ಆ್ಯಪ್ನಗರ

ಸುಮಲತಾ ಬಗ್ಗೆ ಕೇಳಿದರೆ ನುಣುಚಿಕೊಂಡು ಬೇರೆ ಮಾತನಾಡಿದ ಜಗ್ಗೇಶ್!

"ವೈಯುಕ್ತಿಕ ಟೀಕೆಗಳು ಒಳ್ಳೆಯದಲ್ಲ. ನಾನು ಯಾರ ಬಗ್ಗೆಯೂ ಟೀಕಿಸುವುದಿಲ್ಲ. ನಾನು ಇಲ್ಲಿಗೆ ಬಿಜೆಪಿ ಪರ ಪ್ರಚಾರ ಮಾಡಲು ಬಂದಿದೇನೆ ಅಷ್ಟೆ. ಇದಕ್ಕೆ ಸಂಬಂಧಪಟ್ಟು ಏನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು" ಅಂದಿದಾರೆ ನಟ ಜಗ್ಗೇಶ್.

Vijaya Karnataka Web 11 Apr 2019, 9:35 pm
ಸದ್ಯಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರವು ಕರ್ನಾಟಕದ ಅತ್ಯಂತ ಕುತೂಹಲ ಸೃಷ್ಟಿಸಿರುವ ಕ್ಷೇತ್ರವಾಗಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀ‍ಷ್ ಅವರಿಬ್ಬರೂ ಕಡೆಯಿಂದಲೂ ಮಂಡ್ಯದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಸುಮಲತಾ ಪರ ಪ್ರಚಾರ ನಡೆಸುತ್ತಿರುವವರಲ್ಲಿ ನಟ ದರ್ಶನ್ ಹಾಗೂ ನಟ ಯಶ್ ಪ್ರಮುಖರು.
Vijaya Karnataka Web jaggesh1104


ಸದ್ಯ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸದ್ಯಕ್ಕೆ ನಟರಾದ ದರ್ಶನ್ ಮತ್ತು ಯಶ್ ಸೇರಿದಂತೆ ನೆನಪಿರಲಿ ಪ್ರೇಮ್ ಅವರೆಲ್ಲರೂ ಕೂಡ ಸುಮಲತಾ ಅವರಿಗೆ ಬೆಂಬಲ ಸೂಚಿಸಿ ಚುನಾವಣೆ ಪ್ರಚಾರಕ್ಕೆ ಧುಮುಕಿದ್ದಾರೆ.

ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿವೈ ರಾಘವೇಂದ್ರ ಪರ ಪ್ರಚಾರಕ್ಕೆ ಆಗಮಿಸಿದ್ದ ಜಗ್ಗೇಶ್ ಅವರನ್ನು ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕೆ ತೆರಳುತ್ತೀರಾ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟ ಜಗ್ಗೇಶ್ "ಅದನ್ನು ಬಿಟ್ಟು ಬೇರೆ ಏನಾದ್ರೂ ಮಾತಾಡೋಣ.." ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

"ವೈಯುಕ್ತಿಕ ಟೀಕೆಗಳು ಒಳ್ಳೆಯದಲ್ಲ. ನಾನು ಯಾರ ಬಗ್ಗೆಯೂ ಟೀಕಿಸುವುದಿಲ್ಲ. ನಾನು ಇಲ್ಲಿಗೆ ಬಿಜೆಪಿ ಪರ ಪ್ರಚಾರ ಮಾಡಲು ಬಂದಿದೇನೆ ಅಷ್ಟೆ. ಇದಕ್ಕೆ ಸಂಬಂಧಪಟ್ಟು ಏನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು" ಅಂದಿದಾರೆ ನಟ ಜಗ್ಗೇಶ್. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು 'ಸುಮಲತಾ' ಅವರಿಗೆಗೆ ಬೆಂಬಲ ನೀಡಲು ಸ್ಥಳೀಯ ಬಿಜೆಪಿ ಮುಖಂಡರಿಗೆ ಸೂಚಿಸಿದ್ದಾರೆ.

ಆದರೆ ಅಂಬರೀಷ್ ಅವರಿಗೆ ಅತ್ಯಾಪ್ತರಾಗಿದ್ದ ಜಗ್ಗೇಶ್ ಹೀಗೆ ಮಾತನಾಡಿದ್ದು ನೋಡಿದರೆ, ಆಂತರಿಕವಾಗಿ ಏನೋನೋ ಬೆಳವಣಿಗೆಗಳಾಗಿವೆ ಎನ್ನಿಸುವಂತಿದೆ. ಆದರೆ, ಚುನಾವಣೆ ವಿಷಯದಲ್ಲಿ ಅದು ಹೀಗೇ ಎಂದು ಹೇಳುವುದು ಕಷ್ಟ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌