ಜಗ್ಗೇಶ್ ಮುಖ್ಯ ಭೂಮಿಕೆಯ ತೋತಾಪುರಿ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ. ಈ ಸಿನಿಮಾ ಬಿಡುಗಡೆಯ ಮುಂಚೆಯೇ ಮತ್ತೊಂದು ಹೊಸ ಸುದ್ದಿ ನೀಡಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್. ಎರಡು ಭಾಗಗಳಲ್ಲಿ ಈ ಚಿತ್ರ ಮೂಡಿ ಬರಲಿದೆಯಂತೆ. ಅದಕ್ಕಾಗಿಯೇ ಚಿತ್ರದ ಕೊನೆಯಲ್ಲಿ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಹೇಳಿದ್ದಾರಂತೆ.
'ಸಿನಿಮಾ ಶುರು ಮಾಡುವಾಗ ಇಂಥದ್ದೊಂದು ಯೋಚನೆ ಹೊಳೆದಿರಲಿಲ್ಲ. ಶೂಟಿಂಗ್ ಮಾಡುವಾಗ ಹೊಳೆದ ಐಡಿಯಾ ಇದಾಗಿದೆ. ಮೊದಲ ಭಾಗದಲ್ಲಿ ಮುಂದಿನ ಕಥೆಗೆ ಕುತೂಹಲ ಮೂಡುವಂಥ ಕೊಂಡಿಯೊಂದಿದೆ. ಅದು ಎರಡನೇ ಭಾಗದ ಚಿತ್ರಕ್ಕೆ ಸಾಥ್ ನೀಡಲಿದೆ' ಎಂದಿದ್ದಾರೆ ನಿರ್ದೇಶಕರು.
ಅದಿತಿ ಪ್ರಭುದೇವ್, ಸುಮನ್ ರಂಗನಾಥ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೀರ್ದೋಸೆ ಸಿನಿಮಾದ ನಂತರ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಒಂದಾಗಿರುವುದರಿಂದ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಮೂಡಿದೆ.
'ಸಿನಿಮಾ ಶುರು ಮಾಡುವಾಗ ಇಂಥದ್ದೊಂದು ಯೋಚನೆ ಹೊಳೆದಿರಲಿಲ್ಲ. ಶೂಟಿಂಗ್ ಮಾಡುವಾಗ ಹೊಳೆದ ಐಡಿಯಾ ಇದಾಗಿದೆ. ಮೊದಲ ಭಾಗದಲ್ಲಿ ಮುಂದಿನ ಕಥೆಗೆ ಕುತೂಹಲ ಮೂಡುವಂಥ ಕೊಂಡಿಯೊಂದಿದೆ. ಅದು ಎರಡನೇ ಭಾಗದ ಚಿತ್ರಕ್ಕೆ ಸಾಥ್ ನೀಡಲಿದೆ' ಎಂದಿದ್ದಾರೆ ನಿರ್ದೇಶಕರು.
ಅದಿತಿ ಪ್ರಭುದೇವ್, ಸುಮನ್ ರಂಗನಾಥ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೀರ್ದೋಸೆ ಸಿನಿಮಾದ ನಂತರ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಒಂದಾಗಿರುವುದರಿಂದ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಮೂಡಿದೆ.