ಆ್ಯಪ್ನಗರ

ನವರಸ ನಾಯಕ ಜಗ್ಗೇಶ್ 'ತೋತಾಪುರಿ' ಫಸ್ಟ್ ಲುಕ್

ಈ ಚಿತ್ರದಲ್ಲಿ ಜಗ್ಗೇಶ್ ಕೃಷಿಕರಾಗಿ, ಟೈಲರ್ ಆಗಿ ಕಾಣಿಸುತ್ತಿದ್ದಾರೆ. ಜಗ್ಗೇಶ್ ಸಿನಿಮಾ ಎಂದರೆ ಕಾಮಿಡಿಗೆ ಬರವಿರಲ್ಲ. ಈ ಸಿನಿಮಾ ಸಹ ಅದಕ್ಕೆ ಹೊರತಲ್ಲ. ಜನವರಿಯಲ್ಲಿ ತೋತಾಪುರಿ ಚಿತ್ರತಂಡಕ್ಕೆ ಮದ್ರಾಸ್ ಐ ಅಟ್ಯಾಕ್ ಆದ ಕಾರಣ ಚಿತ್ರೀಕರಣ ಮುಂದಕ್ಕೆ ಹೋಗಿತ್ತು.

TIMESOFINDIA.COM 27 Feb 2019, 8:52 pm
ಮೈಸೂರಿನಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ನಮ್ಮ ಕ್ಯಾಮೆರಾಮೆನ್‌ಗೆ ಈ ಚಿತ್ರದ ದೃಶ್ಯವೊಂದು ಸಿಕ್ಕಿದೆ. ವೀಣಾ ಸುಂದರ್ ಬೈಕ್ ಓಡಿಸುತ್ತಿದ್ದರೆ ಹಿಂದೆ ಜಗ್ಗೇಶ್ ಕುಳಿತಿರುವ ದೃಶ್ಯ ಸಖತ್ ಮಜವಾಗಿದೆ.
Vijaya Karnataka Web totapuri


ಈ ಚಿತ್ರದಲ್ಲಿ ಜಗ್ಗೇಶ್ ಕೃಷಿಕರಾಗಿ, ಟೈಲರ್ ಆಗಿ ಕಾಣಿಸುತ್ತಿದ್ದಾರೆ. ಜಗ್ಗೇಶ್ ಸಿನಿಮಾ ಎಂದರೆ ಕಾಮಿಡಿಗೆ ಬರವಿರಲ್ಲ. ಈ ಸಿನಿಮಾ ಸಹ ಅದಕ್ಕೆ ಹೊರತಲ್ಲ. ಜನವರಿಯಲ್ಲಿ ತೋತಾಪುರಿ ಚಿತ್ರತಂಡಕ್ಕೆ ಮದ್ರಾಸ್ ಐ ಅಟ್ಯಾಕ್ ಆದ ಕಾರಣ ಚಿತ್ರೀಕರಣ ಮುಂದಕ್ಕೆ ಹೋಗಿತ್ತು.

ಇಡೀ ಚಿತ್ರತಂಡದ ಮೇಲೆ ಮದ್ರಾಸ್‌ ಐ ಅಟ್ಯಾಕ್‌ ಮಾಡಿರುವುದರಿಂದ ಎಲ್ಲರ ಕಣ್ಣು ಕೆಂಪಗಾಗಿತ್ತು. ಮೈಸೂರಿನಲ್ಲಿ ಚಿತ್ರೀಕರಣ ನಡೆಯುವಾಗ ನಿರ್ದೇಶಕ ವಿಜಯ್‌ ಪ್ರಸಾದ್‌ ಮೊದಲು ಇದಕ್ಕೆ ತುತ್ತಾದರು. ನಂತರ ಒಬ್ಬರಿಂದೊಬ್ಬರಿಗೆ ಹರಡಿದ ಮದ್ರಾಸ್‌ ಐ, ನಟರೂ ಸೇರಿದಂತೆ, ತಂಡದಲ್ಲಿದ್ದ 30 ಮಂದಿಯ ಕಣ್ಣು ಕೆಂಪಗೆ ಮಾಡಿದೆ. ಇದರಿಂದ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದಿದೆ.

ತಮ್ಮ ಸಿನಿಮಾಗಳ ಟೈಟಲ್‌ ಮೂಲಕವೇ ಸದ್ದು ಮಾಡುವ ನಿರ್ದೇಶಕ ವಿಜಯ್‌ ಪ್ರಸಾದ್‌‌ರ ತೋತಾಪುರಿ ಬೆಂಗಳೂರಿನ ಬಲ್ಲಾಳ ಸರ್ಕಲ್‌, ಮೈಸೂರು- ಬೆಂಗಳೂರು ರಸ್ತೆಯಲ್ಲಿ, ಮಹಿಳಾ ಸಮಾಜ, ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನೀರ್‌ದೋಸೆ ಚಿತ್ರದ ನಂತರ ಮತ್ತೆ ಜಗ್ಗೇಶ್‌ ಜತೆ ಸಿನಿಮಾ ಮಾಡುತ್ತಿರುವ ನಿರ್ದೇಶಕರು.

ಹಾಸ್ಯದ ಮೂಲಕವೇ ಉತ್ತಮವಾದ ಸಂದೇಶವನ್ನು ನನ್ನ ಎಲ್ಲ ಚಿತ್ರಗಳೂ ನೀಡಿವೆ. ಹೊಸ ಬಗೆಯ ನಿರೂಪಣೆ, ತೀರಾ ಹತ್ತಿರ ಆಗುವಂಥ ಡೈಲಾಗ್‌, ಮೇಕಿಂಗ್‌ ಎಲ್ಲವೂ ಇರುವಂಥ ಸಿನಿಮಾ ತೋತಾಪುರಿ. ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬರುತ್ತಿದ್ದರೂ, ಪಟ್ಟಣದ ಜನರಿಗೂ ಈ ಸಿನಿಮಾ ಇಷ್ಟವಾಗಲಿದೆ' ಎನ್ನುತ್ತಾರೆ ನಿರ್ದೇಶಕರು.

ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌ ಸೇರಿದಂತೆ ಹಲವು ಕಲಾವಿದರ ಸಂಗಮವೇ ಸಿನಿಮಾದಲ್ಲಿದೆ. ಡಾಲಿ ಧನಂಜಯ್‌ ವಿಭಿನ್ನ ಪಾತ್ರ ಮಾಡಿದ್ದಾರೆ. ಈಗ ಅವರ ಭಾಗದ ಶೂಟಿಂಗ್‌ ಕೂಡ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌