ಆ್ಯಪ್ನಗರ

ಹೊಸ ಸಾಹಸಕ್ಕೆ ಕೈ ಹಾಕಲಿರುವ ಪುನೀತ್ ರಾಜ್‌ಕುಮಾರ್!

ಸದ್ಯಕ್ಕೆ ಪುನೀತ್ ರಾಜ್‌ಕುಮಾರ್ ತಮ್ಮ ಮುಂಬರುವ 'ಯುವರತ್ನ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ದಿನಗಳಿಂದ ಯುವರತ್ನ ಚಿತ್ರೀಕರಣ ನಡೆಯುತ್ತಿದೆ. ಸೂಪರ್ ಹಿಟ್ ದಾಖಲಿಸಿರುವ 'ರಾಜಕುಮಾರ' ಚಿತ್ರದ ಬಳಿಕ ಸಂತೋಷ್ ಆನಂದ್‌ರಾಮ್ ಮತ್ತು ಪುನೀತ್ ರಾಜ್‌ಕುಮಾರ್ ಜೋಡಿಯ ಎರಡನೇ ಚಿತ್ರವಿದು.

Vijaya Karnataka Web 23 Jun 2019, 12:40 pm
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಅವರೊಬ್ಬ ನಟ, ನಿರೂಪಕ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿರುವ ಸಂಗತಿ. ಜೊತೆಗೆ ಇತ್ತೀಚೆಗೆ ತಮ್ಮದೇ ಸಂಸ್ಥೆಯೊಂದನ್ನು ಹುಟ್ಟುಹಾಕಿ ಸಿನಿಮಾಗಳ ನಿರ್ಮಾಣ ಕಾರ್ಯದಲ್ಲಿಯೂ ಸಕ್ರಿಯರಾಗಿದ್ದಾರೆ. ಅವರ ಸಂಸ್ಥೆಯಿಂದ ಹೊರಬಂದ 'ಕವಲುದಾರಿ' ಚಿತ್ರವು ಈಗಾಗಲೇ ಬಿಡುಗಡೆ ಕಂಡು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಆಡಿಯೋ ಸಂಸ್ಥೆಯನ್ನು ಸಹ ಪುನೀತ್ ಹುಟ್ಟುಹಾಕಿದ್ದು, ತಮ್ಮ 'ಪಿಆರ್‌ಕೆ' ಸಂಸ್ಥೆ ಮೂಲಕ ಸಾಕಷ್ಟು ಆಡಿಯೋಗಳನ್ನು ಸಹ ಹೊರತಂದಿದ್ದಾರೆ.
Vijaya Karnataka Web puneeth2306


ಇದೀಗ ಪವರ್ ಸ್ಟಾರ್ ಪುನೀತ್ ಹೊಸ ಸಾಹಸಕ್ಕೆ ಸಜ್ಜಾಗಿದ್ದಾರೆ. ನಿರ್ಮಾಣ, ಆಡಿಯೋ ಬಳಿಕ ಇದೀಗ ಸಿನಿಮಾ ವಿತರಣೆಯನ್ನು ಸಹ ಪುನೀತ್ ಮಾಡಲಿದ್ದಾರಂತೆ. ಹೌದು, ಸ್ವತಃ ಪುನೀತ್ ಈ ಬಗ್ಗೆ ಹೇಳಿಕೊಂಡಿದ್ದು, ಸದ್ಯದಲ್ಲೇ ಅವರು ಸಿನಿಮಾ ವಿತರಣೆಗೂ ಕೈಹಾಕಲು ಸಿದ್ಧರಾಗಿದ್ದಾರಂತೆ. ಅವರ ಮೊಟ್ಟ ಮೊದಲ ವಿತರಣೆ ಸಿನಿಮಾ ಯಾವುದಾಗಬಹುದು ಎಂಬ ಕತೂಹಲವೀಗ ಬಹಳಷ್ಟು ಜನರಲ್ಲಿ ಮೂಡಿದೆ. ಅದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ ಎನ್ನಲಾಗಿದೆ.

ಅಂದಹಾಗೆ, ಸದ್ಯಕ್ಕೆ ಪುನೀತ್ ರಾಜ್‌ಕುಮಾರ್ ತಮ್ಮ ಮುಂಬರುವ 'ಯುವರತ್ನ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ದಿನಗಳಿಂದ ಯುವರತ್ನ ಚಿತ್ರೀಕರಣ ನಡೆಯುತ್ತಿದೆ. ಸೂಪರ್ ಹಿಟ್ ದಾಖಲಿಸಿರುವ 'ರಾಜಕುಮಾರ' ಚಿತ್ರದ ಬಳಿಕ ಸಂತೋಷ್ ಆನಂದ್‌ರಾಮ್ ಮತ್ತು ಪುನೀತ್ ರಾಜ್‌ಕುಮಾರ್ ಜೋಡಿಯ ಎರಡನೇ ಚಿತ್ರವಿದು. ಹೀಗಾಗಿ ಸಹಜವಾಗಿಯೇ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌