ಆ್ಯಪ್ನಗರ

ಬಾಲಿವುಡ್‌ ಅಂಗಳಕ್ಕೆ ನೀನಾಸಂ ಸತೀಶ್‌

ಸತೀಶ್‌ ಬಾಲಿವುಡ್‌ ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಡಲಿದ್ದಾರಂತೆ. ಶೀಘ್ರದಲ್ಲಿಯೇ ಚಿತ್ರದ ಫಸ್ಟ್‌ ಲುಕ್‌ ಸಹ ಬಿಡುಗಡೆಯಾಗಲಿದೆ.

Vijaya Karnataka Web 18 Sep 2017, 11:45 am
ರಂಗಭೂಮಿಯಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರತಿಭೆಗಳಲ್ಲಿ ನೀನಾಸಂ ಸತೀಶ್‌ ಸಹ ಒಬ್ಬರು. ಆರಂಭದಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸುತ್ತಿದ್ದ ಸತೀಶ್‌, 'ಲೂಸಿಯಾ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಂಡು ಕಮಾಲ್‌ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.
Vijaya Karnataka Web kannada actor satish entry to bollywood
ಬಾಲಿವುಡ್‌ ಅಂಗಳಕ್ಕೆ ನೀನಾಸಂ ಸತೀಶ್‌


ಲೂಸಿಯಾ ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ನೀನಾಸಂ ಸತೀಶ್‌ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟ. ಸತೀಶ್‌ ಅಭಿನಯದ 'ಅಯೋಗ್ಯ' ಮತ್ತು 'ಗೋದ್ರಾ' ಚಿತ್ರಗಳ ಶೂಟಿಂಗ್‌ ಜೋರಾಗಿ ನಡೆಯುತ್ತಿದೆ. ಈ ನಡುವೆ ಸತೀಶ್‌ ಒಂದು ಭರ್ಜರಿ ಸುದ್ದಿ ನೀಡಿದ್ದಾರೆ.

ಆ ಸುದ್ದಿ ಏನಪ್ಪಾ ಅಂದ್ರೆ ಸತೀಶ್‌ ಬಾಲಿವುಡ್‌ ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಡಲಿದ್ದಾರಂತೆ. ಶೀಘ್ರದಲ್ಲಿಯೇ ಚಿತ್ರದ ಫಸ್ಟ್‌ ಲುಕ್‌ ಸಹ ಬಿಡುಗಡೆಯಾಗಲಿದೆ. ತಮ್ಮ ಟ್ವಿಟರ್‌ ಮೂಲಕ ಈ ಸುದ್ದಿಯನ್ನು ಬಹಿರಂಗಪಡಿಸಿರುವ ಸತೀಶ್‌, 'ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ನೀವು ಕೊಟ್ಟ ನಿರಂತರ ಬೆಂಬಲ ಹೀಗೆ ಇರಲಿ. ಶೀಘ್ರದಲ್ಲಿ ಮೊದಲ ವಿನ್ಯಾಸ ಬಿಡುಗಡೆಯಾಗಲಿವೆ' ಎಂದು ಬರೆದುಕೊಂಡಿದ್ದಾರೆ.

ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ನೀವುಕೊಟ್ಟ ನಿರಂತರ ಬೆಂಬಲ ಹೀಗೆ ಇರಲಿ. ಶೀಘ್ರದಲ್ಲಿ ಮೊದಲ ವಿನ್ಯಾಸ ಬಿಡುಗಡೆಯಾಗಲಿವೆ.. pic.twitter.com/3Q7Gm6KP1y — Sathish Ninasam (@SathishNinasam) September 17, 2017 ಕನ್ನಡ ಚಿತ್ರರಂಗದ ಜತೆ ತಮಿಳು ಹಾಗೂ ಬಾಲಿವುಡ್‌ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರ ಸಾಲಿಗೆ ಈಗ ನೀನಾಸಂ ಸತೀಶ್‌ ಸೇರಿದ್ದಾರೆ. ಕಿಚ್ಚ ಸುದೀಪ್‌, ದಿಗಂತ್‌ ಹಾಗೂ ಇನ್ನಿತರ ಕನ್ನಡ ಕಲಾವಿದರು ಬಾಲಿವುಡ್‌ ಚಿತ್ರಗಳಲ್ಲಿ ಅಭಿನಯಿಸಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿಯೇ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌