ಆ್ಯಪ್ನಗರ

ಸ್ಟಾರ್‌ ನಟರಿಗೆ ಜಗ್ಗೇಶ್‌ ಕಿವಿಮಾತು!

ನವರಸನಾಯಕ ಜಗ್ಗೇಶ್‌, ಒಗ್ಗಟ್ಟಿನ ಕನ್ನಡ ಚಿತ್ರರಂಗಕ್ಕೆ ಕರೆ ನೀಡಿದರು. ಜಗ್ಗೇಶ್‌ ಮಾತು ಕೇಳಿದ ಸಭಿಕರು ಚಪ್ಪಾಳೆ ಮತ್ತು ಶಿಳ್ಳೆಯ ಮೂಲಕ ಹರ್ಷ ವ್ಯಕ್ತಪಡಿಸಿದರು.

ಟೈಮ್ಸ್ ಆಫ್ ಇಂಡಿಯಾ 10 Jul 2017, 12:13 pm
ಇತ್ತೀಚೆಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಒಂದೆಡೆ ಸೇರುವುದೇ ಅಪರೂಪವಾಗಿದೆ. ಇನ್ನೊಂದೆಡೆ ಸ್ಟಾರ್‌ ಅಭಿಮಾನಿಗಳ ನಡುವಿನ ಹಗೆತನ ಗೊಂದಲಮಯ ವಾತಾವರಣದ ಸೃಷ್ಟಿಗೆ ಕಾರಣವಾಗುತ್ತಿರುವುದು ಕಣ್ಣಾರೆ ಕಂಡಿದ್ದೇವೆ.
Vijaya Karnataka Web jaggesh appeal for a united sandalwood
ಸ್ಟಾರ್‌ ನಟರಿಗೆ ಜಗ್ಗೇಶ್‌ ಕಿವಿಮಾತು!


ಆದರೆ ನಮ್ಮ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲವೆಂದು ಗೊತ್ತಾಗಿದ್ದು 'ರಾಜಕುಮಾರ' ಚಿತ್ರದ ನೂರು ದಿನಗಳ ಸಂಭ್ರಮದ ಕಾರ್ಯಕ್ರಮದಲ್ಲಿ. 'ರಾಜಕುಮಾರ'ನ ಶತಕದ ಸಂಭ್ರಮದಲ್ಲಿ ಕಿಚ್ಚ ಸುದೀಪ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಪಾಲ್ಗೊಂಡಿದ್ದು, ಸಿನಿರಸಿಕರಿಗೆ ತುಂಬ ಖುಷಿ ನೀಡಿತ್ತು. ಅಷ್ಟೇ ಅಲ್ಲದೆ ಸುದೀಪ್‌ ಮತ್ತು ಪುನೀತ್‌ ಒಂದೇ ವೇದಿಕೆಯಲ್ಲಿ ಹಾಡೊಂದಕ್ಕೆ ಸ್ಟೆಪ್‌ ಹಾಕಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿದ್ದಂತು ಸುಳ್ಳಲ್ಲ.

ಈ ವೇಳೆ ಮಾತನಾಡಿದ ನವರಸನಾಯಕ ಜಗ್ಗೇಶ್‌, ಒಗ್ಗಟ್ಟಿನ ಕನ್ನಡ ಚಿತ್ರರಂಗಕ್ಕೆ ಕರೆ ನೀಡಿದರು. ಜಗ್ಗೇಶ್‌ ಮಾತು ಕೇಳಿದ ಸಭಿಕರು ಚಪ್ಪಾಳೆ ಮತ್ತು ಶಿಳ್ಳೆಯ ಮೂಲಕ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್‌ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ಮೂಲಕ ಸ್ಟಾರ್‌ ನಟರಿಗೆ ಕಿವಿಮಾತನ್ನು ಹೇಳಿದರು ಜಗ್ಗೇಶ್‌.

ಅಣ್ಣಾವ್ರು ಯಾರೊಂದಿಗೂ ಯಾವತ್ತು ಭೇದ-ಭಾವ ತೋರಲಿಲ್ಲ. ಅದು ತಮ್ಮ ಸಹನಟರೇ ಆಗಿರಲಿ ಅಥವಾ ಸಣ್ಣ ಪೋಷಕ ಪಾತ್ರವನ್ನು ನಿಭಾಯಿಸುತ್ತಿರುವ ವ್ಯಕ್ತಿಯೇ ಆಗಲಿ, ಎಲ್ಲರನ್ನೂ ಒಂದೇ ತೆರನಾಗಿ ಕಾಣುತ್ತಿದ್ದರು. ಅವರ ಆದರ್ಶವನ್ನು ಇಂದಿನ ಎಲ್ಲ ಯುವ ನಟರು ಪಾಲಿಸಿದರೆ, ಕನ್ನಡ ಚಿತ್ರರಂಗ ಶಾಂತಿ ಹಾಗೂ ನೆಮ್ಮದಿಯಿಂದ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌