ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ: ನಟ ಜಗ್ಗೇಶ್
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಲಿರುವುದು ನಿಚ್ಚಳವಾಗಿದೆ. ಕನ್ನಡದ ನವರಸನಾಯಕ ಜಗ್ಗೇಶ್ ಅವರು ಬಿಜೆಪಿಯ ಅಭೂತಪೂರ್ವ ಗೆಲುವಿನ ಸೂಚನೆಯನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.
Vijaya Karnataka Web 23 May 2019, 3:15 pm
ಕನ್ನಡದ ನವರಸನಾಯಕ ಜಗ್ಗೇಶ್ ಅವರು ಬಿಜೆಪಿಯ ಅಭೂತಪೂರ್ವ ಗೆಲುವಿನ ಸೂಚನೆಯನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಸ್ಪಷ್ಟ ಬಹುಮತವನ್ನು ಗಳಿಸಿಕೊಂಡ ಸೂಚನೆ ಸಿಕ್ಕಿದೆ. ಮ್ಯಾಜಿಕ್ ನಂಬರ್ 272ನ್ನು ಮೀರಿ 350ರ ಗಡಿ ಸಮೀಪಿಸಿರುವ ಬಿಜೆಪಿ, ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂಬಂತಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಲಿರುವುದು ನಿಚ್ಚಳವಾಗಿದೆ.
ಇದೀಗ, ಕನ್ನಡದ ನಟ, ಬಿಜೆಪಿ ಅಭಿಮಾನಿ ಕಾರ್ಯಕರ್ತರಾಗಿರುವ ಜಗ್ಗೇಶ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಭಾರೀ ಬಹುಮತದತ್ತ ಸಾಗುತ್ತಿರುವ ಬಗ್ಗೆ ಖುಷಿಯಾಗಿ ಟ್ವೀಟ್ ಮಾಡಿದ್ದಾರೆ. ಕೇಂದ್ರದಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಸಹ ಬಿಜೆಪಿ ಭಾರೀ ಗೆಲುವನ್ನು ದಾಖಲಿಸಿದೆ. ಈ ಬಗ್ಗೆ ನಟ ಜಗ್ಗೇಶ್ "ಅದ್ಭುತ.. ಅತ್ಯದ್ಭುತ...ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ... ಸಂಭವಾಮಿ ಯುಗೆ ಯುಗೇ..." ಎಂದು ಟ್ವೀಟ್ ಮಾಡಿದ್ದಾರೆ.
ಇದೀಗ, ಕನ್ನಡದ ನಟ, ಬಿಜೆಪಿ ಅಭಿಮಾನಿ ಕಾರ್ಯಕರ್ತರಾಗಿರುವ ಜಗ್ಗೇಶ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಭಾರೀ ಬಹುಮತದತ್ತ ಸಾಗುತ್ತಿರುವ ಬಗ್ಗೆ ಖುಷಿಯಾಗಿ ಟ್ವೀಟ್ ಮಾಡಿದ್ದಾರೆ. ಕೇಂದ್ರದಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಸಹ ಬಿಜೆಪಿ ಭಾರೀ ಗೆಲುವನ್ನು ದಾಖಲಿಸಿದೆ. ಈ ಬಗ್ಗೆ ನಟ ಜಗ್ಗೇಶ್ "ಅದ್ಭುತ.. ಅತ್ಯದ್ಭುತ...ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ... ಸಂಭವಾಮಿ ಯುಗೆ ಯುಗೇ..." ಎಂದು ಟ್ವೀಟ್ ಮಾಡಿದ್ದಾರೆ.