ ಮಾಡಿ ಅದನ್ನು ಟ್ವಿಟರ್‌ ಹಾಗೂ ವ್ಯಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದು ಬಳಿಕ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿತು. ವಿಡಿಯೊವನ್ನು 50 ಲಕ್ಷ ಬಾರಿ ವೀಕ್ಷಿಸಲಾಗಿದ್ದು, 5000ಕ್ಕೂ ಹೆಚ್ಚು ಶೇರ್‌ ಆಗಿದೆ. ರೈಲಲ್ಲಿ ಹಾಡುತ್ತಿದ್ದ ರಾಣು ಮಂಡಲ್‌ಗೆ ಬಾಗಿಲು ತೆರೆದ ಬಾಲಿವುಡ್‌

ದಿನ ಬೆಳಗಾಗುವುದರೊಳಗೆ ಫೇಮಸ್‌ ಆಗಿರುವ ರಾಣು ಅವರಿಗೆ ತಮ್ಮ ಟಿವಿ ಟ್ಯಾಲೆಂಟ್‌ ಶೋಗಳಲ್ಲಿ ಪಾಲ್ಗೊಳ್ಳುವಂತೆ ಚಾನೆಲ್‌ಗಳು ದುಂಬಾಲು ಬಿದ್ದಿವೆ. ಅವರನ್ನು 'ಲತಾ ಮಂಗೇಶ್ಕರ್‌ ಆಫ್‌ ರಾಣಾಘಾಟ್‌' ಎಂದು ಈಗ ಕರೆಯಲಾಗುತ್ತಿದೆ.
View this post on Instagram Ranu mandal ,, ranaghat station singer Ranu mandal #ranu #ranumandal #ranaghat #ranumondal #Careerplusnews #ranudi #ranudi #ranuranaghat #ranusinger #Ranuvoice #ranu_didi #Ranu_di #Ranu_dii #ranudii #রানুদি A post shared by CareerPLUS News (@careerplusnews) on Aug 8, 2019 at 12:49pm PDT

ರಾಣು ಮಂಡಲ್ ಈಗಾಗಲೆ ಮುಂಬಯಿಗೆ ಎರಡು ಸಲ ಹೋಗಿಬಂದಿದ್ದಾರೆ. ಎರಡನೇ ಸಲ ಹೋದಾಗ ಅಲ್ಲಿ 16 ದಿನಗಳ ಕಾಲ ಉಳಿದುಕೊಂಡಿದ್ದರು. ಈಗವರು ತುಂಬಾ ಸ್ಮಾರ್ಟ್ ಆಗಿದ್ದು ಪಾಸ್‍ಪೋರ್ಟ್ ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ಕಾಣುತ್ತಿದ್ದರು. ಶೀಘ್ರದಲ್ಲೇ ರಾಣು ಮಂಡಲ್ ವಿದೇಶಕ್ಕೆ ಹಾರಲಿದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌