* ಪದ್ಮಾ ಶಿವಮೊಗ್ಗ
ನಾಗೇಂದ್ರ ಅರಸ್ ನಿರ್ದೇಶನದ ಚಿತ್ರ ಮೇ 1st. ಆ ಕರಾಳ ರಾತ್ರಿ ಚಿತ್ರದ ನಂತರ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಜೆಕೆ (ಜಯರಾಂ ಕಾರ್ತೀಕ್) ಮಾಸ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ತಾವೇ ಬರೆದ ಕಥೆಯನ್ನು ತೆರೆಗೆ ತರುತ್ತಿದ್ದಾರೆ.
* ಮೇ 1st ಯಾವ ಜಾನರ್ ಸಿನಿಮಾ?
ಹಾರರ್ ಥ್ರಿಲ್ಲರ್ ಚಿತ್ರ ಇದು. ಈ ಚಿತ್ರದ ಕಥೆ ಬರೆಯೋದರ ಜತೆ ಹಲವು ವಿಭಾಗಗಳ ಜವಾಬ್ದಾರಿ ನಾನು ತೆಗೆದುಕೊಂಡಿದ್ದೇನೆ. ಚಿತ್ರಕಥೆ, ಕಾಸ್ಟ್ಯೂಮ್, ಕಲಾ ವಿಭಾಗ ಎಲ್ಲವನ್ನೂ ನಾನೇ ಡಿಸೈನ್ ಮಾಡಿದ್ದೇನೆ. ಶೂಟಿಂಗ್ಗಾಗಿ ಖಾಲಿ ಮನೆಯನ್ನು ನಾನೇ ಸಿದ್ಧಪಡಿಸಿದೆ. ಸಹ ನಿರ್ದೇಶನವನ್ನೂ ಮಾಡಿದ್ದೇನೆ.
* ಈ ಚಿತ್ರ ನಿಮಗೆ ಎಷ್ಟು ಮುಖ್ಯ?
ಬಹಳ ಮುಖ್ಯ. ಯಾಕೆಂದರೆ, ಈ ಚಿತ್ರದ ಕಥೆ ಮತ್ತು ನನ್ನ ಪಾತ್ರ ಸೃಷ್ಟಿಸಿದವನು ನಾನೇ. ಅದರ ಜತೆ ನಿರ್ಮಾಣವನ್ನೂ ಮಾಡಿದ್ದೇನೆ. ಇದು ನನ್ನ ಡ್ರೀಮ್ ಪ್ರಾಜೆಕ್ಟ್. ನನ್ನ ಕನಸಿನ ಕೂಸು. ಹಾಗಾಗಿ ಈ ಸಿನಿಮಾ ನನ್ನ ಜೀವನದಲ್ಲಿ ಬಹಳ ಮುಖ್ಯವಾಗಿದೆ.
* ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ನಟನೊಬ್ಬನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹಾಗಾಗಿ ಸಿನಿಮಾ ಬದುಕು ಚಿತ್ರದಲ್ಲಿದೆ. ನಟ ಚಿತ್ರೀಕರಣಕ್ಕೆ ಹೋದಾಗ ಏನಾಗುತ್ತದೆ ಎನ್ನುವುದು ಚಿತ್ರದಲ್ಲಿದೆ. ಜನರಿಗೆ ಮನರಂಜನೆ ನೀಡುವ ದೃಷ್ಟಿಯಿಂದ ಹಲವು ದೃಶ್ಯಗಳಿವೆ. ಚಿತ್ರೀಕರಣ ಹೇಗಾಗುತ್ತೆ ಅನ್ನೋದನ್ನೂ ತೋರಿಸಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮೂರು ಡುಯೆಟ್ ಸಾಂಗ್ ಇವೆ. ರಾವಣ ಹಾಡು ಈಗಾಗಲೇ ಹಿಟ್ ಆಗಿದೆ. ಮಾಸ್ ಚಿತ್ರ ಎನ್ನೋಕೆ ಈ ಹಾಡು ಸಾಕ್ಷಿ. ನಮ್ಮ ಅಭಿಮಾನಿಗಳು ಮಾಸ್ ಹೀರೊ ಆಗಿ ನಟಿಸಿ ಎನ್ನುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಬರೆದಿದ್ದೇನೆ. ಆ್ಯಕ್ಷನ್ ಇದೆ. ಎಲ್ಲಕ್ಕಿಂತ ಕ್ಲೈಮಾಕ್ಸ್ ಜನರಿಗೆ ಬಹಳ ಇಷ್ಟವಾಗುತ್ತೆ ಎಂಬ ವಿಶ್ವಾಸ ಇದೆ.
* ಚಿತ್ರದಲ್ಲಿ ದೆವ್ವ ಇದೆಯಾ?
ಇದೆ. ಆದರೆ, ಅದು ತೊಂದರೆ ಕೊಡುವ ದೆವ್ವವಲ್ಲ. ಜನರು ದೆವ್ವವನ್ನು ನೋಡಿರದಿದ್ದರೂ ಅದರ ಬಗ್ಗೆ ಒಂದು ಭಯ ಸದಾ ಮನಸ್ಸಿನಲ್ಲಿ ಇರುತ್ತೆ. ಇದನ್ನು ಇಟ್ಟುಕೊಂಡು ಸ್ಕ್ರಿಪ್ಟ್ ಬರೆದಿದ್ದೇನೆ.
* ನಿಮಗೆ ದೆವ್ವದಲ್ಲಿ ನಂಬಿಕೆ ಇದೆಯಾ?
ಇಲ್ಲ. ನನಗೆ ದೆವ್ವದಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಇಲ್ಲಿವರೆಗೆ ನನಗೆ ಅದರ ಅನುಭವ ಆಗಿಲ್ಲ. ಕೇಳಿದ್ದೇನೆ ಅಷ್ಟೆ. ಚಿತ್ರದಲ್ಲಿ ಇದರ ಬಗ್ಗೆ ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದೇವೆ. ಒಬ್ಬರೇ ಇದ್ದಾಗ ಯಾರೋ ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಸುತ್ತ ಕಥೆ ಹೆಣೆದಿದ್ದೇನೆ.
* ಮುಂದೆ ನೀವೇ ನಿರ್ದೇಶನ ಮಾಡಬೇಕೆಂದಿದ್ದೀರಾ?
ನಿರ್ದೇಶನ ಮಾಡೋಕೆ ಬಹಳ ಅನುಭವ ಬೇಕು. ಅವನೇ ಅಲ್ಟಿಮೇಟ್. ನಾನಿನ್ನೂ ಕಲಿಯುವುದು ಬಹಳ ಇದೆ. ಯಾವಾಗ ನಿರ್ದೇಶನ ಮಾಡ್ತೀನಿ ಗೊತ್ತಿಲ್ಲ. ಅದಕ್ಕೂ ಮೊದಲು ಸಿನಿಮಾಗೆ ಕಥೆ ಬರೆಯೋಣ ಎಂದುಕೊಂಡಿದ್ದೇನೆ. ಇನ್ನೊಂದು ಸಿನಿಮಾಗೆ ಬರೆಯುತ್ತಿದ್ದೇನೆ.
ನಾಗೇಂದ್ರ ಅರಸ್ ನಿರ್ದೇಶನದ ಚಿತ್ರ ಮೇ 1st. ಆ ಕರಾಳ ರಾತ್ರಿ ಚಿತ್ರದ ನಂತರ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಜೆಕೆ (ಜಯರಾಂ ಕಾರ್ತೀಕ್) ಮಾಸ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ತಾವೇ ಬರೆದ ಕಥೆಯನ್ನು ತೆರೆಗೆ ತರುತ್ತಿದ್ದಾರೆ.
* ಮೇ 1st ಯಾವ ಜಾನರ್ ಸಿನಿಮಾ?
ಹಾರರ್ ಥ್ರಿಲ್ಲರ್ ಚಿತ್ರ ಇದು. ಈ ಚಿತ್ರದ ಕಥೆ ಬರೆಯೋದರ ಜತೆ ಹಲವು ವಿಭಾಗಗಳ ಜವಾಬ್ದಾರಿ ನಾನು ತೆಗೆದುಕೊಂಡಿದ್ದೇನೆ. ಚಿತ್ರಕಥೆ, ಕಾಸ್ಟ್ಯೂಮ್, ಕಲಾ ವಿಭಾಗ ಎಲ್ಲವನ್ನೂ ನಾನೇ ಡಿಸೈನ್ ಮಾಡಿದ್ದೇನೆ. ಶೂಟಿಂಗ್ಗಾಗಿ ಖಾಲಿ ಮನೆಯನ್ನು ನಾನೇ ಸಿದ್ಧಪಡಿಸಿದೆ. ಸಹ ನಿರ್ದೇಶನವನ್ನೂ ಮಾಡಿದ್ದೇನೆ.
* ಈ ಚಿತ್ರ ನಿಮಗೆ ಎಷ್ಟು ಮುಖ್ಯ?
ಬಹಳ ಮುಖ್ಯ. ಯಾಕೆಂದರೆ, ಈ ಚಿತ್ರದ ಕಥೆ ಮತ್ತು ನನ್ನ ಪಾತ್ರ ಸೃಷ್ಟಿಸಿದವನು ನಾನೇ. ಅದರ ಜತೆ ನಿರ್ಮಾಣವನ್ನೂ ಮಾಡಿದ್ದೇನೆ. ಇದು ನನ್ನ ಡ್ರೀಮ್ ಪ್ರಾಜೆಕ್ಟ್. ನನ್ನ ಕನಸಿನ ಕೂಸು. ಹಾಗಾಗಿ ಈ ಸಿನಿಮಾ ನನ್ನ ಜೀವನದಲ್ಲಿ ಬಹಳ ಮುಖ್ಯವಾಗಿದೆ.
* ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ನಟನೊಬ್ಬನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹಾಗಾಗಿ ಸಿನಿಮಾ ಬದುಕು ಚಿತ್ರದಲ್ಲಿದೆ. ನಟ ಚಿತ್ರೀಕರಣಕ್ಕೆ ಹೋದಾಗ ಏನಾಗುತ್ತದೆ ಎನ್ನುವುದು ಚಿತ್ರದಲ್ಲಿದೆ. ಜನರಿಗೆ ಮನರಂಜನೆ ನೀಡುವ ದೃಷ್ಟಿಯಿಂದ ಹಲವು ದೃಶ್ಯಗಳಿವೆ. ಚಿತ್ರೀಕರಣ ಹೇಗಾಗುತ್ತೆ ಅನ್ನೋದನ್ನೂ ತೋರಿಸಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮೂರು ಡುಯೆಟ್ ಸಾಂಗ್ ಇವೆ. ರಾವಣ ಹಾಡು ಈಗಾಗಲೇ ಹಿಟ್ ಆಗಿದೆ. ಮಾಸ್ ಚಿತ್ರ ಎನ್ನೋಕೆ ಈ ಹಾಡು ಸಾಕ್ಷಿ. ನಮ್ಮ ಅಭಿಮಾನಿಗಳು ಮಾಸ್ ಹೀರೊ ಆಗಿ ನಟಿಸಿ ಎನ್ನುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಬರೆದಿದ್ದೇನೆ. ಆ್ಯಕ್ಷನ್ ಇದೆ. ಎಲ್ಲಕ್ಕಿಂತ ಕ್ಲೈಮಾಕ್ಸ್ ಜನರಿಗೆ ಬಹಳ ಇಷ್ಟವಾಗುತ್ತೆ ಎಂಬ ವಿಶ್ವಾಸ ಇದೆ.
* ಚಿತ್ರದಲ್ಲಿ ದೆವ್ವ ಇದೆಯಾ?
ಇದೆ. ಆದರೆ, ಅದು ತೊಂದರೆ ಕೊಡುವ ದೆವ್ವವಲ್ಲ. ಜನರು ದೆವ್ವವನ್ನು ನೋಡಿರದಿದ್ದರೂ ಅದರ ಬಗ್ಗೆ ಒಂದು ಭಯ ಸದಾ ಮನಸ್ಸಿನಲ್ಲಿ ಇರುತ್ತೆ. ಇದನ್ನು ಇಟ್ಟುಕೊಂಡು ಸ್ಕ್ರಿಪ್ಟ್ ಬರೆದಿದ್ದೇನೆ.
* ನಿಮಗೆ ದೆವ್ವದಲ್ಲಿ ನಂಬಿಕೆ ಇದೆಯಾ?
ಇಲ್ಲ. ನನಗೆ ದೆವ್ವದಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಇಲ್ಲಿವರೆಗೆ ನನಗೆ ಅದರ ಅನುಭವ ಆಗಿಲ್ಲ. ಕೇಳಿದ್ದೇನೆ ಅಷ್ಟೆ. ಚಿತ್ರದಲ್ಲಿ ಇದರ ಬಗ್ಗೆ ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದೇವೆ. ಒಬ್ಬರೇ ಇದ್ದಾಗ ಯಾರೋ ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಸುತ್ತ ಕಥೆ ಹೆಣೆದಿದ್ದೇನೆ.
* ಮುಂದೆ ನೀವೇ ನಿರ್ದೇಶನ ಮಾಡಬೇಕೆಂದಿದ್ದೀರಾ?
ನಿರ್ದೇಶನ ಮಾಡೋಕೆ ಬಹಳ ಅನುಭವ ಬೇಕು. ಅವನೇ ಅಲ್ಟಿಮೇಟ್. ನಾನಿನ್ನೂ ಕಲಿಯುವುದು ಬಹಳ ಇದೆ. ಯಾವಾಗ ನಿರ್ದೇಶನ ಮಾಡ್ತೀನಿ ಗೊತ್ತಿಲ್ಲ. ಅದಕ್ಕೂ ಮೊದಲು ಸಿನಿಮಾಗೆ ಕಥೆ ಬರೆಯೋಣ ಎಂದುಕೊಂಡಿದ್ದೇನೆ. ಇನ್ನೊಂದು ಸಿನಿಮಾಗೆ ಬರೆಯುತ್ತಿದ್ದೇನೆ.
ಸಿನಿಮಾ ಚುಂಬಾ ಚೆನ್ನಾಗಿ ಬಂದಿದೆ. ತುಂಬಾ ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಅಭಿಮಾನಿಗಳಿಗೆ ಕಿಂಚಿತ್ತೂ ನಿರಾಶೆ ಆಗುವುದಿಲ್ಲ.