* ಪದ್ಮಿನಿ ಜೈನ್ ಎಸ್.
ವಿಶ್ವಾದ್ಯಂತ ‘ಕಬಾಲಿ’ ಹವಾ ಜೋರಾಗಿದೆ. ಈ ಚಿತ್ರದ ಬಗ್ಗೆ ನೂರಾರು ಜೋಕ್ಸ್, ಬಿಲ್ಡ್ ಅಪ್ ಸ್ಟೇಟಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ಯಾಂಡಲ್ವುಡ್ ಸಿಲೆಬ್ರಿಟಿಗಳು ಕೂಡ ಈ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ಕೆಲವರು ಈಗಾಗಲೇ ಸಿನಿಮಾ ನೋಡಿದ್ರೆ ಇನ್ನೂ ಕೆಲವರ ವಾರಾಂತ್ಯದ ಪ್ರೋಗ್ರಾಮ್ ಲಿಸ್ಟ್ನಲ್ಲಿ ಕಬಾಲಿ ಇದೆ. ಯಾರ್ಯಾರು ಕಬಾಲಿ ನೋಡಿದ್ರು, ಚಿತ್ರವನ್ನು ಎಷ್ಟು ಎಂಜಾಯ್ ಮಾಡಿದ್ರು, ಚಿತ್ರ ನೋಡಿ ಹೇಗನಿಸ್ತು ಎಂದು ಕೇಳುವ ಕಾತರವೂ ನಮಗಿತ್ತು.
ನಟ ಸುಮಂತ್ ಶೈಲೇಂದ್ರ ಮೊದಲ ದಿನವೇ ಕಬಾಲಿ ನೋಡಿದ ಖುಷಿಯಲ್ಲಿದ್ದಾರೆ. ‘ನಾನು ಮೈಸೂರು ರೋಡ್ ಬಳಿ ಶೂಟಿಂಗ್ನಲ್ಲಿ ಇದ್ದೆ. ಅದನ್ನು ಮುಗಿಸಿ ಅಲ್ಲಿಂದ ಮನೆಗೆ ಹೋಗುವ ದಾರಿಯಲ್ಲಿ ಥಿಯೇಟರ್ ಸಿಕ್ತು. ಫ್ರೆಂಡ್ಸ್ ಜೊತೆ ಹೋಗಿ ಚಿತ್ರ ವೀಕ್ಷಿಸಿದೆ. ಟಿಕೆಟ್ ಸಿಗೋದೆ ಕಷ್ಟ ಆಗಿದೆ. ಪಕ್ಕಾ ಫ್ಯಾನ್ಸ್ ಮೂವಿ. ಒಂದೂ ಡೈಲಾಗ್ ಸರಿಯಾಗಿ ಕೇಳಿಸಲಿಲ್ಲ, ಯಾಕಂದ್ರೆ ಜನರ ಶಿಳ್ಳೆ, ಚಪ್ಪಾಳೆ ಆ ಮಟ್ಟಕ್ಕೆ ಇತ್ತು. ಸ್ಟಾರ್ ವ್ಯಾಲ್ಯೂ ಅಂದ್ರೆ ಏನು ಅಂತ ನೋಡಲು ಈ ಚಿತ್ರ ನೋಡಬೇಕು’ ಎನ್ನುತ್ತಾರೆ ಸುಮಂತ್.
ಇನ್ನು ನಿರ್ದೇಶಕ ನವನೀತ್ (ಕರ್ವ ಚಿತ್ರ) ಕೂಡ ಚಿತ್ರವನ್ನು ವೀಕ್ಷಿಸಿದ್ದಾರೆ. ‘ಇದೊಂದು ಎವರೇಜ್ ಮೂವಿ. 5ರಲ್ಲಿ 3 ಸ್ಟಾರ್ಸ್ ನೀಡಬಹುದು. ಅಭಿಮಾನಿಗಳನ್ನು ರಂಜಿಸುತ್ತದೆ. ಆದರೆ ಒಬ್ಬ ನಿರ್ದೇಶಕನಾಗಿ ಹೇಳೋದಾದರೆ ಚಿತ್ರ ತುಂಬ ಮಂದಗತಿಯಲ್ಲಿ ಸಾಗುತ್ತದೆ. ದ್ವಿತೀಯಾರ್ಧ ಒಂದು ಹಂತಕ್ಕೆ ಒಕೆ ಅನ್ನುವಂತಿದೆ. ನಿರ್ದೇಶಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದ್ದಾನೆ ಎಂದರೆ ತಪ್ಪಿಲ್ಲ’ ಎನ್ನುತ್ತಾರೆ ನವನೀತ್.
ಕ್ರಿಕೆಟಿಗ ಸುರೇಶ್ ರೈನ ತಮ್ಮ ಟ್ವಿಟರ್ ಖಾತೆಯಲ್ಲಿ ‘ಅಮೇಝಿಂಗ್ ಫಸ್ಟ್ ಷೋ, ಕಬಾಲಿ ಹಬ್ಬ’ ಎಂದು ಬರೆದಿದ್ದಾರೆ. ಕಿರಣ್ ಬೇಡಿಗೂ ಕಬಾಲಿ ಜ್ವರ ತಟ್ಟಿದ್ದು ‘ಕ್ರಿಯೇಟಿವ್ ಕಾಂಟ್ರಿಬ್ಯೂಷನ್ ಆಫ್ ಯಂಗ್ ಕಲೆಕ್ಟರ್ಸ್’ ಎಂದಿದ್ದಾರೆ.
ಪಾರುಲ್ ಯಾದವ್ಗೆ ತಲೈವ ಮೇಲೆ ಅಪಾರ ಅಭಿಮಾನ. ಶುಕ್ರವಾರವೇ ಚಿತ್ರ ನೋಡಬೇಕು ಎಂದು ಕಾದು ಕೂತಿದ್ದರಂತೆ. ಆದರೆ ನೋಡಲು ಆಗಲಿಲ್ಲ. ಯಾಕೆ ಅಂತೀರಾ? ‘ನಾನಿವತ್ತು ಕಬಾಲಿ ನೋಡ್ಲೇಬೇಕು ಅಂತ ಇದ್ದೆ. ಆದ್ರೆ ನನ್ನ ಶೂಟಿಂಗ್ ಇವತ್ತೇ ಇದೆ. ಏನ್ ಮಾಡ್ಲಿ ಐ ಆ್ಯಮ್ ಅಪ್ಸೆಟ್. ಇವತ್ತು ರಜಾ ಇರ್ಬೇಕಿತ್ತು. ಹಾಗಂತ ಟ್ವೀಟ್ ಕೂಡ ಮಾಡಿದ್ದೇನೆ. ನಾಳೆ ನಾಡಿದ್ದರಲ್ಲಿ ಮುಂಬಯಿಗೆ ತೆರಳುತ್ತೇನೆ. ಅಲ್ಲೇ ‘ಕಬಾಲಿ’ ನೋಡುತ್ತೇನೆ’ ಎನ್ನುತ್ತಾ ಫಸ್ಟ್ ಡೇ ಫಸ್ಟ್ ಷೋ ಮಿಸ್ ಮಾಡಿಕೊಂಡ ಬೇಜಾರು ವ್ಯಕ್ತಪಡಿಸುತ್ತಾರೆ ಪಾರುಲ್.
ನಟ ವಶಿಷ್ಠ ಸಿಂಹ ಕೂಡ ರಜನಿ ಅಭಿಮಾನಿಯೆ. ಹಾಗಂತ ಫಸ್ಟ್ ಡೇ ಫಸ್ಟ್ ಷೋಗೆ ಹೋಗಲ್ಲವಂತೆ. ‘ಇಷ್ಟು ಬೇಗ ಕಬಾಲಿ ನೋಡಲು ಹೋದರೆ ಉಪಯೋಗ ಇಲ್ಲ. ಯಾಕಂದ್ರೆ ಥಿಯೇಟರಿನಲ್ಲಿ ಆ ಮಟ್ಟಕ್ಕೆ ರಶ್ ಇರುತ್ತದೆ. ವಿಶಿಲ್, ಕಿರುಚಾಟಗಳ ನಡುವೆ ಒಂದೂ ಡೈಲಾಗ್ ಕೇಳಲ್ಲ. ನಂಗೆ ಆ ರೀತಿ ಚಿತ್ರ ನೋಡಲು ಇಷ್ಟ ಇಲ್ಲ. ಜನ ಜಂಗುಳಿ ಕಡಿಮೆ ಆದ ನಂತರ ಹೋಗುತ್ತೇನೆ’ ಎನ್ನುತ್ತಾರೆ.
ವಿಜಯ್ ಸೂರ್ಯ ಕೂಡ ಮೊದಲ ದಿನ ಷೋ ಮಿಸ್ ಮಾಡಿಕೊಳ್ಳಲು ತಯಾರಿರಲ್ಲ. ‘ಟಿಕೆಟ್ ಬುಕ್ ಮಾಡಿದ್ದೇನೆ. ಕಬಾಲಿ ನೋಡಲು ಕಾತುರನಾಗಿದ್ದೇನೆ’ ಎಂದರು. ಇನ್ನು ನಟಿ ಸಂಜನಾ ಗಲ್ರಾಣಿ ಸದ್ಯ ಜಾಹಿರಾತು ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ತೆರಳಿದ್ದಾರೆ. ‘ಹೈದರಾಬಾದ್ನಲ್ಲೇ ಚಿತ್ರ ವೀಕ್ಷಿಸುತ್ತೇನೆ. ರಜನಿಕಾಂತ್ ಚಿತ್ರ ಅಂದ್ರೆ ತುಂಬ ಇಷ್ಟ’ ಎನ್ನುತ್ತಾರೆ ಸಂಜನಾ.
ವಿಶ್ವಾದ್ಯಂತ ‘ಕಬಾಲಿ’ ಹವಾ ಜೋರಾಗಿದೆ. ಈ ಚಿತ್ರದ ಬಗ್ಗೆ ನೂರಾರು ಜೋಕ್ಸ್, ಬಿಲ್ಡ್ ಅಪ್ ಸ್ಟೇಟಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ಯಾಂಡಲ್ವುಡ್ ಸಿಲೆಬ್ರಿಟಿಗಳು ಕೂಡ ಈ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ಕೆಲವರು ಈಗಾಗಲೇ ಸಿನಿಮಾ ನೋಡಿದ್ರೆ ಇನ್ನೂ ಕೆಲವರ ವಾರಾಂತ್ಯದ ಪ್ರೋಗ್ರಾಮ್ ಲಿಸ್ಟ್ನಲ್ಲಿ ಕಬಾಲಿ ಇದೆ. ಯಾರ್ಯಾರು ಕಬಾಲಿ ನೋಡಿದ್ರು, ಚಿತ್ರವನ್ನು ಎಷ್ಟು ಎಂಜಾಯ್ ಮಾಡಿದ್ರು, ಚಿತ್ರ ನೋಡಿ ಹೇಗನಿಸ್ತು ಎಂದು ಕೇಳುವ ಕಾತರವೂ ನಮಗಿತ್ತು.
ನಟ ಸುಮಂತ್ ಶೈಲೇಂದ್ರ ಮೊದಲ ದಿನವೇ ಕಬಾಲಿ ನೋಡಿದ ಖುಷಿಯಲ್ಲಿದ್ದಾರೆ. ‘ನಾನು ಮೈಸೂರು ರೋಡ್ ಬಳಿ ಶೂಟಿಂಗ್ನಲ್ಲಿ ಇದ್ದೆ. ಅದನ್ನು ಮುಗಿಸಿ ಅಲ್ಲಿಂದ ಮನೆಗೆ ಹೋಗುವ ದಾರಿಯಲ್ಲಿ ಥಿಯೇಟರ್ ಸಿಕ್ತು. ಫ್ರೆಂಡ್ಸ್ ಜೊತೆ ಹೋಗಿ ಚಿತ್ರ ವೀಕ್ಷಿಸಿದೆ. ಟಿಕೆಟ್ ಸಿಗೋದೆ ಕಷ್ಟ ಆಗಿದೆ. ಪಕ್ಕಾ ಫ್ಯಾನ್ಸ್ ಮೂವಿ. ಒಂದೂ ಡೈಲಾಗ್ ಸರಿಯಾಗಿ ಕೇಳಿಸಲಿಲ್ಲ, ಯಾಕಂದ್ರೆ ಜನರ ಶಿಳ್ಳೆ, ಚಪ್ಪಾಳೆ ಆ ಮಟ್ಟಕ್ಕೆ ಇತ್ತು. ಸ್ಟಾರ್ ವ್ಯಾಲ್ಯೂ ಅಂದ್ರೆ ಏನು ಅಂತ ನೋಡಲು ಈ ಚಿತ್ರ ನೋಡಬೇಕು’ ಎನ್ನುತ್ತಾರೆ ಸುಮಂತ್.
ಇನ್ನು ನಿರ್ದೇಶಕ ನವನೀತ್ (ಕರ್ವ ಚಿತ್ರ) ಕೂಡ ಚಿತ್ರವನ್ನು ವೀಕ್ಷಿಸಿದ್ದಾರೆ. ‘ಇದೊಂದು ಎವರೇಜ್ ಮೂವಿ. 5ರಲ್ಲಿ 3 ಸ್ಟಾರ್ಸ್ ನೀಡಬಹುದು. ಅಭಿಮಾನಿಗಳನ್ನು ರಂಜಿಸುತ್ತದೆ. ಆದರೆ ಒಬ್ಬ ನಿರ್ದೇಶಕನಾಗಿ ಹೇಳೋದಾದರೆ ಚಿತ್ರ ತುಂಬ ಮಂದಗತಿಯಲ್ಲಿ ಸಾಗುತ್ತದೆ. ದ್ವಿತೀಯಾರ್ಧ ಒಂದು ಹಂತಕ್ಕೆ ಒಕೆ ಅನ್ನುವಂತಿದೆ. ನಿರ್ದೇಶಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದ್ದಾನೆ ಎಂದರೆ ತಪ್ಪಿಲ್ಲ’ ಎನ್ನುತ್ತಾರೆ ನವನೀತ್.
ಕ್ರಿಕೆಟಿಗ ಸುರೇಶ್ ರೈನ ತಮ್ಮ ಟ್ವಿಟರ್ ಖಾತೆಯಲ್ಲಿ ‘ಅಮೇಝಿಂಗ್ ಫಸ್ಟ್ ಷೋ, ಕಬಾಲಿ ಹಬ್ಬ’ ಎಂದು ಬರೆದಿದ್ದಾರೆ. ಕಿರಣ್ ಬೇಡಿಗೂ ಕಬಾಲಿ ಜ್ವರ ತಟ್ಟಿದ್ದು ‘ಕ್ರಿಯೇಟಿವ್ ಕಾಂಟ್ರಿಬ್ಯೂಷನ್ ಆಫ್ ಯಂಗ್ ಕಲೆಕ್ಟರ್ಸ್’ ಎಂದಿದ್ದಾರೆ.
ಪಾರುಲ್ ಯಾದವ್ಗೆ ತಲೈವ ಮೇಲೆ ಅಪಾರ ಅಭಿಮಾನ. ಶುಕ್ರವಾರವೇ ಚಿತ್ರ ನೋಡಬೇಕು ಎಂದು ಕಾದು ಕೂತಿದ್ದರಂತೆ. ಆದರೆ ನೋಡಲು ಆಗಲಿಲ್ಲ. ಯಾಕೆ ಅಂತೀರಾ? ‘ನಾನಿವತ್ತು ಕಬಾಲಿ ನೋಡ್ಲೇಬೇಕು ಅಂತ ಇದ್ದೆ. ಆದ್ರೆ ನನ್ನ ಶೂಟಿಂಗ್ ಇವತ್ತೇ ಇದೆ. ಏನ್ ಮಾಡ್ಲಿ ಐ ಆ್ಯಮ್ ಅಪ್ಸೆಟ್. ಇವತ್ತು ರಜಾ ಇರ್ಬೇಕಿತ್ತು. ಹಾಗಂತ ಟ್ವೀಟ್ ಕೂಡ ಮಾಡಿದ್ದೇನೆ. ನಾಳೆ ನಾಡಿದ್ದರಲ್ಲಿ ಮುಂಬಯಿಗೆ ತೆರಳುತ್ತೇನೆ. ಅಲ್ಲೇ ‘ಕಬಾಲಿ’ ನೋಡುತ್ತೇನೆ’ ಎನ್ನುತ್ತಾ ಫಸ್ಟ್ ಡೇ ಫಸ್ಟ್ ಷೋ ಮಿಸ್ ಮಾಡಿಕೊಂಡ ಬೇಜಾರು ವ್ಯಕ್ತಪಡಿಸುತ್ತಾರೆ ಪಾರುಲ್.
ನಟ ವಶಿಷ್ಠ ಸಿಂಹ ಕೂಡ ರಜನಿ ಅಭಿಮಾನಿಯೆ. ಹಾಗಂತ ಫಸ್ಟ್ ಡೇ ಫಸ್ಟ್ ಷೋಗೆ ಹೋಗಲ್ಲವಂತೆ. ‘ಇಷ್ಟು ಬೇಗ ಕಬಾಲಿ ನೋಡಲು ಹೋದರೆ ಉಪಯೋಗ ಇಲ್ಲ. ಯಾಕಂದ್ರೆ ಥಿಯೇಟರಿನಲ್ಲಿ ಆ ಮಟ್ಟಕ್ಕೆ ರಶ್ ಇರುತ್ತದೆ. ವಿಶಿಲ್, ಕಿರುಚಾಟಗಳ ನಡುವೆ ಒಂದೂ ಡೈಲಾಗ್ ಕೇಳಲ್ಲ. ನಂಗೆ ಆ ರೀತಿ ಚಿತ್ರ ನೋಡಲು ಇಷ್ಟ ಇಲ್ಲ. ಜನ ಜಂಗುಳಿ ಕಡಿಮೆ ಆದ ನಂತರ ಹೋಗುತ್ತೇನೆ’ ಎನ್ನುತ್ತಾರೆ.
ವಿಜಯ್ ಸೂರ್ಯ ಕೂಡ ಮೊದಲ ದಿನ ಷೋ ಮಿಸ್ ಮಾಡಿಕೊಳ್ಳಲು ತಯಾರಿರಲ್ಲ. ‘ಟಿಕೆಟ್ ಬುಕ್ ಮಾಡಿದ್ದೇನೆ. ಕಬಾಲಿ ನೋಡಲು ಕಾತುರನಾಗಿದ್ದೇನೆ’ ಎಂದರು. ಇನ್ನು ನಟಿ ಸಂಜನಾ ಗಲ್ರಾಣಿ ಸದ್ಯ ಜಾಹಿರಾತು ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ತೆರಳಿದ್ದಾರೆ. ‘ಹೈದರಾಬಾದ್ನಲ್ಲೇ ಚಿತ್ರ ವೀಕ್ಷಿಸುತ್ತೇನೆ. ರಜನಿಕಾಂತ್ ಚಿತ್ರ ಅಂದ್ರೆ ತುಂಬ ಇಷ್ಟ’ ಎನ್ನುತ್ತಾರೆ ಸಂಜನಾ.