ಆ್ಯಪ್ನಗರ

ಕಲಾವಿದರ ಸಂಘ-ಅಣ್ಣನ ಕನಸು ನನಸು ಮಾಡಿದ ತಮ್ಮ

ಇವರ ಜತೆ ಕೈ ಜೋಡಿಸಿದ್ದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ದೊಡ್ಡಣ್ಣ. ಎಲ್ಲ ಕಲಾವಿದರನ್ನು ವಿಶ್ವಾಸಕ್ಕೆ ತಗೆದುಕೊಂಡ ಈ ಟೀಮ್‌ ಭವ್ಯವಾದ ಕಟ್ಟಡವನ್ನು ಈಗ ನಿರ್ಮಿಸಿದೆ.

Vijaya Karnataka 26 Nov 2018, 9:52 am
ಕಲಾವಿದರ ಸಂಘಕ್ಕೊಂದು ಕಟ್ಟಡಬೇಕು ಎನ್ನುವುದು ಡಾ.ರಾಜ್‌ ಕುಮಾರ್‌ ಅವರ ಕನಸಾಗಿತ್ತು. 1986ರಲ್ಲಿ ಸ್ಥಾಪನೆಯಾದ ಸಂಘಕ್ಕೆ ತನ್ನದೇ ಒಂದು ಸ್ವಂತ ನೆಲೆಬೇಕು ಎಂದು ಹಲವಾರಿ ಬಾರಿ ಹೇಳಿದ್ದರು ಅಣ್ಣಾವ್ರು. ಈ ಕನಸನ್ನು ನನಸು ಮಾಡಿದ್ದು ಅಂಬರೀಶ್‌.
Vijaya Karnataka Web kalavidra sangha


ವಿಜಯ ಕರ್ನಾಟಕ ಪತ್ರಿಕೆಯ ಕಚೇರಿ ಪಕ್ಕದಲ್ಲಿ ನಿರ್ಮಾಣ ಆಗಿರುವ ಸುವಿಶಾಲ ಮತ್ತು ಸುಂದರವಾದ ಕಲಾವಿದರ ಸಂಘದ ಕಟ್ಟಡಕ್ಕೂ ಒಂದು ಇತಿಹಾಸವಿದೆ. ಈ ಸಂಘದ ಕಟ್ಟಡ ಕಟ್ಟಲು ಸರಕಾರದಿಂದ ನಿವೇಶನ ಸಿಗುವಂತೆ ಮಾಡಿದ್ದು ಡಾ.ರಾಜ್‌. ಜಾಗ ವಿವಾದದಲ್ಲಿರುವ ಕಾರಣಕ್ಕಾಗಿ ಅಂದು ಕಟ್ಟಡ ನಿರ್ಮಾಣ ಆಗಲು ಸಾಧ್ಯವಾಗಲಿಲ್ಲ. ಅಂಬರೀಶ್‌ ವಸತಿ ಸಚಿವರಾಗಿದ್ದಾಗ ಅದಕ್ಕೊಂದು ರೂಪರೇಷೆ ಸಿದ್ಧಪಡಿಸಿ, ಸರಕಾರದೊಂದಿಗೆ ಮಾತನಾಡಿ ಕಟ್ಟಡ ಕಟ್ಟುವ ಕೆಲಸ ಆರಂಭಿಸಿದರು.

ಇವರ ಜತೆ ಕೈ ಜೋಡಿಸಿದ್ದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ದೊಡ್ಡಣ್ಣ. ಎಲ್ಲ ಕಲಾವಿದರನ್ನು ವಿಶ್ವಾಸಕ್ಕೆ ತಗೆದುಕೊಂಡ ಈ ಟೀಮ್‌ ಭವ್ಯವಾದ ಕಟ್ಟಡವನ್ನು ಈಗ ನಿರ್ಮಿಸಿದೆ.

ಇದೊಂದು ಬಹುಮಹಡಿ ಕಟ್ಟಡವಾಗಿದ್ದು, ಮುನ್ನೂರು ಆಸನಗಳ ಸಾಮರ್ಥ್ಯ‌ವುಳ್ಳ ಚಿತ್ರಮಂದಿರ ಕೂಡ ಇದೆ. ಯೋಗ, ನಟನಾ ತರಬೇತಿ ಸೇರಿ ಸಿನಿಮಾ ಸಂಬಂಧಿಸಿ ವಿವಿಧ ಕೋರ್ಸ್‌ಗಳನ್ನು ಆಯೋಜನೆ ಮಾಡಲು ಪ್ರತ್ಯೇಕ ಮಹಡಿ ಮತ್ತು ಕೊಠಡಿಯನ್ನು ನಿರ್ಮಿಸಲಾಗಿದೆ. ವಾರದ ಹಿಂದೆಯಷ್ಟೇ ಈ ಕಟ್ಟಡಕ್ಕೆ ಡಾ.ರಾಜ್‌ ಕುಮಾರ್‌ ಹೆಸರು ಇಡಲಾಗಿದೆ. ಅಂಬರೀಶ್‌ ಕೊಡುಗೆ ಎಂದು ಬರೆಸಿ, ಶ್ರಮದ ಗುಣಗಾನ ಮಾಡಲಾಗಿದೆ. ಭಾನುವಾರ ಅಂಬಿ ಅವರ ಪಾರ್ಥೀವ ಶರೀರವನ್ನು ಕಲಾವಿದರ ಸಂಘದಲ್ಲಿರಿಸಿ ಚಿತ್ರರಂಗದ ಕಲಾವಿದರೆಲ್ಲರೂ ನಮನ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌