ಆ್ಯಪ್ನಗರ

ಅಭಿಮಾನಿಗಳ ಬೆಂಬಲ ಕೋರಿದ 'ಸತ್ಯಪಥ' ಟ್ರಸ್ಟಿ ನೀನಾಸಂ ಸತೀಶ್

ಚಿತ್ರರಂಗದಲ್ಲಿ ಈಗಾಗಲೇ ಬಹಳಷ್ಟು ಕಲಾವಿದರು ಸಾಮಾಜಿಕ ಕಳಕಳಿಯ ಕೆಲಸಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕೈಲಾದ ಮಟ್ಟಿಗೆ ಧನಸಹಾಯ ಮಾಡುತ್ತಿದ್ದಾರೆ. ಟ್ರಸ್ಟ್ ಗಳ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

Vijaya Karnataka Web 6 May 2019, 5:49 pm
ಕನ್ನಡದ ನಟ ಸತೀಶ್ ನೀನಾಸಂ ಕನ್ನಡ ಚಿತ್ರೋದ್ಯಮದ ಬಹುಮುಖ ಪ್ರತಿಭೆ. ತಮ್ಮ ನಟನೆಯ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ಸತೀಶ್, ತಮ್ಮ ಅಭಿಮಾನಿಗಳಿಗೆ ಶುಭ ಸಮಾಚಾರವೊಂದನ್ನು ನೀಡಿದ್ದಾರೆ. ಅವರು ಹೊಸ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದು, ಅದಕ್ಕೆ 'ಸತ್ಯಪಥ' ಎಂದು ಹೆಸರಿಟ್ಟುಕೊಂಡಿದ್ದಾರೆ. ಈ 'ಸತ್ಯಪಥ'ದ ಮೂಲಕ ಕೆಲವು ಸಾಮಾಜಿಕ ಕಳಕಳಿಯ ಕಾರ್ಯಕ್ಗರಮಗಳನ್ನು ಮಾಡಿ ಸಮಾಜ ಸೇವೆ ಮಾಡುವ ಉದ್ಧೇಶ ಹೊಂದಿದ್ದಾರಂತೆ ಸತೀಶ್.
Vijaya Karnataka Web sathis0605


ಚಿತ್ರರಂಗದಲ್ಲಿ ಈಗಾಗಲೇ ಬಹಳಷ್ಟು ಕಲಾವಿದರು ಸಾಮಾಜಿಕ ಕಳಕಳಿಯ ಕೆಲಸಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕೈಲಾದ ಮಟ್ಟಿಗೆ ಧನಸಹಾಯ ಮಾಡುತ್ತಿದ್ದಾರೆ. ಟ್ರಸ್ಟ್ ಗಳ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇದೀಗ ನಟ ಸತೀಶ್ ಕೂಡ 'ಸತ್ಯ ಪಥ' ವೆಂಬ ಎಂಬ ಹೆಸರಿನಲ್ಲಿ ಟ್ರಸ್ಟ್ ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಬರೆದಿರುವ ಸತೀಶ್ "ಬಹಳ ದಿನಗಳ ಹಿಂದೆಯೇ ಈ ಕೆಲಸ ಶುರುವಾಗಬೇಕಿತ್ತು. ಆದರೆ ಕೆಲವು ಕಾನೂನು ತೊಡಕುಗಳಿಂದ ಈ ಕೆಲಸ ಸ್ವಲ್ಪ ವಿಳಂಬವಾಗಿದೆ. ಇದೀಗ ಈ 'ಸತ್ಯಪಥ' ಟ್ರಸ್ಟ್ ಅನ್ನು ರಿಜಿಸ್ಟರ್ ಮಾಡಿದ್ದೇನೆ. ಈ ದಿಸೆಯಲ್ಲಿ ನಿಮ್ಮ ಬೆಂಬಲ ನಮಗಿರಲಿ" ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ಅಂದಹಾಗೆ, ನಟ ಸತೀಶ್ ಸದ್ಯಕ್ಕೆ 'ಬ್ರಹ್ಮಚಾರಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ 'ಅಯೋಗ್ಯ-2' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಬ್ರಹ್ಮಚಾರಿ ಚಿತ್ರಕ್ಕೆ ಸತೀರ್ಶ ಅವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿದ್ದು, ಅಯೋಗ್ಯ2 ಚಿತ್ರಕ್ಕೆ 'ಅಯೋಗ್ಯ' ಚಿತ್ರದಲ್ಲಿ ಜೋಡಿಯಾಗಿದ್ದ ಅದೇ ನಟಿ ರಚಿತಾ ರಾಮ್ ಜೋಡಿಯಾಗಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿಮ ಒಂದಾದ ಮೇಲೆ ಮತ್ತೊಂದರಂತೆ ಚಿತ್ರಗಳನ್ನು ಮಾಡುತ್ತಿರುವ ಸತೀಶ್ ನೀನಾಸಂ ಅವರು ಇದೀಗ ತಮ್ಮ ಸಾಮಾಜಿಕ ಕಳಕಳಿಯನ್ನು ಸಹ ತೋರಸತೊಡಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌