ಆ್ಯಪ್ನಗರ

ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ದರ್ಶನ್-ಸುದೀಪ್‌?

ದರ್ಶನ್‌ ಹಾಗೂ ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರು. ಅವರಿಬ್ಬರ ಸಿನಿಮಾಗಳು ಒಂದೇ ತೆರೆಗೆ ಬಂದರೆ ಬಾಕ್ಸ್ ಆಫೀಸ್‌ ಖಚಿತ. ಅಂಥದ್ದೊಂದು ಸಾಧ್ಯತೆ ಈಗ ಎದುರಾಗುವ ಲಕ್ಷಣಗಳು ಗೋಚರಿಸಿವೆ.

Vijaya Karnataka Web 14 Oct 2019, 4:35 pm
ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಕೆಲ ದಿನಗಳ ಹಿಂದಷ್ಟೇ ಸ್ಟಾರ್ ವಾರ್ ಕೇಳಿಬಂದಿತ್ತು. ಅದರಲ್ಲೂ 'ಪೈಲ್ವಾನ್' ಸಿನಿಮಾ ತೆರೆಕಂಡಾಗ ಅದನ್ನು ದರ್ಶನ್ ಅಭಿಮಾನಿಗಳು ಪೈರಸಿ ಮಾಡಿದ್ದಾರೆ ಎಂಬ ಆರೋಪ ದೊಡ್ಡ ಸಂಚಲನ ಉಂಟು ಮಾಡಿತ್ತು. ಈಗ ಮತ್ತೊಮ್ಮೆ ದರ್ಶನ್-ಸುದೀಪ್‌ ಅಭಿಮಾನಿಗಳಿಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಎದುರಾಗಿದೆ. ಈ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ತೆರೆಕಾಣಲಿವೆಯಂತೆ!!
Vijaya Karnataka Web Darshan sudeep

ಹೋದಲ್ಲಿ ಬಂದಲ್ಲಿ ಸುದೀಪ್‌ಗೆ ಎದುರಾಗ್ತಿದೆ ಅದೊಂದೇ ಪ್ರಶ್ನೆ!
ದರ್ಶನ್ ಅಭಿನಯದ 'ಒಡೆಯ' ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಎರಡು ಹಾಡಿನ ಶೂಟಿಂಗ್ ಸಲುವಾಗಿ ವಿದೇಶಕ್ಕೆ ಹಾರಿದೆ ಚಿತ್ರತಂಡ. ಅದು ಮುಗಿಯುತ್ತಿದ್ದಂತೆಯೇ ರಿಲೀಸ್ ಆಗಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಸುದೀಪ್ ನಟನೆಯ ಸಿನಿಮಾವೊಂದರ ಎದುರು 'ಒಡೆಯ' ತೆರೆಕಾಣಲಿದೆಯಂತೆ!
ಪೈಲ್ವಾನ್ ಪೈರಸಿ: 'ಡಿ ಬಾಸ್ ಫ್ಯಾನ್' ಎಂದು ಬರೆದುಕೊಂಡಿರುವ ಯುವಕನ ಬಂಧನ
ಯಾವುದು ಆ ಸಿನಿಮಾ?
ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್ ನಾಯಕತ್ವದಲ್ಲಿ ಸಿದ್ಧವಾಗಿರುವ 'ದಬಾಂಗ್ 3' ಚಿತ್ರದಲ್ಲಿ ಸುದೀಪ್‌ ಕೂಡ ನಟಿಸಿದ್ದಾರೆ. ಆ ಚಿತ್ರ ಡಿ.20ರಂದು ತೆರೆಗೆ ಬರುತ್ತಿದೆ. ಅದೇ ದಿನ 'ಒಡೆಯ' ಚಿತ್ರವು ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದೆ. 'ದಬಾಂಗ್ 3' ಚಿತ್ರದಲ್ಲಿ ಸುದೀಪ್‌ಗೆ ಮಹತ್ವದ ಪಾತ್ರ ಇದೆ. ಅಲ್ಲದೆ, ಆ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರಲಿದೆ. ಆದ್ದರಿಂದ ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ಆ ಸಿನಿಮಾ ತೆರೆಗೆ ಬರುವುದು ಪಕ್ಕಾ. ಹಾಗಾಗಿ, ಸಹಜವಾಗಿಯೇ ಕರ್ನಾಟಕದಲ್ಲಿ ಒಡೆಯ ಹಾಗೂ ದಬಾಂಗ್ ಮಧ್ಯೆ ಕ್ಲಾಶ್ ಏರ್ಪಡುವ ಸಾಧ್ಯತೆಗಳಿವೆ.
ಕಲೆಕ್ಷನ್‌ನಲ್ಲೂ ಪೈಲ್ವಾನ್‌
ಇನ್ನು, ದರ್ಶನ್ 'ಒಡೆಯ' ಚಿತ್ರದ ನಂತರ 'ರಾಬರ್ಟ್' ಶೂಟಿಂಗ್‌ನಲ್ಲೂ ಬಿಜಿ ಇದ್ದಾರೆ. ಅತ್ತ ಸುದೀಪ್‌ 'ದಬಾಂಗ್ 3' ಚಿತ್ರದ ಕೆಲಸಗಳನ್ನು ಮುಗಿಸಿ, 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌