ಆ್ಯಪ್ನಗರ

ದರ್ಶನ್ 'ಯಜಮಾನ'ದಲ್ಲಿ ಜಲ್ಲಿಕಟ್ಟು ಗೂಳಿಗಳ ದರ್ಶನ

ಒಂದು ದಿನ ಒಂದು ಗೂಳಿ ಅದು ಹೇಗೋ ಹಗ್ಗದಿಂದ ತಪ್ಪಿಸಿಕೊಂಡು ನಿಯಂತ್ರಣಕ್ಕೆ ಬಾರದೇ ಅಲ್ಲಿದ್ದವರನ್ನೆಲ್ಲಾ ಅಟ್ಟಾಡಿಸಿಕೊಂಡು ಓಡತೊಡಗಿತ್ತು. ಅದನ್ನು ಹೇಗೋ ನಿಯಂತ್ರಣಕ್ಕೆ ತಂದು ಶೂಟಿಂಗ್ ಮಾಡಲಾಯಿತು. ಸನ್ನಿವೇಶ ರಿಯಲ್ ಆಗಿರಲಿ ಎಂದು ಗ್ರಾಫಿಕ್ಸ್ ಬಳಸದೇ ಗೂಳಿಗಳನ್ನು ಶೂಟ್ ಮಾಡಲಾಗಿದೆ.

Vijaya Karnataka Web 21 Feb 2019, 6:26 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದಲ್ಲಿ ಮಾರ್ಚ್ 01, 2019ರಂದು ರಿಲೀಸ್ ಆಗುತ್ತಿರುವ 'ಯಜಮಾನ' ಚಿತ್ರದಲ್ಲಿ ಹತ್ತು ಗೂಳಿಗಳನ್ನು ಬಳಸಲಾಗಿದೆ. ಈ ಗೂಳಿಗಳು ಸಾಮಾನ್ಯ ಗೂಳಿಗಳಲ್ಲ. ಬದಲಿಗೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಗೂಳಿಗಳಾಗಿದ್ದು ಅವುಗಳನ್ನು ನಿಭಾಯಿಸುವುದು ಹಾಗೂ ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವೇನಲ್ಲ. ಅದನ್ನು ಯಜಮಾನ ಚಿತ್ರತಂಡ ಅತ್ಯಂತ ರೋಚಕವಾಗಿ ಮಾಡಿದೆ ಎನ್ನಲಾಗಿದೆ.
Vijaya Karnataka Web darshan09


ಆ ಹತ್ತು ಎತ್ತುಗಳನ್ನು ತಮಿಳುನಾಡಿನ ದಿಂಡುಕಲ್ ಪ್ರದೇಶದಿಂದ ಒಂದೊಂದು ಲಾರಿಯಲ್ಲಿ ಎರಡೆರಡು ಎತ್ತುಗಳಂತೆ ಲಾರಿಗಳಲ್ಲಿ ತುಂಬಿಕೊಂಡು ಶೂಟಿಂಗ್ ಸ್ಥಳಕ್ಕೆ ತರಬೇಕಿತ್ತು. ಒಂದು ದಿನಕ್ಕೆ 10 ಸಾವಿರ ರೂ. ಕೊಟ್ಟು 10 ಎತ್ತಗಳನ್ನು ದಿನಕ್ಕೆ 1 ಲಕ್ಷ ಬಾಡಿಗೆ ತೆತ್ತು ತಂದಿದ್ದಾರೆ. ಎತ್ತುಗಳ ಜೊತೆ ಅದರ ನಿರ್ವಹಣೆಗೆ 30 ಜನರು ಕೂಡ ಬಂದಿದ್ದಾರೆ. ಅದಕ್ಕೆ ಸಂಬಂಧಪಟ್ಟ ಪರ್ಮಿಷನ್ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಕಥೆಗೆ ತಕ್ಕಂತೆ ಆ ಗೂಳಿಗಳನ್ನು ಬಳಸಿಕೊಳ್ಳಲಾಗಿದೆಯಂತೆ.

ಒಂದು ದಿನ ಒಂದು ಗೂಳಿ ಅದು ಹೇಗೋ ಹಗ್ಗದಿಂದ ತಪ್ಪಿಸಿಕೊಂಡು ನಿಯಂತ್ರಣಕ್ಕೆ ಬಾರದೇ ಅಲ್ಲಿದ್ದವರನ್ನೆಲ್ಲಾ ಅಟ್ಟಾಡಿಸಿಕೊಂಡು ಓಡತೊಡಗಿತ್ತು. ಅದನ್ನು ಹೇಗೋ ನಿಯಂತ್ರಣಕ್ಕೆ ತಂದು ಶೂಟಿಂಗ್ ಮಾಡಲಾಯಿತು. ಸನ್ನಿವೇಶ ರಿಯಲ್ ಆಗಿರಲಿ ಎಂದು ಗ್ರಾಫಿಕ್ಸ್ ಬಳಸದೇ ಗೂಳಿಗಳನ್ನು ಶೂಟ್ ಮಾಡಲಾಗಿದೆ. ಅದಕ್ಕೂ ಮೊದಲು, ಒಂದು ದಿನ ಚಿತ್ರತಂಡವೇ ಹೋಗಿ ಶೂಟ್ ಮಾಡಿಕೊಂಡು ಬರುವುದೆಂದು ನಿರ್ಧರಿಸಲಾಗಿತ್ತಂತೆ. ಆದರೆ, ನಿರ್ಮಾಪಕಿ ಶೈಲಜಾ ನಾಗ್ ಅವರ ದಿಟ್ಟ ನಿರ್ಧಾರದ ಮೂಲಕ ಎತ್ತುಗಳನ್ನೇ ಕರೆತಂದು ಶೂಟಿಂಗ್ ಮಾಡಲಾಯಿತು ಎಂದು ಚಿತ್ರತಂಡ ತಿಳಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಯಜಮಾನ' ಚಿತ್ರದಲ್ಲಿ ಗೂಳಿಗಳ ಪಾತ್ರ ಅತ್ಯಂಯ ಮಹತ್ವದ್ದು ಎನ್ನಲಾಗಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕರಾದ ಪಿ ಕುಮಾರ್ ಹಾಗೂ ವಿ ಹರಿಕೃಷ್ಣ ಹೇಳಿದ್ದಾರೆ. ಸ್ವತಃ ದರ್ಶನ್ ಪ್ರಾಣಿಪ್ರಿಯರಾಗಿದ್ದು ಪ್ರಾಣಿಗಳನ್ನು ಸಾಕಿ ತಾವೇ ಆರೈಕೆ ಮಾಡುತ್ತಿದ್ದಾರೆ. ಬಹಳಷ್ಟು ಪ್ರಾಣಿಗಳನ್ನು ದಶ್ನ್ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ ಎಂಬುದು ಸ್ಯಾಂಡಲ್‌ವುಡ್ ಸಿನಿಪ್ರಿಯರಿಗೆ ಹೊಸ ವಿಷಯವೇನಲ್ಲ. ಮೊದಲ ಬಾರಿಗೆ ಚಿತ್ರದ ನಿರ್ದೇಶನಕ್ಕೆ ಇಳಿದಿರುವ ವಿ ಹರಿಕೃಷ್ಣ ಅವರು ಯಜಮಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ನಿರ್ದೇಶಕ ಪಟ್ಟವನ್ನು ಹೊತ್ತುಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌