ಆ್ಯಪ್ನಗರ

ಥ್ರಿಲ್ಲರ್‌ಗೆ ಕೈಹಾಕಿದ ಜಯತೀರ್ಥ

ಜಯತೀರ್ಥ ನಿರ್ದೇಶನದ ಬ್ಯೂಟಿಫುಲ್‌ ಮನಸುಗಳು ಚಿತ್ರದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದ ಸ್ವಾತಿ ಇದೀಗ ವೆನಿಲಾ ಸಿನಿಮಾದ ...

Vijaya Karnataka Web 11 May 2017, 7:00 am

*ಪದ್ಮಾ ಶಿವಮೊಗ್ಗ

ಜಯತೀರ್ಥ ನಿರ್ದೇಶನದ ಬ್ಯೂಟಿಫುಲ್‌ ಮನಸುಗಳು ಚಿತ್ರದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದ ಸ್ವಾತಿ ಇದೀಗ ವೆನಿಲಾ ಸಿನಿಮಾದ ನಾಯಕಿ. ವಿಶೇಷವೆಂದರೆ ಜಯತೀರ್ಥ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಬ್ಯೂಟಿಫುಲ್‌ ಮನಸುಗಳು ಚಿತ್ರದಲ್ಲಿ ಸ್ವಾತಿ ನಟಿಸುತ್ತಿರುವಾಗಲೇ, ಅವರೇ ತಮ್ಮ ಮುಂದಿನ ಸಿನಿಮಾದ ನಾಯಕಿ ಎಂದು ನಿರ್ದೇಶಕ ನಿರ್ಧರಿಸಿಬಿಟ್ಟಿದ್ದರಂತೆ. ಅದರಂತೆ ಈಗ ವೆನಿಲಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮರ್ಡರ್‌ ಮತ್ತು ಮಿಸ್ಟ್ರಿ ಕತೆಯನ್ನು ಹೆಣೆದಿರುವ ಜಯತೀರ್ಥ, ಬ್ಯೂಟಿಫುಲ್‌ ಮನಸುಗಳು ರಿಲೀಸ್‌ ಆಗುತ್ತಿದ್ದಂತೆ ವೆನಿಲಾ ಚಿತ್ರದ ಕೆಲಸ ಪ್ರಾರಂಭಿಸಿದ್ದರು.

ನಾಯಕನ ಪಾತ್ರಕ್ಕೆ ಹೊಸ ಹುಡುಗನನ್ನು ಕರೆತಂದಿದ್ದು, ಅವಿನಾಶ್‌ ಚಿತ್ರದ ಹೀರೋ. 'ಈ ಸಿನಿಮಾದಲ್ಲಿ ಮರ್ಡರ್‌ ಕತೆ ಹೇಳುವುದರ ಜತೆ ಸಾಮಾಜಿಕ ಕಳಕಳಿಯನ್ನೂ ತೋರಲಿದ್ದೇವೆ' ಎನ್ನುವುದು ಜಯತೀರ್ಥ ಮಾತು.

ಇದರಲ್ಲಿ ಬಿಗ್‌ ಬಾಸ್‌ ಷೋನಲ್ಲಿದ್ದ ರೆಹಮಾನ್‌ ಮತ್ತು ರವಿಶಂಕರ್‌ ಗೌಡ ಕೂಡಾ ನಟಿಸಲಿದ್ದಾರೆ. ರವಿಶಂಕರ್‌ ಗೌಡ ಅವರದ್ದು ಖಡಕ್‌ ಪೊಲೀಸ್‌ ಆಫೀಸರ್‌ ಪಾತ್ರ. ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್‌ನ ಚಿತ್ರೀಕರಣವನ್ನು ಉಡುಪಿ ಸುತ್ತಮುತ್ತ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌