ಆ್ಯಪ್ನಗರ

ಕೇಸ್‌ನಿಂದ ಹೊರಬಂದು 'ಪೊಗರು' ತೋರಿಸಲು ಸಜ್ಜಾದ ನಟ ಧರ್ಮ

ಧರ್ಮ ಅವರ ಬಗ್ಗೆ ಬಹಳಷ್ಟು ಜನರು ಸಾಕಷ್ಟು ರೀತಿಯಲ್ಲಿ ತಮಗೆ ತೋಚಿದಂತೆ ಕಲ್ಪನೆ ಮಾಡಿಕೊಂಡಿದ್ದರು. ಅದಕ್ಕೂ ಕಾರಣವಿದೆ. ಧರ್ಮ ಅವರು ವಂಚನೆ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡು ಎಫ್‌ಐಆರ್ ದಾಖಲಾದ ಬಳಿಕ ಏನಾಯಿತು ಎಂಬ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಈ ಬಗ್ಗೆ ಇತ್ತೀಚಿಗಷ್ಟೇ ಮಾಹಿತಿ ಹೊರಬಂದಿದೆ.

Vijaya Karnataka Web 22 Mar 2019, 3:06 pm
ಕನ್ನಡದ ಪ್ರಮುಖ ಪೋಷಕ ನಟ ಧರ್ಮ ಅವರು ಒಂದಷ್ಟು ದಿನ ತೆರೆಮರೆಯಲ್ಲಿ ಇದ್ದಂತೆ ಎಲ್ಲರಿಗೂ ಭಾಸವಾಗಿತ್ತು. ಕಾರಣ, ಕಳೆದ ವರ್ಷದ ನವೆಂಬರ್‌ನಲ್ಲಿ ಅವರ ಮೇಲೆ ನಟಿಯೊಬ್ಬರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ದಾಖಲಾಗಿತ್ತು. ಆ ನಂತರ, ಇತ್ತೀಚಿಗೆ ಅವರು ನಟ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುವವರೆಗೂ ಅವರ ಬಗ್ಗೆ ಯಾವೊಂದು ಸುಳಿವೂ ಸಹ ಹೊರಗೆ ಬಂದಿರಲಿಲ್ಲ.
Vijaya Karnataka Web dharma-5


ಧರ್ಮ ಅವರ ಬಗ್ಗೆ ಬಹಳಷ್ಟು ಜನರು ಸಾಕಷ್ಟು ರೀತಿಯಲ್ಲಿ ತಮಗೆ ತೋಚಿದಂತೆ ಕಲ್ಪನೆ ಮಾಡಿಕೊಂಡಿದ್ದರು. ಅದಕ್ಕೂ ಕಾರಣವಿದೆ. ಧರ್ಮ ಅವರು ವಂಚನೆ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡು ಎಫ್‌ಐಆರ್ ದಾಖಲಾದ ಬಳಿಕ ಏನಾಯಿತು ಎಂಬ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಈ ಬಗ್ಗೆ ಇತ್ತೀಚಿಗಷ್ಟೇ ಮಾಹಿತಿ ಹೊರಬಂದಿದೆ. ಸ್ವತಃ ನಟ ಧರ್ಮ ಅವರು ಈ ಬಗ್ಗೆ ಹೊರಗೆ ಹೇಳಿಕೊಂಡಿದ್ದಾರೆ. ಅಂದು ವಂಚನೆ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಏನಾಯಿತು ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.

"ನನ್ನ ಮೇಲೆ ವಂಚನೆ ಆರೋಪ ಮಾಡಲಾಯಿತು. ಆರೋಪ ಬಂದು ತಿಂಗಳ ಬಳಿಕ ನನ್ನ ಮೇಲೆ ಎಫ್‌ಐಆರ್ ದಾಖಲಾಯಿತು. ಬಳಿಕ ಆರೋಪ ಮಾಡಿದ್ದ ನಟಿಯೇ ನಾನು ಅಂದುಕೊಂಡಿದ್ದು ಬೇರೆ,ಆಗಿದ್ದು ಬೇರೆ ಎಂದು ಹೇಳಿಕೆ ನೀಡಿದರು. ನನಗೆ ಜಾಮೀನು ಸಿಕ್ಕಿತು. ಪೊಲೀಸರಿಗೂ ಸತ್ಯ ಮನವರಿಕೆ ಆಗಿತ್ತು. ತಕ್ಷಣ ಮಾಧ್ಯಮದವರ ಮುಂದೆ ಬಂದು ವಾಸ್ತವ ಸಂಗತಿ ಬಿಚ್ಚಿಡಲಾಯಿತು. ಆ ದುರಂತದ ಕಥೆ ಅಲ್ಲಿಗೆ ಮುಗಿಯಿತು" ಎಂದಿದ್ದಾರೆ ನಟ ಧರ್ಮ.

ಅಂದಹಾಗೆ, ನಟ ಧರ್ಮ ಅವರು ಇತ್ತೀಚಿಗೆ ಆಕ್ಷನ್ ಕಿಂಗ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು ಐದಾರು ತಿಂಗಳುಗಳ ಬಳಿಕ ಮತ್ತೆ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ ನಟ ಧರ್ಮ. ಕಿಚ್ಚ ಸುದೀಪ್ ಅವರ 'ಮಾಣಿಕ್ಯ' ಚಿತ್ರವೂ ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ನಟ ಧರ್ಮ ಅವರು ಅಭಿನಯಿಸಿದ್ದಾರೆ. ಇದೀಗ ತಮ್ಮ ಮೇಲೆ ಬಂದಿರುವ ಆರೋಪ, ಕೇಸ್‌ ಎಲ್ಲವುಗಳಿಂದ ಹೊರಬಂದು ಮತ್ತೆ ವೃತ್ತಿಜೀವನಕ್ಕೆ ಮರಳಿ, ಎಂದಿನಂತೆ ಸಿನಿಮಾದಲ್ಲಿ ಅಭಿನಯಿಸತೊಡಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌